ಬಿಸಿತುಪ್ಪವಾದ ಖರ್ಗೆ ಸೂಚನೆ, ಕೈ ನಾಯಕರಿಗೆ ಸಂಕಟ..!
ಹೋದ ಕಡೆ ಬಂದ ಕಡೆಯಲೆಲ್ಲಾ ಮುಂದಿನ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳನ್ನು ಪ್ರಕಟ ಮಾಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಸಲಹೆ ಪಕ್ಷದಲ್ಲಿ ಬಿಸಿ ತುಪ್ಪವಾಗಿ ಪರಿಣಮಿಸಿದೆ. ನಿನ್ನೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜನ ಖರ್ಗೆ ಅವರು, ಕೆಪಿಸಿಸಿ ಅಧ್ಯಕ್ಷರೂ ಸೇರಿದಂತೆ ಪಕ್ಷದ ಯಾವುದೇ ನಾಯಕರೂ ಅಭ್ಯರ್ಥಿಗಳನ್ನು ಘೋಷಿಸುವ ಕೆಲಸ ಮಾಡಬಾರದು ಎಂದು ಬಹಿ ರಂಗವಾಗಿ ಹೇಳಿದರು. ಇದು ಪಕ್ಷದಲ್ಲಿ ಭಾರೀ ಚರ್ಚೆಗೆ ಗ್ರಾಹಸವಾಗಿದೆ.
ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ಇಲ್ಲ ಎನ್ನುತ್ತಲೇ ಬಹಳಷ್ಟು ನಾಯಕರು ಬಹಿರಂಗ ಸಭೆಗಳಲ್ಲೇ ತಮ್ಮ ಬೆಂಬಲಿಗರನ್ನು ಪಕ್ಕಕ್ಕೆ ನಿಲ್ಲಿಸಿಕೊಂಡು ಈತ ಮುಂದಿನ ಅಭ್ಯರ್ಥಿ ಎಂದು ಹೇಳುತ್ತಿದ್ದರು. ಇದು ಒಂದು ರೀತಿ ಒಳ್ಳೆಯದಾಗಿದ್ದು, ಮತ್ತೊಂದು ರೀತಿ ಕೆಟ್ಟದಾಗುತ್ತಿತ್ತು. ಸಂಭವನೀಯ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಮುಂದಿನ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಸೂಚಿತ ವ್ಯಕ್ತಿಗಳಿಗೆ ಸಮಾಯವಕಾಶ ಸಿಗುತ್ತಿತ್ತು. ಚುನಾವಣೆ ಸಂದರ್ಭದಲ್ಲಿ ಸೂಚಿತ ವ್ಯಕ್ತಿಗೆ ಬಿ ಫಾರಂ ಸಿಕ್ಕಿದಾದರೆ ಗೆಲ್ಲುವ ಅವಕಾಶಗಳು ಹೆಚ್ಚಿರುತ್ತಿದ್ದವು.