ಕೊರೋನಾ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದ ಭಾರತ..! ಬಹುಪರಾಕ್​ ಎಂದ ಮೋದಿ..!

ಇಡೀ ಜಗತ್ತನ್ನೇ ಬುಡಮೇಲು ಮಾಡಿ ಅದೆಷ್ಟೋ ಜನರ ಜೀವವನ್ನು ಬಲಿಪಡೆದಿದ್ದು ಕೊರೋನಾ. ವಿಜ್ಞಾನಿಗಳು ಔಷಧಿಯ ಹುಡುಕಾಟಕ್ಕಾಗಿ ನಡೆಸಿದ ಪ್ರಯತ್ನವಂತೂ ನಮ್ಮ ಊಹೆಗೂ ಮೀರಿದ್ದು. ಹೀಗಿರುವಾಗ ಭಾರತೀಯರಿಗೆ ಒಂದು ಶುಭಸುದ್ದಿ ಬಂದಿದೆ. ಏನದು ಸುದ್ದಿ ಗೊತ್ತಾ..?

ಔಷಧಿಯ ಈ ಹುಡುಕಾಟದ ಫಲವಾಗಿ ಭಾರತದ ಎರಡು ಔಷಧಿಗಳು ಸಕ್ಸಸ್​ ಕಂಡಿವೆ. ಭಾರತದ ಕೊವ್ಯಾಕ್ಸಿನ್, ಕೋವಿಶೀಲ್ಡ್​ ಲಸಿಕೆಗಳು ತುರ್ತು ಬಳಕೆಗೆ ಅನುಮತಿಯನ್ನು ಪಡೆದಿವೆ. ಅಷ್ಟೇ ಅಲ್ಲದೇ ಭಾರತದ ಈ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತಿಸಿದೆ. ಕೋವಿಶೀಲ್ಡ್ ಅನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಫಾರ್ಮಾ ಅಸ್ಟ್ರಾಜೆನೆಕಾ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಅಲ್ಲದೇ ಭಾರತದ ಸೀರಮ್ ಸಂಸ್ಥೆ ಅವರ ಉತ್ಪಾದನೆ ಮತ್ತು ಪ್ರಯೋಗ ಪಾಲುದಾರ.

ಕೋವ್ಯಾಕ್ಸಿನ್ ಕೋವಿಡ್ -19 ವಿರುದ್ಧ ಭಾರತದ ಮೊದಲ ಸ್ಥಳೀಯ ಲಸಿಕೆಯಾಗಿದೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.

ಭಾರತದ ಈ ಸಾಧನೆಗೆ ಪ್ರಧಾನಿ ಬಹುಪರಾಕ್​ ಎಂದಿದ್ದಾರೆ. ಭಾರತದ ವೈದ್ಯರ, ವಿಜ್ಞಾನಿಗಳ ಮಹತ್ತರ ಸಾಧನೆಯನ್ನು ಶ್ಲಾಘಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಅಲ್ಲದೇ ಕೊರೋನಾ ವಾರಿಯರ್ಸ್​ಗೂ ಅಭಿನಂದನೆ ಸಲ್ಲಿಸಿದ್ದಾರೆ. ಲಸಿಕೆ ಕಂಡುಹಿಡಿದ ವೈದ್ಯರು, ವಿಜ್ಞಾನಿಗಳಿಗೆ  ಪ್ರಧಾನಿ ಮೋದಿ ಟ್ವೀಟ್​ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *