ಕ್ರಿಕೆಟ್ ಮೈದಾನಕ್ಕೆ ಪ್ರಧಾನಿ ಮೋದಿ ಹೆಸರು, ಕಾಂಗ್ರೆಸ್‌ ಕಿಡಿ

ಹೈಲೈಟ್ಸ್‌:

  • ಕ್ರಿಕೆಟ್ ಮೈದಾನಕ್ಕೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಹೆಸರು ಇಟ್ಟಿರುವುದಕ್ಕೆ ಕಾಂಗ್ರೆಸ್‌ ಕಿಡಿ
  • ಬಿಜೆಪಿ ಪಕ್ಷಕ್ಕೆ ಸರ್ದಾರ್ ಪಟೇಲರ ಬಗ್ಗೆ ಇದ್ದದ್ದು ನಕಲಿ ಪ್ರೇಮ ಎಂದು ಕಾಂಗ್ರೆಸ್ ಟೀಕೆ
  • ಹೆಸರು ಬದಲಿಸಿದಾಕ್ಷಣ ತುಕ್ಕಿನ ಮನುಷ್ಯ, ಉಕ್ಕಿನ ಮನುಷ್ಯನಾಗಲಾರ!

ಬೆಂಗಳೂರು: ವಿಶ್ವದ ಅತೀದೊಡ್ಡ ಕ್ರಿಕೆಟ್‌ ಮೈದಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಮರುನಾಮಾಕರಣ ಮಾಡಿದ್ದಕ್ಕಾಗಿ ಕಾಂಗ್ರೆಸ್ ವ್ಯಂಗ್ಯವಾಗಿ ಕಿಡಿಕಾರಿದೆ. ಈ ಕುರಿತಾಗಿ ಟ್ವೀಟ್ ಮಾಡಿದ ಕಾಂಗ್ರೆಸ್ ಬಿಜೆಪಿ ಪಕ್ಷಕ್ಕೆ ಸರ್ದಾರ್ ಪಟೇಲರ ಬಗ್ಗೆ ಇದ್ದದ್ದು ನಕಲಿ ಪ್ರೇಮ ಎನ್ನುವುದು ಸಾಭೀತಾಗಿದೆ ಎಂದಿದೆ.

ದೇಶ ಕಟ್ಟುವಲ್ಲಿ ತಮ್ಮವರ ಪಾತ್ರವಿಲ್ಲದ ಕಾರಣ ನೆಹರುರವರ ಖ್ಯಾತಿ ಕುಗ್ಗಿಸಲು ಪಟೇಲರ ಹೆಸರನ್ನು “ಆಪರೇಷನ್ ಕಮಲ” ಮಾಡಿದ್ದರು! ಹೆಸರು ಬದಲಿಸಿದಾಕ್ಷಣ ತುಕ್ಕಿನ ಮನುಷ್ಯ, ಉಕ್ಕಿನ ಮನುಷ್ಯನಾಗಲಾರ! ಎಂದು ಟ್ವೀಟ್ ಮೂಲಕ ಕಿಡಿಕಾರಿದೆ.

ಕೇಶುಭಾಯ್ ಪಟೇಲ್‌ರನ್ನು ಮುಗಿಸಿದ್ದಾಯ್ತು.ಅಡ್ವಾಣಿಯವರನ್ನ ಮೂಲೆಗೆ ಕೂರಿಸಿದ್ದಾಯಿತು. ವಾಜಪೇಯಿ ಅವರ ಫೋಟೋ ಕೂಡ ಇಡದೆ ಬದಿಗೆ ಸರಿಸಿದ್ದಾಯ್ತು.ಈಗ ಸ್ಟೇಡಿಯಂಗೆ “ಉಕ್ಕಿನ ಮನುಷ್ಯ” ಹೆಸರನ್ನೇ ಬದಲಿಸಿ “ತುಕ್ಕಿನ ಮನುಷ್ಯ” ತನ್ನ ಹೆಸರಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ತಾನು ಪಟೇಲರಿಗಿಂತ ಮಹಾನ್ ಎಂದುಕೊಂಡಿದ್ದಾರಾನರೇಂದ್ರ ಮೋದಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ದೇಶದ ಅತೀ ದೊಡ್ಡ ಕ್ರಿಕೆಟ್‌ ಮೈದಾನಕ್ಕೆ ನರೇಂದ್ರ ಮೋದಿ ಹೆಸರನ್ನು ಮರುನಾಮಾಕರಣ ಮಾಡಲಾಗಿದೆ. ಬುಧವಾರ ಈ ಕ್ರಿಕೆಟ್ ಮೈದಾನವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟನೆ ಮಾಡಿದ್ದರು. ವಲ್ಲಬಭಾಯಿ ಪಟೇಲ್ ಹೆಸರಿನಲ್ಲಿದ್ದ ಈ ಕ್ರೀಡಾಂಗಣಕ್ಕೆ ಇದೀಗ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಹೆಸರಿಡಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *