ಬೆಂಗಳೂರಿಗೆ ಎಂಟ್ರಿ ಕೊಡ್ತಿದೆ ಡೆಡ್ಲಿ ಗ್ಯಾಂಗ್…! ಎಟಿಎಂನಿಂದ ಹಣ ಡ್ರಾ ಮೊದಲು ಇಲ್ಲಿ ನೋಡಿ !

ಸಿಲಿಕಾನ್​ ಜನರೇ ಹುಷಾರಾಗಿರಿ ಹಣ ಕ್ಯಾರಿ ಮಾಡುವಾಗ ಇದ್ದಕ್ಕಿದ್ದಂತೆ ನಿಮ್ಮ ಹಣ ಮಾಯವಾಗುತ್ತದೆ. ಯಾಕಂದ್ರೆ ಸಿಟಿಗೆ ಮತ್ತೆ ಎಂಟ್ರಿಯಾಗಿದ್ದಾರೆ ಓಜಿಕುಪ್ಪಂ ಗ್ಯಾಂಗ್​. ಕೆಲ ವರ್ಷಗಳ ಹಿಂದೆ ಬೆಂಗಳೂರು ಜನರ ನಿದ್ದೆ ಕೆಡಿಸಿದ್ದ ಓಜಿಕುಪ್ಪಂ ಗ್ಯಾಂಗ್​ವೊಂದು ಆಂಧ್ರದಿಂದ ರೈಲುಗಳ ಮೂಲಕ ನಗರಕ್ಕೆ ಎಂಟ್ರಿಯಾಗಿದ್ದಾರೆ.

ಇವರು ರೈಲ್ವೇ ನಿಲ್ದಾಣದ ಆಸುಪಾಸಿನಲ್ಲಿ ವಾಸಮಾಡುತ್ತಿದ್ದು. ಜನರನ್ನು ಬೇರೆಡೆ ಆಕರ್ಷಸಿ ಬ್ಯಾಗ್​ನಲ್ಲಿದ್ದ ಅಮೂಲ್ಯ ವಸ್ತುಗಳನ್ನು ತೆಗೆಯುವುದರಲ್ಲಿ ಎತ್ತಿದ ಕೈ. ಅದರಲ್ಲೂ ಪ್ರಮುಖವಾಗಿ ಬ್ಯಾಂಕ್​ಗಳಿಗೆ, ಎಟಿಎಂಗಳಿಗೆ ಹೋಗಿ ಬರುವವರಿಗೆಯೇ ಟಾರ್ಗೆಟ್​ ಮಾಡುತ್ತಾರೆ.

ಬೆಂಗಳೂರಿನ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಕೇಸ್​ ದಾಖಲಾಗಿ ಅರೆಸ್ಟ್​ ಆಗಿ ಜೈಲು ಸೇರಿದ್ದ ಈ ಗ್ಯಾಂಗ್​ ಈಗ ಬೇಲ್​ ಪಡೆದು ರಿಲೀಸ್​ ಆಗಿದ್ದಾರೆ. ಇದೀಗ ಬೆಂಗಳೂರಿನ ಜನರಿಗೆ ಮತ್ತೆ ಓಜಿ ಕುಪ್ಪಂ ಗ್ಯಾಂಗ್​ನಿಂದ ಎಚ್ಚರವಾಗಿರಬೇಕಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *