ಅಭಿಮಾನಿಗಳ ದೇವರು ಡಾ.ರಾಜ್​ಗೆ ಇದೆಂಥಾ ಅಪಮಾನ..? ಡಾ.ರಾಜ್​​​ ಪ್ರತಿಮೆ ಇಡಲು ಸಿದ್ದವಾಗಿದ್ದ ಮಂಟಪ‌ ಧ್ವಂಸ..!

ಡಾ.ರಾಜ್​​​ ಪ್ರತಿಮೆ ಇಡಲು ಸಿದ್ದವಾಗಿದ್ದ ಮಂಟಪ‌ ಕಿಡಿಗೇಡಿಗಳು ಧ್ವಂಸಗೊಳಿಸಿರು ಘಟನೆ ವಿದ್ಯಾರಣ್ಯಪುರ ಇಂದಿರಾ ಕ್ಯಾಂಟಿನ್​ ಬಳಿ ನಡೆದಿದೆ. ಡಾ. ರಾಜ್​ಕುಮಾರ್​ ಅವರ ಪ್ರತಿಮೆಯನ್ನು ಇಡಲು ಸಿದ್ದವಾಗಿದ್ದ ಮಂಟಪವನ್ನು ಧ್ವಂಸಗೊಳಿಸಿದ್ದಕ್ಕೆ ಸ್ಥಳಿಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಟ ಸಾರ್ವಭೌಮ ಡಾ.ರಾಜ್​​​ ಪ್ರತಿಮೆಗೆ BBMP ಮೀಸಲಿಟ್ಟಿದ್ದ ಜಾಗವಿದಾಗಿದ್ದು, ಬಹುತೇಕ ಪೂರ್ಣಗೊಂಡಿದ್ದ ಪ್ರತಿಮೆ ಪ್ರತಿಷ್ಠಾಪನೆ ಕೆಲಸ ಪೂರ್ಣವಾಗಿತ್ತು. ಕಳೆದ ರಾತ್ರಿ ಏಕಾಏಕಿ ಪುತ್ಥಳಿ ನಿರ್ಮಾಣ ಸ್ಥಳವನ್ನು ಧ್ವಂಸಗೊಳಿಸಿದ್ದಾರೆ.

ಕನ್ನಡದ ಮೇರು ನಟ ಡಾ.ರಾಜ್​​​​‌ ಪ್ರತಿಮೆ‌ ಉದ್ಘಾಟನೆಗೂ ಕಿಡಿಗೇಡಿಗಳು ಅಡ್ಡಿ ಮಾಡಿದ್ದು, ಕನ್ನಡದ ಸಾಕ್ಷಿ ಪ್ರಜ್ಞೆ ಡಾ.ರಾಜ್​ಕುಮಾರ್​​​ಗೆ ಅಪಮಾನ ಮಾಡಲಾಗಿದೆ ಕಿಡಿಗೇಡಿಗಳ ಕೃತ್ಯಕ್ಕೆ ಡಾ.ರಾಜ್​​ ಅಭಿಮಾನಿಗಳ ಆಕ್ರೋಶ ಹೊರಹಾಕಿದ್ದು, ಜೊತೆಗೆ ಕಿಡಿಗೇಡಿಗಳನ್ನು ಬಂಧಿಸುವಂತೆ ರಾಜ್​ ಅಭಿಮಾನಿಗಳು ಆಗ್ರಹಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *