ಕೊರೊನಾ ಸೋಂಕು ಇಳಿಕೆ:ಸಾವಿನ ಸಂಖ್ಯೆ ಸಂಖ್ಯೆ ಏರಿಕೆ

ಬೆಂಗಳೂರು, ಫೆ.7- ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 6,151 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ‌. 6.19 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಪ್ರತಿಶತ ಸಂಖ್ಯೆ ಶೇ.0.79 ರಷ್ಟು ಇದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 97,781 ಕ್ಕೆ ಇಳಿಕೆಯಾಗಿದೆ. ಇಂದು 49 ಮಂದಿ ಸಾವನ್ನಪ್ಪಿದ್ದಾರೆ ಅವಧಿಯಲ್ಲಿ 16,802 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

ರಾಜಧಾನಿಯಲ್ಲಿ ಸೋಂಕು ಇಳಿಕೆ

ಬೆಂಗಳೂರಿನಲ್ಲಿ ಇಂದು 2,718 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.ಇದು ಸಹಜವಾಗಿ ಆತಂಕ ಇನ್ನಷ್ಟು ಹೆಚ್ಚು ಮಾಡಿದೆ.

ರಾಜಧಾನಿಯಲ್ಲಿ ಇಂದು 6,726;ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಇಂದು 15 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ ‌ 39,02,309;ಕ್ಕೆ ಏರಿಕೆಯಾಗಿದೆ.ಇಲ್ಲಿಯ ತನಕ 37,75,799 ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 39,396 ಕ್ಕೆ ಏರಿಕೆ.

99 ಸಾವಿರ ಮಂದಿಗೆ ಪರೀಕ್ಷೆ:

ರಾಜ್ಯದಲ್ಲಿ ಇಂದು 99,254 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 6,28,02,900 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನ ಪ್ರಕರಣ

ಜಿಲ್ಲೆ ಎಷ್ಟು

  • ಬಾಗಲಕೋಟೆ- 60
  • ಬಳ್ಳಾರಿ – 154
  • ಬೆಳಗಾವಿ – 321
  • ಬೆಂಗಳೂರು ಗ್ರಾಮಾಂತರ- 70
  • ಬೆಂಗಳೂರು ನಗರ. – 2,718
  • ಬೀದರ್ 34
  • ಚಾಮರಾಜನಗರ- 115
  • ಚಿಕ್ಕಬಳ್ಳಾಪುರ- 102
  • ಚಿಕ್ಕಮಗಳೂರು- 51
  • ಚಿತ್ರದುರ್ಗ- 161
  • ದಕ್ಷಿಣ ಕನ್ನಡ – 90
  • ದಾವಣಗೆರೆ- 35
  • ಧಾರವಾಡ- 149
  • ಗದಗ- 31
  • ಹಾಸನ- 219
  • ಹಾವೇರಿ- 102
  • ಕಲಬುರಗಿ- 117
  • ಕೊಡಗು- 195
  • ಕೋಲಾರ- 77
  • ಕೊಪ್ಪಳ- 133
  • ಮಂಡ್ಯ- 182
  • ಮೈಸೂರು- 285
  • ರಾಯಚೂರು- 49
  • ರಾಮನಗರ – 25
  • ಶಿವಮೊಗ್ಗ- 177
  • ತುಮಕೂರು- 210
  • ಉಡುಪಿ- 85
  • ಉತ್ತರ ಕನ್ನಡ- 106
  • ವಿಜಯಪುರ – 73
  • ಯಾದಗಿರಿ- 25

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *