ಸಚಿವ ಸಿಪಿ ಯೋಗೇಶ್ವರ್‌ಗೆ ತವರಿನಲ್ಲೇ ಮುಖಭಂಗ..! ಜೆಡಿಎಸ್‌ ಪಾಲಾದ ಸ್ವಗ್ರಾಮ ಪಂಚಾಯಿತಿ

ಹೈಲೈಟ್ಸ್‌:

  • ಎಚ್‌ಡಿಕೆ ಎದುರು ಸಚಿವ ಸಿಪಿ ಯೋಗೇಶ್ವರ್‌ಗೆ ತವರಲ್ಲೇ ಮುಖಭಂಗ
  • ಯೋಗೇಶ್ವರ್‌ ಸ್ವಗ್ರಾಮ ಚಕ್ಕೆರೆ ಗ್ರಾಮ ಪಂಚಾಯಿತಿ ಜೆಡಿಎಸ್ ತೆಕ್ಕೆಗೆ
  • ಹಾಲಿ ಸಚಿವರಾಗಿದ್ದರೂ ಬಿಜೆಪಿಗೆ ಬಂದಿದ್ದು ಕೇವಲ 2 ಸ್ಥಾನ ಮಾತ್ರ

ರಾಮನಗರ: ಸಚಿವ ಸಿಪಿ ಯೋಗೇಶ್ವರ್‌ಗೆ ತವರಲ್ಲೇ ಮುಖಭಂಗವಾಗಿದ್ದು, ಚನ್ನಪಟ್ಟಣ ತಾಲೂಕಿನ ಸ್ವಗ್ರಾಮ ಚಕ್ಕೆರೆ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಪಾರುಪತ್ಯ ಮೆರೆದಿದೆ. ಸಚಿವರ ಸ್ವಗ್ರಾಮದಲ್ಲಿಯೇ ಬಿಜೆಪಿ ಬೆಂಬಲಿತ ಸದಸ್ಯರು ಕೇವಲ 2 ಸ್ಥಾನಗಳಿಗೆ ಮಾತ್ರ ಸೀಮಿತವಾಗಿದ್ದಾರೆ.

 

ಚಕ್ಕೆರೆ ಗ್ರಾಮ ಪಂಚಾಯಿತಿಯ 14 ಸದಸ್ಯರ ಪೈಕಿ 12 ಸದಸ್ಯರು ಜೆಡಿಎಸ್ ಬೆಂಬಲಿತರಾಗಿದ್ದರೆ, ಬಿಜೆಪಿ ಬೆಂಬಲಿತ ಸದಸ್ಯರು ಕೇವಲ ಇಬ್ಬರು ಇದ್ದಾರೆ. ನೂತನ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಪುಟ್ಟಮ್ಮ, ಉಪಾಧ್ಯಕ್ಷರಾಗಿ ಸುಜಯ್ ಕುಮಾರ್ ಆಯ್ಕೆಯಾಗಿರುವುದು. ಸಿಪಿ ಯೋಗೇಶ್ವರ್‌ಗೆ ಇರಿಸುಮುರುಸು ಉಂಟುಮಾಡಿದೆ.

ಇನ್ನು, ಯೋಗೇಶ್ವರ್ ಅವರ ಹುಟ್ಟೂರು ಚಕ್ಕೆರೆಯಲ್ಲೂ ಜೆಡಿಎಸ್ ಪ್ರಾಬಲ್ಯ ಮೆರೆದಿದ್ದು, 7 ಸ್ಥಾನಗಳ ಪೈಕಿ ಜೆಡಿಎಸ್ ಗೆ 5, ಬಿಜೆಪಿಗೆ ಕೇವಲ 2 ಸ್ಥಾನ ಸಿಕ್ಕಿವೆ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಬೆಂಬಲಿತ ಸದಸ್ಯರು ಭೇಟಿ ಮಾಡಿದ್ದು, ನೂತನ ಅಧ್ಯಕ್ಷೆ, ಉಪಾಧ್ಯಕ್ಷಗೆ ಮಾಜಿ ಸಿಎಂ ಹೆಚ್ಡಿಕೆ ಶುಭಾಶಯ ತಿಳಿಸಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ತಮ್ಮ ಸಾಮ್ರಾಜ್ಯ ವಿಸ್ತರಿಸಲು ಮುಂದಾಗಿದ್ದ ಸಚಿವ ಸಿಪಿ ಯೋಗೇಶ್ವರ್‌ಗೆ ತವರಿನಲ್ಲೇ ಮುಖಭಂಗವಾಗಿದ್ದು, ಹಳ್ಳಿಫೈಟ್‌ನಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಗೆದ್ದಂತೆ ಕಾಣುತ್ತಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *