Ramesh Jarkiholi: ನಾಳೆ ಸುದ್ದಿಗೋಷ್ಠಿ ಕರೆದ ರಮೇಶ್​ ಜಾರಕಿಹೊಳಿ; ಸಿಡಿ ಪ್ರಕರಣ ಬಹಿರಂಗ ಸಾಧ್ಯತೆ

ನಾಳೆ ತಮ್ಮ ಸದಾಶಿವನಗರದ ಮನೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದು, ಈ ಸಿಡಿ ಪ್ರಕರಣ ಬಹಿರಂಗಕ್ಕೆ ಕಾರಣ ಯಾರು? ಎಂಬ ಬಗ್ಗೆ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Ramesh Jarkiholi: ನಾಳೆ ಸುದ್ದಿಗೋಷ್ಠಿ ಕರೆದ ರಮೇಶ್​ ಜಾರಕಿಹೊಳಿ; ಸಿಡಿ ಪ್ರಕರಣ ಬಹಿರಂಗ ಸಾಧ್ಯತೆ

ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಖುದ್ದು ರಮೇಶ್​ ಜಾರಕಿಹೊಳಿ ಈ ಸಿಡಿ ಪ್ರಕರಣ ಸಂಬಂಧ ಮಾತನಾಡಲು ಸುದ್ಧಿಗೋಷ್ಟಿ ನಡೆಸಲು ಮುಂದಾಗಿದ್ದಾರೆ. ಮಾರ್ಚ್​ 9ರ ಅಂದರೆ ನಾಳೆ ಬೆಳಗ್ಗೆ 10. 30ಕ್ಕೆ ಅವರು ಈ ಪ್ರಕರಣ ಸಂಬಂಧ ಮಾತನಾಡುವ ಸಾಧ್ಯತೆ ಇದೆ. ನಾಳೆ ತಮ್ಮ ಸದಾಶಿವನಗರದ ಮನೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದು, ಈ ಸಿಡಿ ಪ್ರಕರಣ ಬಹಿರಂಗಕ್ಕೆ ಕಾರಣ ಯಾರು? ಎಂಬ ಬಗ್ಗೆ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ರಮೇಶ್​ ಜಾರಕಿಹೊಳಿ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸಚಿವರು, ನಾಯಕರು ಮೌನ ತಾಳಿದ್ದು, ಇದುವರೆಗೂ ಯಾರು ಈ ಪ್ರಕರಣ ಕುರಿತು ತುಟಿ ಬಿಚ್ಚಿಲ್ಲ. ಸರ್ಕಾರಕ್ಕೆ ಸಾಕಷ್ಟು ಮುಜುಗರ ಉಂಟು ಮಾಡಿದ್ದ ಈ ಪ್ರಕರಣವನ್ನು  ಕಾಂಗ್ರೆಸ್​ ಸದಸ್ಯರು ಮಾತ್ರ  ಅಸ್ತ್ರ ಮಾಡಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *