ವಿಧಾನ ಪರಿಷತ್‌ ಚುನಾವಣೆಗೆ ಪದವೀಧರ ಮತದಾರರ ನಿರಾಸಕ್ತಿ

ಹೈಲೈಟ್ಸ್‌:

  • ಸುಶಿಕ್ಷಿತರ ಜಿಲ್ಲೆಗಳಿರುವ ನೈರುತ್ಯ ಕ್ಷೇತ್ರದಲ್ಲಿ ಕೇವಲ 85090 ಮಂದಿ ನೋಂದಣಿ
  • ಹೆಚ್ಚಿನ ವಿದ್ಯಾವಂತರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಆಸಕ್ತಿ ವಹಿಸುತ್ತಿಲ್ಲ
  • ಸರಕಾರ, ಜಿಲ್ಲಾಡಳಿತ ಕೂಡಾ ಹೆಚ್ಚು ಮುತುವರ್ಜಿ ವಹಿಸುತ್ತಿಲ್ಲ

ಮಂಗಳೂರು : ರಾಜ್ಯದಲ್ಲಿ ವಿಧಾನ ಪರಿಷತ್ತಿನ ಮೂರು ಪದವೀಧರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ ಜೂ.3 ರಂದು ನಡೆಯಲಿದ್ದು, ಲಕ್ಷಾಂತರ ಮಂದಿ ಪದವೀಧರರಿದ್ದರೂ, 3,63,573 ಮಂದಿ ಮಾತ್ರ ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಅದರಲ್ಲೂ ಸುಶಿಕ್ಷಿತರ ಜಿಲ್ಲೆಗಳಿರುವ ನೈರುತ್ಯ ಕ್ಷೇತ್ರದಲ್ಲಿ ಕೇವಲ 85090 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಸುಶಿಕ್ಷಿತರ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ಹೊಧಿನ್ನಾಧಿಳಿ ಮತ್ತು ಚೆನ್ನಗಿರಿ ತಾಲೂಕು ವ್ಯಾಪ್ತಿಯ ನೈಋುತ್ಯ ಪದವೀಧರರ ಕ್ಷೇತ್ರದಲ್ಲಿ 30 ವಿಧಾನಸಭೆ ಕ್ಷೇತ್ರಗಳಿದ್ದು, 60 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ.

ನೈಋುತ್ಯ ಕ್ಷೇತ್ರದಲ್ಲಿ ಸುಮಾರು 15 ಲಕ್ಷ ಪದವೀಧರ ಮತದಾರರು ಇರಬಹುದೆಂದು ಅಂದಾಜಿಸಲಾಗಿದೆ. 85,090 ಮಂದಿ ಮಾತ್ರನೋಂದಣಿ ಮಾಡಿಕೊಂಡಿದ್ದು, ಅದರಲ್ಲೂ ಬಹುಪಾಲು 27,702 ಮತದಾರರು ಶಿವಮೊಗ್ಗ ಜಿಲ್ಲೆಯವರದ್ದು.

ಈ ಕ್ಷೇತ್ರ ಮಾತ್ರವಲ್ಲ, ರಾಜ್ಯದ ಇತರ ಪದವೀಧರ ಕ್ಷೇತ್ರಗಳ ಕತೆಯೂ ಭಿನ್ನವಿಲ್ಲ. ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳನ್ನೊಳಗೊಂಡ ಈಶಾನ್ಯ ಪದವೀಧರ ಕ್ಷೇತ್ರದಲ್ಲೂಕೇವಲ 1,56,623 ಮತದಾರರ ನೋಂದಣಿಯಾಗಿದೆ.

ಬೆಂಗಳೂರು ಗ್ರಾಮಾಂತರ, ರಾಮನಗರ, ಬಿಬಿಎಂಪಿ ಕೇಂದ್ರ, ಬಿಬಿಎಂಪಿ ಉತ್ತರ, ಬಿಬಿಎಂಪಿ ದಕ್ಷಿಣ ಮತ್ತು ಬೆಂಗಳೂರು ನಗರ ವ್ಯಾಪ್ತಿಯ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿಕೂಡಾ 1,21,860 ಮಂದಿ ಮತದಾರರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ.

ಯಾಧಿವುದೇ ಪದವಿ ಶಿಕ್ಷಣ ಪೂರೈಸಿ ಮೂರು ವರ್ಷದ ಬಳಿಕ ಸರಕಾರ ಅಧಿಸೂಚನೆ ಹೊರಡಿಸಿದ ಬಳಿಕ ಪಧಿದವಿ ಪ್ರಮಾಣಪತ್ರದೊಂದಿಗೆ ಹೆಸರು ನೋಂದಣಿ ಮಾಡಿದರೆ ಮಾತ್ರ ವಿಧಾನ ಪರಿಷತ್‌ ಪದವೀಧರರ ಚುನಾವಣೆಯಲ್ಲಿಮತ ಚಲಾಯಿಸಲು ಅರ್ಹತೆ ಪಡೆಯುತ್ತಾರೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ತಾಲೂಕು ಕಚೇರಿಗೆ ತೆರಳಿ ನಿಗದಿತ ಅರ್ಜಿ ಭರ್ತಿ ಮಾಡಿ, ಪದವಿ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌ ಪ್ರತಿ ಸಲ್ಲಿಸಬೇಕು. ಒಮ್ಮೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿ ಮತ ಚಲಾಯಿಸಿದರೂ, ಆರು ವರ್ಷಗಳ ಬಳಿಕ ಮತ್ತೆ ನೋಂದಣಿ ಮಾಡಿದರೆ ಮಾತ್ರ ಮತದಾನ ಮಾಡಲು ಅವಕಾಶ ಸಿಗುತ್ತದೆ.

ಹೆಚ್ಚಿನ ಪದವೀಧರರು ಉದ್ಯೋಗ ಅರಸುವ ಸಂದರ್ಭದಲ್ಲಿಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಗೋಜಿಗೆ ಹೋಗುವುದಿಲ್ಲ. ಉದ್ಯೋಗ ಪಡೆದವರಿಗೆ ಮತದಾನದ ಬಗ್ಗೆ ನಿರ್ಲಕ್ಷ್ಯ. ಸರಕಾರಿ ಕಚೇರಿಗೆ ತೆರಳಿ, ನೋಂದಣಿ ಮಾಡಿಸಿಕೊಳ್ಳಲು ಹೆಚ್ಚಿನವರಿಗೆ ಆಸಕ್ತಿಯೇ ಇಲ್ಲ.

ಕಾಂಗ್ರೆಸ್‌- ಬಿಜೆಪಿ ವತಿಯಿಂದ ಪದವೀಧರರು, ಶಿಕ್ಷಕರ ಹೆಸರು ನೋಂದಣಿಗೆ ಅರ್ಜಿ ವಿತರಣೆ ಮಾಡಲಾಗುತ್ತದೆ. ಬಿಜೆಪಿಯವರು ಕೊಟ್ಟ ಅರ್ಜಿ ಮರಳಿ ಪಡೆದು, ಕಚೇರಿಗೆ ಸಲ್ಲಿಸಿ, ನೋಂದಣಿ ಮಾಡಿಸಿಕೊಳ್ಳುತ್ತಾರೆ. ಕೆಲವು ಟಿಕೆಟ್‌ ಆಕಾಂಕ್ಷಿಗಳು ತಮಗೆ ಮತ ಬೀಳುವವರಿಂದ ಮಾತ್ರ ಆಸಕ್ತಿಯಿಂದ ನೋಂದಣಿ ಮಾಡಿಸಿಕೊಂಡಿದ್ದಾರೆ.

ಕ್ಷೇತ್ರ ಮತದಾರರು

ನೈಋುತ್ಯ ಪದವೀಧರರ ಕ್ಷೇತ್ರ- 85090

ಈಶಾನ್ಯ ಪದವೀಧರರ ಕ್ಷೇತ್ರ- 156,623

ಬೆಂಗಳೂರು ಪದವೀಧರರ ಕ್ಷೇತ್ರ- 1,21,860

ಪದವೀಧರರ ಜತೆ ಅರ್ಹ ಶಿಕ್ಷಕರ ಹೆಸರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಿಲ್ಲ. ಆರು ವರ್ಷಕ್ಕೆ ಮತ್ತೆ ಸೇರ್ಪಡೆ ಕಿರಿಕಿರಿ, ದಾಖಲೆಗಳನ್ನು ಕೊಡಬೇಕಾದ ಸ್ಥಿತಿಯಿಂದ ಈ ಪರಿಸ್ಥಿತಿ ಇದೆ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಸ್ಪಂದನ ಸಿಗದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮೊರೆ ಹೋಗಲಿದ್ದೇವೆ.

-ಭಾಸ್ಕರ ಶೆಟ್ಟಿ ಟಿ., ನೈಋುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *