ಸ್ಯಾಂಡಲ್ವುಡ್ ನಟನಿಗೆ ಡಬಲ್ ಸಂಕಷ್ಟ..!
ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿರುವ ಸ್ಟಾರ್ ನಟ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಯಾಂಡಲ್ವುಡ್ ನಟ ಮಾಡಿರುವ ಎರಡು ತಪ್ಪುಗಳಿಂದ ಸಿನಿ ಭವಿಷ್ಯಕ್ಕೆ ಕಂಟಕವಾಗಿದೆ. ಹಾಗಾದ್ರೆ ಯಾರು ಆ ನಟ, ಆ ನಟ ಮಾಡಿರುವ ತಪ್ಪೇನು? ಈ ಸ್ಟೋರಿ ನೋಡಿ…
ಸಿಂಪಲ್ ಸುನಿ ನಿರ್ದೇಶನದ ಮೂಲಕ ಸ್ಯಾಂಡಲ್ವುಡ್ನಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ್ದ ನಟ ಧನ್ವೀರ್ ಗೌಡ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನೈಟ್ ಸಫಾರಿ ನಿಷೇಧವಿದ್ದರೂ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಟ ಧನ್ವೀರ್ ಸಫಾರಿ ಮಾಡಿ ನಿಯಮ ಉಲ್ಲಂಘಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿತ್ತು.
ಈಗ ನಟ ಧನ್ವೀರ್ ಮತ್ತೋದು ಅವಾಂತರವನ್ನು ಮೈಗೆಳೆದುಕೊಂಡಿದ್ದಾರೆ. ಮೈಸೂರಿನ ಮತ್ತಿಗೋಡು ಆನೆ ಶಿಬಿರಕ್ಕೆ ಅನುಮತಿ ಇಲ್ಲದೇ ಭೇಟಿ ನೀಡಿ ಸಾಕಾನೆ ಮಹೇಂದ್ರನ ಮೇಲೆ ಹತ್ತಿ ಸವಾರಿ ಮಾಡಿದ್ದರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಅವರು ಅಪ್ಲೋಡ್ ಮಾಡಿರುವ ವಿಡಿಯೋ ಈಗ ಅವರಿಗೇ ಮಾರಕವಾಗಿ ಪರಿಣಮಿಸಿದೆ.
ಅನುಮತಿ ಇಲ್ಲದೇ ಅಕ್ರಮವಾಗಿ ಆನೆ ಶಿಬಿರಕ್ಕೆ ಪ್ರವೇಶ ಮಾಡಿರುವುದೂ ಅಲ್ಲದೇ ಆನೆ ಮೇಲೆ ಸವಾರಿ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ಧನ್ವೀರ್ ಮೇಲೆ FIR ದಾಖಲು ಮಾಡಿದೆ. FIRನಲ್ಲಿ ನಟ ಧನ್ವೀರ್ ಜೊತೆ 6 ಮಂದಿಯ ವಿರುದ್ಧ ಕೇಸ್ ದಾಖಲಾಗಿದೆ. ಜೊತೆಗೆ ನಟ ಧನ್ವೀರ್ನನ್ನು ಜನಸಾಮಾನ್ಯನಂತೆ ಪರಿಗಣಿಸದೇ, ಅತಿಥಿಯಂತೆ ಉಪಚರಿಸಿದಕ್ಕಾಗಿ ಕಾರಣ ಕೇಳಿ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಿರುವುದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ