ಡ್ರಗ್ಸ್‌ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳಿಲ್ವಾ?: ಮೈಸೂರಿನಲ್ಲಿ ವಾಟಾಳ್ ಪ್ರಶ್ನೆಗಳ ಸುರಿಮಳೆ

ಡ್ರಗ್ಸ್‌ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಇಲ್ವಾ? ಎಂದಿರುವ ವಾಟಾಳ್ ನಾಗರಾಜ್ ತನಿಖೆ ಮಾಡದೆ ದಿಕ್ಕು ತಪ್ಪಿಸಿದ್ರೆ. ಮುಂದಿನ ಮಂಗಳವಾರ ಸಿಸಿಬಿ ಕಚೇರಿ ಮುಂದೆ ಸತ್ಯಾಗ್ರಹ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ.

ಮೈಸೂರು: ಡ್ರಗ್ಸ್‌ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಇಲ್ವಾ? ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ, ಸಿಎಂ ಯಡಿಯೂರಪ್ಪ ಸತ್ಯ ಒಪ್ಪಿಕೊಳ್ಳಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಹೇಳಿದರು.

ಮೈಸೂರಿನಲ್ಲಿ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ಕುರಿತು ಮಾತನಾಡಿ, ”ನಟ ನಟಿಯರ ಮೇಲೆ ಡ್ರಗ್ಸ್‌ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಜೈಲು, ಆಸ್ಪತ್ರೆ ಅಂತ ಓಡಾಡಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳು ಇಲ್ವಾ? ಈ ಪ್ರಕರಣದಲ್ಲಿ ಮಂತ್ರಿಗಳು, ಎಂಎಲ್ಎಗಳು ಯಾರು ಇಲ್ವಾ? ಗುಟ್ಕಾ ತಿಂದವರು ಪೊಲೀಸರು, ಅಧಿಕಾರಿಗಳು ಯಾರು ಇಲ್ವಾ? ಸರಿಯಾದ ತನಿಖೆ ಮಾಡದೆ ದಿಕ್ಕು ತಪ್ಪಿಸಿದ್ರೆ. ಮುಂದಿನ ಮಂಗಳವಾರ ಸಿಸಿಬಿ ಕಚೇರಿ ಮುಂದೆ ಸತ್ಯಾಗ್ರಹ ಮಾಡ್ತಿನಿ,” ಎಂದು ಎಚ್ಚರಿಕೆ ನೀಡಿದರು.

”ಡ್ರಗ್ಸ್‌ ಮಾಫಿಯಾ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಆದರೆ ನಿಮಗೆ ಯಾರ ಒತ್ತಡ ಇದೆ ಹೇಳಿ. ಎಲ್ಲರ ಹೆಸರು ಬಹಿರಂಗವಾಗಬೇಕು. ಇದು ನನ್ನ ಒತ್ತಾಯ. ಈ ಪ್ರಕರಣದಲ್ಲಿ ಜಮೀರ್‌ ಅಹ್ಮದ್‌ ಅಥವಾ ಸಚಿವರೇ ಇರಲಿ ಎಲ್ಲರನ್ನು ಬಂಧಿಸಬೇಕು,” ಎಂದು ಆಗ್ರಹಿಸಿದರು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *