ಬೆಂಗಳೂರು ವಿವಿ ಕುಲಪತಿ ವಿರುದ್ಧ ನಿಲ್ಲದ ಆಕ್ರೋಶ ..! ಕುಲಪತಿ ದರ್ಬಾರ್ ವಿರುದ್ಧ ಸಿಂಡಿಕೇಟ್ ಆಕ್ರೋಶ
ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಕುಲಪತಿ ದರ್ಬಾರ್ ವಿರುದ್ಧ ಆಕ್ರೋಶ ಹೆಚ್ಚಾಗ್ತಲೇ ಇದೆ. ಕುಲಪತಿ ಡಾ. ಕೆ.ಆರ್. ವೇಣುಗೋಪಾಲ್ ವಿರುದ್ಧ ಸಿಂಡಿದೆದ್ದ ಸಿಂಡಿಕೇಟ್ ಸದಸ್ಯರು ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಅಶ್ವಥ್ ನಾರಾಯಣ್ಗೆ ದೂರು ನೀಡಿದ್ದಾರೆ.
ಕುಲಪತಿ ಏಕಪಕ್ಷೀಯ ನಿರ್ಧಾರ ಮಾಡ್ತಿದ್ದಾರೆ. ಅಧಿಕಾರ ಚಲಾಯಿಸುವ ರೀತಿ ನಡೆದುಕೊಳ್ತಿದ್ದು, ಸಿಂಡಿಕೇಟ್ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. 12 ವಿಚಾರಗಳಲ್ಲಿ ನಮ್ಮ ಅಭಿಪ್ರಾಯ ಪಡೆದಿಲ್ಲ. ನಮ್ಮ ಮನವಿಗೆ ಇಲಾಖೆ ಸ್ಪಂದಿಸದೇ ಇದ್ದರೆ ಕುಲಾಧಿಪತಿಗಳಾದ ರಾಜ್ಯಪಾಲರ ಭೇಟಿ ಮಾಡಿ ಕಂಪ್ಲೇಂಟ್ ಕೊಡೋದಾಗಿ ಸಿಡಿಕೇಟ್ ಮೆಂಬರ್ಸ್ ದೂರು ಪ್ರತಿಯಲ್ಲಿ ತಿಳಿಸಿದ್ದಾರೆ. ಏಳು ಮಂದಿ ಸಿಂಡಿಕೇಟ್ ಸದಸ್ಯರು ಬೆಂಗಳೂರು ವಿವಿಯಲ್ಲಿದ್ದಾರೆ.