ಅಶ್ಲೀಲ ಫೋಟೋ, ವಿಡಿಯೋ ತಡೆ ಕೋರಿ ದೆಹಲಿ ಹೈಕೋಟ್‌ ಮೊರೆ ಹೋದ ನಟಿ ಐಶ್ವರ್ಯಾ ರೈ!

ಹೈಲೈಟ್ಸ್‌:

  • ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಮಂಗಳವಾರ ದಿಲ್ಲಿ ಹೈಕೋರ್ಟ್‌ ಮೊರೆ.
  • ಆನ್‌ಲೈನ್‌ನಲ್ಲಿ ನನ್ನ ಹೆಸರು, ಚಿತ್ರಗಳು ಮತ್ತು ಎಐ ಆಧಾರಿತ ಅಶ್ಲೀಲ ಕಂಟೆಂಟ್‌ ತಡೆಗೆ ನಟಿ ಅರ್ಜಿ.
  • ನನ್ನ ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸಬೇಕು ಎಂದ ನಟಿ.

ಹೊಸದಿಲ್ಲಿ: ”ನನ್ನ ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಆನ್‌ಲೈನ್‌ನಲ್ಲಿ ನನ್ನ ಹೆಸರು, ಚಿತ್ರಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಅಶ್ಲೀಲ ಕಂಟೆಂಟ್‌ ಪ್ರಸರಣವನ್ನು ತಡೆಯಬೇಕು,” ಎಂದು ಕೋರಿ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಮಂಗಳವಾರ ದಿಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತೇಜಸ್‌ ಕರಿಯಾ ಅವರು ಪ್ರತಿವಾದಿಗಳಿಗೆ ಎಚ್ಚರಿಕೆ ನೀಡುವ ಮಧ್ಯಂತರ ಆದೇಶವನ್ನು ನೀಡುವುದಾಗಿ ತಿಳಿಸಿದರು. (

ಅಸಹ್ಯ ವಿಡಿಯೋಗಳು ಫೋಟೋ ಬಳಕೆ

ತಮ್ಮ ಹೆಸರು, ಚಿತ್ರ, ವ್ಯಕ್ತಿತ್ವ ಮತ್ತು ಧ್ವನಿಗಳನ್ನು ತಮ್ಮ ಒಪ್ಪಿಗೆ ಪಡೆಯದೆ ವಾಣಿಜ್ಯ ಲಾಭಕ್ಕಾಗಿ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ಮತ್ತು ಡೀಪ್‌ ಫೇಕ್‌ ತಂತ್ರಜ್ಞಾನವನ್ನು ಬಳಸಿಕೊಂಡು ಅಸಹ್ಯ ವಿಡಿಯೋಗಳು ಮತ್ತು ಚಿತ್ರಗಳನ್ನು ಬಳಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಐಶ್ವರ್ಯಾ ರೈ ಪರ ವಕೀಲರಿಂದ ಕೋರ್ಟ್‌ಗೆ ಮನವಿ

”ನಟಿ ಐಶ್ವರ್ಯಾ ಅವರ ಹೆಸರು, ಚಿತ್ರಗಳನ್ನು ಯಾರದೋ ಲೈಂಗಿಕ ಬಯಕೆಗಳನ್ನು ಪೂರೈಸಲು ಬಳಸಲಾಗುತ್ತಿದೆ. ಇದು ದುರದೃಷ್ಟಕರ. ಕಕ್ಷಿದಾರರ ಚಿತ್ರಗಳಿರುವ ಟಿ-ಶರ್ಟ್‌ಗಳು ಮತ್ತು ಚಹಾದ ಕಪ್‌ಗಳನ್ನು (ಮಗ್‌) ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ,” ಎಂದು ಐಶ್ವರ್ಯಾ ರೈ ಪರ ವಕೀಲ ಸಂದೀಪ್‌ ಸೇಥಿ ನ್ಯಾಯಾಲಯಕ್ಕೆ ತಿಳಿಸಿದರು.

ಹೆಸರು ಸೇರ್ಪಡೆಗೆ ಆಧಾರ್‌ ಪರಿಗಣಿಸಿ

ಬಿಹಾರದಲ್ಲಿ ನಡೆಯುತ್ತಿರುವ ಮತಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಹೆಸರು ಸೇರ್ಪಡೆಗೆ 12ನೇ ದಾಖಲೆಯಾಗಿ ಆಧಾರ್‌ ಕಾರ್ಡ್‌ ಪರಿಗಣಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ. ಇದೇ ವೇಳೆ, ‘‘ಆಧಾರ್‌ ಕಾರ್ಡ್‌ ಪೌರತ್ವದ ಪುರಾವೆಯಲ್ಲ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ನಿವಾಸಿ ದೃಢೀಕರಣದ ಗುರುತಿನ ಚೀಟಿಯಷ್ಟೆ. ಆಧಾರ್‌ ಕಾರ್ಡ್‌ ನಕಲಿಯೇ ಅಥವಾ ನೈಜವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು,’’ ಎಂದು ಕೋರ್ಟ್‌ ಸೂಚನೆ ನೀಡಿದೆ.

ಮತಪಟ್ಟಿ ಪರಿಷ್ಕರಣೆ, ಕರಡು ಮತಪಟ್ಟಿ ಪ್ರಕಟಿಸಿದ ಆಯೋಗದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರ್ಯಕಾಂತ್‌ ಹಾಗೂ ನ್ಯಾ.ಜ್ಯೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ, ‘‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅಥವಾ ತೆಗೆದುಹಾಕುವ ಪ್ರಕ್ರಿಯೆಗೆ ನಿವಾಸಿ ದೃಢೀಕರಣ ಗುರುತಿನ ಚೀಟಿಯಾಗಿ ಆಧಾರ್‌ ಕಾರ್ಡ್‌ ಪರಿಗಣಿಸಬೇಕು. ಪ್ರಸ್ತುತ ಇತರೆ 11 ದಾಖಲೆಗಳ ಜತೆ ಮಾನ್ಯ ದಾಖಲೆಯಾಗಿ ಆಧಾರ್‌ ಕಾರ್ಡ್‌ ಸೇರ್ಪಡೆ ಮಾಡಬೇಕು,’’ ಎಂದು ಮೌಖಿಕವಾಗಿ ನಿದೇರ್ಶನ ನೀಡಿತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *