ದೆಹಲಿಗೆ ಆಗಮಿಸಿದ್ದ ನೇಪಾಳದ ವಿದೇಶಾಂಗ ಸಚಿವೆ ಜೊತೆ ಸಭೆ ನಡೆಸಲು ಆಸಕ್ತಿ ತೋರದ ಭಾರತೀಯ ಅಧಿಕಾರಿಗಳು!
ನವದೆಹಲಿ: ನೇಪಾಳದ ವಿದೇಶಾಂಗ ಸಚಿವ ಅರ್ಜು ರಾಣಾ ದೇವುಬಾ ಅವರು ಕಳೆದ ವಾರ ದೆಹಲಿಗೆ ವೈಯಕ್ತಿಕ ಕಾರಣಗಳಿಗಾಗಿ ಭೇಟಿ ನೀಡಿದ್ದರು, ಈ ವೇಳೆ ಅವರು ಭಾರತ ಸರ್ಕಾರದ ಕೆಲವು ಅಧಿಕಾರಿಗಳನ್ನು ಭೇಟಿ ಮಾಡಲು ಬಯಸಿದ್ದರು, ಆದರೆ ಅಗು ಸಾಧ್ಯವಾಗಲಿಲ್ಲ.
ಆರೋಗ್ಯ ತಪಾಸಣೆಗಾಗಿ ಅವರು ದೆಹಲಿಯಲ್ಲಿದ್ದರೂ, ಪ್ರಸ್ತುತ ನೇಪಾಳದ ಪ್ರಧಾನಿ ಕೆಪಿ ಒಲಿ ಅವರಿಗೆ ಆಹ್ವಾನವನ್ನು ನಿಗದಿಪಡಿಸುವ ಉದ್ದೇಶದಿಂದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅವರು ಆಶಿಸುತ್ತಿದ್ದರು”ಎಂದು ಮೂಲವೊಂದು ತಿಳಿಸಿದೆ. ಈ ವರ್ಷ ಜುಲೈ 15 ರಂದು ಅಧಿಕಾರಕ್ಕೆ ಬಂದ ನಂತರ ಪಿಎಂ ಒಲಿ ಭಾರತಕ್ಕೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ, ಕಠ್ಮಂಡುವಿಗೆ ಹಿಂತಿರುಗುವ ಮೊದಲು, ದೇವುಬಾ ಅವರು ಭಾರತೀಯ ಜನತಾ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ನೇತೃತ್ವದಲ್ಲಿ ಇಂಡಿಯಾ ಫೌಂಡೇಶನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇಬಾ ಅವರು ಆಗಸ್ಟ್ನಲ್ಲಿ ಅಧಿಕೃತವಾಗಿ ಭಾರತಕ್ಕೆ ಭೇಟಿ ನೀಡಿದಾಗ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರನ್ನು ಭೇಟಿಯಾಗಿದ್ದರು.
ಈ ತಿಂಗಳ ಆರಂಭದಲ್ಲಿ ಪ್ರಧಾನಿ ಒಲಿ ಅವರು ಚೀನಾಕ್ಕೆ ಭೇಟಿ ನೀಡಿ ಒಂಬತ್ತು ಅಂಶಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾಗಿದ್ದರು. ಇಬ್ಬರ ನಡುವಿನ ಮಾತುಕತೆಗಳು ವ್ಯಾಪಾರ ಮತ್ತು ಪ್ರವಾಸೋದ್ಯಮದ ಇತರ ವಿಷಯಗಳ ಮೇಲೆ ಕೇಂದ್ರೀಕೃತವಾಗಿತ್ತು. ಪಿಎಂ ಓಲಿ ಅವರ ಹಿಂದಿನ ಪ್ರಧಾನಿ ಪ್ರಚಂಡ ಅವರು ಭಾರತಕ್ಕೆ ತಮ್ಮ ಮೊದಲ ಅಧಿಕೃತ ಸಾಗರೋತ್ತರ ಭೇಟಿ ನೀಡಿದ್ದರು ಮತ್ತು ಆ ವೇಳೆ ಅವರಿಗೆ ಉತ್ತಮ ಸ್ವಾಗತ ದೊರೆತಿತ್ತು ಎಂಬುದನ್ನು ಸ್ಮರಿಸಬಹುದು.