ಬೆಂಗಳೂರಿನಲ್ಲಿ ವೃದ್ಧ ದಂಪತಿಗೆ ಆವಾಜ್…! ಆತ್ಯಾಚಾರ ಕೇಸ್ ಹಾಕುವುದಾಗಿ ಬೆದರಿಕೆ…!

ಬಾಡಿಗೆ ಹಣ ಕೇಳಿದ್ದಕ್ಕೆ ತನ್ನ ಪ್ರಿಯಕರನ ಜೊತೆ ಬಂದು ವೃದ್ಧ ದಂಪತಿಗೆ ರೇಪ್​​​ ಕೇಸ್​​ ಹಾಕೋ ಬೆದರಿಸಿದ್ದ ಜೋಡಿಯನ್ನ HAL ಪೊಲೀಸರು ಬಂಧಿಸಿದ್ದಾರೆ. ಹಲವು ವರ್ಷಗಳ ಹಿಂದೆ ವೃದ್ಧ ದಂಪತಿ ಕುಂದ್ಲಹಳ್ಳಿಯ ಬಳಿಯ ಕಟ್ಟಡವನ್ನ ಭುವನಾ ಎಂಬಾಕೆಗೆ ಪಿಜಿ ನಡೆಸಲು ಬಾಡಿಗೆಗೆ ನೀಡಿದ್ರು. ಸ್ವಲ್ಪ ದಿನ ಪಿಜಿ ನಡೆಸಿದ ಭುವನಾ ನಂತ್ರ 2019 ಡಿಸೆಂಬರ್​ನಿಂದ ಬಾಡಿಗೆ ಹಣ ನೀಡಿಲ್ಲ. ಅಲ್ದೇ, ಅಂದಿನಿಂದ ಇದುವರೆಗೂ ಕಟ್ಟಡದ ವಿದ್ಯುತ್ ಮತ್ತು ವಾಟರ್ ಬಿಲ್ ಸಹ ಕಟ್ಟಿಲ್ಲ.


2019ರ ಡಿಸೆಂಬರ್​ನಿಂದ 2021ರ ಫೆಬ್ರವರಿವರೆಗೆ ಬರೋಬ್ಬರಿ ಒಂದೂವರೆ ಕೋಟಿ ಬಾಡಿಗೆ ಹಣ ಕೊಡದೇ ಹಣ ಕೇಳಲು ಹೋದಾಗ ಆವಾಜ್​ ಹಾಕ್ತಿದ್ಲು. ಅಲ್ದೇ, ದೆಹಲಿ ಮೂಲದ ರೌಡಿಶೀಟರ್ ವಿಶಾಲ್ ಎಂಬುವನಿಂದಲೂ ದಂಪತಿಗೆ ಧಮ್ಕಿ ಹಾಕಿಸಿದ್ಲು. ಈ ಹಿನ್ನೆಲೆ ವೃದ್ಧ ದಂಪತಿ ಕೋರ್ಟ್​ ಮೊರೆ ಹೋಗಿದ್ರು. ಕೋರ್ಟ್​ ಸೂಚನೆ ಮೇರೆಗೆ ಹೆಚ್‍ಎಎಲ್ ಪೊಲೀಸರು ಭುವನಾ ಮತ್ತು ವಿಶಾಲ್​ನನ್ನು ಬಂಧಿಸಿ ತನಿಖೆ ನಡೆಸ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *