ಇಂಥಾ ಕೆಟ್ಟ ಸರ್ಕಾರ ಇದ್ದರೂ ಬಾಯ್​​ ಮುಚ್ಕೊಂಡು ಕೂತಿದ್ದೇನೆ..! ಏನಾದ್ರೂ ಮಾತನಾಡಿದ್ರೆ ಜಾತಿ ವಿಚಾರ ಎಳೆದು ತರ್ತಾರೆ :HDK

ರಾಜ್ಯ ಸರ್ಕಾರ ಕಮಿಷನ್​ ದಂಧೆಯಲ್ಲಿ ಮುಳುಗಿದೆ ಅಂತ ದೇವನಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಒಂದು ಕೋಟಿ ಕಾಮಗಾರಿಗೆ 10 ಲಕ್ಷ ಕಮಿಷನ್​ ಕೊಡ್ಬೇಕು. ಇಂಥಾ ಕೆಟ್ಟ ಸರ್ಕಾರ ಇದ್ದರೂ ಬಾಯ್​​ ಮುಚ್ಕೊಂಡು ಕೂತಿದ್ದೇನೆ.

ಏನಾದ್ರೂ ಮಾತನಾಡಿದ್ರೆ ಜಾತಿ ವಿಚಾರ ಎಳೆದು ತರ್ತಾರೆ. ಈ ಹಿಂದಿನ ಅನುಭವಗಳಿಂದ ಮೌನಕ್ಕೆ ಶರಣಾಗಿದ್ದೇನೆ ಅಂತ ಹೇಳಿದ್ದಾರೆ. ಬಿಜೆಪಿ ಸರ್ಕಾರ ಹೇಗೆ ನಡೀತಿದೆ ಎನ್ನೋದು ಗುತ್ತಿಗೆದಾರರಿಗೆ ಗೊತ್ತಿದೆ. ಜೆಡಿಎಸ್​ ಅನ್ನು ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ತರ್ತೇವೆ. ಬಿಜೆಪಿಯೊಂದಿಗೆ ವಿಲೀನ, ಸೆಂಟ್ರಲ್​​ ಮಿನಿಸ್ಟರ್​ ಅಂತಾ ಸುಳ್ಳು ಹಬ್ಬಿಸ್ತಾರೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *