ಟಾಲಿವುಡ್​ನಲ್ಲಿ ರಾಬರ್ಟ್​ ರಿಲೀಸ್​ಗೆ ಗ್ರೀನ್​ ಸಿಗ್ನಲ್​..! 400 ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ರಾಬರ್ಟ್​ ತೆಲುಗು ಚಿತ್ರ

ಇತ್ತೀಚೆಗೆ ನಮ್ಮ ಕನ್ನಡ ಸಿನಿಮಾಗಳು ಪರಭಾಷೆಯಲ್ಲೂ ಹೆಚ್ಚು ಸೌಂಡ್ ಮಾಡುತ್ತಿವೆ. ಏಕಕಾಲಕ್ಕೆ ಕನ್ನಡ ತೆಲುಗು, ಪ್ಯಾನ್ ಇಂಡಿಯನ್​ ಲೆವೆಲ್​ನಲ್ಲಿ ಬಿಡುಗೆಯಾಗುತ್ತಿವೆ. ಅದೇ ಸಾಲಿನಲ್ಲಿ ಚಾಲೆಂಜಿಂಗ್​ ಸ್ಟಾರ್ ಅಭಿನಯದ ರಾಬರ್ಟ್​ ಕೂಡ ಮಾರ್ಚ್​ 11ರಂದು ಟಾಲಿವುಡ್​ನಲ್ಲೂ ತೆರೆಕಾಣೋಕ್ಕೆ ಸಿದ್ದವಾಗಿತ್ತು. ಆದರೆ, ಈ ಮಧ್ಯೆ ಟಾಲಿವುಡ್​ ರಾಬರ್ಟ್​​ಗೆ ಕಿರಿಕ್​ ಮಾಡಿದ್ದು ಗೊತ್ತೇಯಿದೆ. ಹಾಗಾದ್ರೆ ನಿನ್ನೆ ನಡೆದ ಸೌತ್​​ ಇಂಡಿಯನ್​ ಫಿಲ್ಮ್ ಚೇಂಬರ್​ನಲ್ಲಿ ಏನ್​ ನಿರ್ಧಾರ ಆಯ್ತು(?) ಇಲ್ಲಿದೆ ಉತ್ತರ.

ಸ್ಯಾಂಡಲ್​​ವುಡ್​ ಸಿನಿಮಾಗಳು ಇತ್ತೀಚೆಗೆ ಪರಭಾಷೆಗಳಲ್ಲೂ ಹೆಚ್ಚು ಸುದ್ದಿ ಮಾಡುತ್ತಿವೆ. ಕನ್ನಡ ಚಿತ್ರರಂಗದ ಮಾರ್ಕೆಟ್​ ವಿಸ್ತರಿಸ್ತಾ ಇದೆ. ಕನ್ನಡದಲ್ಲೂ ಹೆಚ್ಚೆಚ್ಚು ಬಿಗ್​ ಬಜೆಟ್, ಪ್ಯಾನ್​ ಇಂಡಿಯನ್​ ಸಿನಿಮಾಗಳು ರೆಡಿಯಾಗುತ್ತಿವೆ. ಇದೇ ಸಾಲಿನಲ್ಲಿ ಚಾಲೆಂಜಿಂಗ್​ ಸ್ಟಾರ್ ಅಭಿನಯದ ರಾಬರ್ಟ್​ ಕೂಡ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿತ್ತು. ಮಾರ್ಚ್​ 11ರಂದು ಕನ್ನಡ ಮತ್ತು ತೆಲುಗಿನಲ್ಲಿ ರಾಬರ್ಟ್ ಆರ್ಭಟಕ್ಕೆ ಸಕಲ ಸಿದ್ಧತೆಗಳು ನಡೀತಿರುವಾಗಲೇ ರಾಬರ್ಟ್​ ವಿರುದ್ಧ ಕಿರಿಕ್​ ಶುರುಮಾಡಿತು ಟಾಲಿವುಡ್. ರಾಬರ್ಟ್ ತೆಲುಗು ಬಿಡುಗಡೆಗೆ ಅಲ್ಲಿನ ವಿತರಕರು ಅಡ್ಡಿ ಮಾಡಿದರು. ತೆಲುಗಿನ ಸಣ್ಣ ಬಜೆಟ್ ಸಿನಿಮಾಗಳ ಬಿಡುಗಡೆ ಇದ್ದರೂ, ಕನ್ನಡದ ಸಿನಿಮಾಗಳನ್ನು ರಿಲಿಸ್​ ಮಾಡುವಂತಿಲ್ಲ ಅಂದಿತ್ತು ಟಾಲಿವುಡ್. ತೆಲುಗು ಡಬ್ ವರ್ಷನ್​ಗಳಿಗೂ ಟಾಲಿವುಡ್​ ಅಡ್ಡಿಪಡಿಸೊಕ್ಕೆ ಶುರುಮಾಡಿದರು. ಇದೆಲ್ಲದರ ವಿರುದ್ಧ ಸ್ವತಃ ದರ್ಶನ್ ಫಿಲ್ಮ್​ ಚೇಂಬರ್​ ಮೆಟ್ಟಿಲೇರಿ ದೂರು ನೀಡಿದ್ದು ಗೊತ್ತೇಯಿದೆ.

ರಾಬರ್ಟ್​ ಚಿತ್ರತಂಡದ ಜೊತೆ ಮಾತುಕತೆ ನಡೆಸಿದ ಕರ್ನಾಟಕ ಫಿಲ್ಮ್ ಚೇಂಬರ್, ಈ ವಿಚಾರವನ್ನ ಸೌತ್​ ಇಂಡಿಯನ್​ ಫಿಲ್ಮ್ ಚೇಂಬರ್​ ಮುಂದಿಡೋದಾಗಿ ಹೇಳಿತ್ತು. ಕನಾರ್ಟಕದಲ್ಲಿ ರಾಬರ್ಟ್​ ಹವಾ ನೋಡಿ ಟಾಲಿವುಡ್​ ಒಂದ್ಕಡೆ ಬೆಚ್ಚಿ ಬಿದ್ದಿದ್ದು. ಕೊನೆಗೆ ಸೌತ್​ ಇಂಡಿಯನ್​ ಫಿಲ್ಮ್ ಚೇಂಬರ್​ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ರಾಬರ್ಟ್​ ತೆಲುಗು ರಿಲೀಸ್​ಗೆ ಅವಕಾಶ ಮಾಡಿಕೊಡಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೇ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ರಾಬರ್ಟ್’ ಸಿನಿಮಾದ ತೆಲುಗು ಅವತರಣಿಕೆ ಬಿಡುಗಡೆ ಆಗಲಿದೆ. ‘ರಾಬರ್ಟ್’ ಸಿನಿಮಾ ಬಿಡುಗಡೆ ಆಗುವ ದಿನ ತೆಲುಗಿನ ಮೂರು ಸಿನಿಮಾಗಳು ಬಿಡುಗಡೆ ಆಗಲಿವೆ. ಇದರ ಮಧ್ಯೆಯೇ ತೆಲುಗು ನೆಲದಲ್ಲಿ ರಾಬರ್ಟ್​ ಘರ್ಜನೆ ಶುರುಮಾಡಲಿದೆ. ವಿಶೇಷ ಅಂದ್ರೆ ‘ರಾಬರ್ಟ್’ ಸಿನಿಮಾದ ತೆಲುಗು ಡಬ್ ಸಿನಿಮಾದಲ್ಲಿ ಸ್ವತಃ ದರ್ಶನ್ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಇನ್ನು ಚಿತ್ರಕ್ಕೆ ತರುಣ್​ ಸುದೀರ್ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ. ಸದ್ಯ ಸ್ಯಾಂಡಲ್​ವುಡ್​ ಸಿನಿಮಾಗಳು, ಪರಭಾಷೆಯಲ್ಲೂ ಘರ್ಜನೆ ಮಾಡುತ್ತಿರೋದು ಉತ್ತಮ ಬೆಳೆವಣಿಗೆಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *