‘ಎಲ್ಲಿ ಹೆಬ್ಬಾಳ್ಕರ್‌? ಇಲ್ಲೆಲ್ಲೋ ಓಡಾಡ್ತಿದ್ರಲ್ಲ’: ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಸ್ಪೀಕರ್‌ ಕಾಗೇರಿ ಗರಂ

ಹೈಲೈಟ್ಸ್‌:

  • ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ
  • ‘ಎಲ್ಲಿ ಹೆಬ್ಬಾಳ್ಕರ್‌..? ಇಲ್ಲೆಲ್ಲೋ ಓಡಾಡ್ತಿದ್ರಲ್ಲʼ ಎಂದು ಸ್ಪೀಕರ್‌ ಕಾಗೇರಿ ಸಿಟ್ಟು
  • ಪ್ರಶ್ನೆ ಕೇಳಿ, ಪ್ರಶ್ನೋತ್ತರ ಅವಧಿಗೆ ಗೈರಾಗಿದ್ದಕ್ಕೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ

ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದ ಘಟನೆ ಮಂಗಳವಾರ ನಡೆಯಿತು.

ರಾಜ್ಯದಲ್ಲಿ ಸೌರಶಕ್ತಿಯನ್ನು ಉತ್ತೇಜಿಸಲು ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದರು. ಆದರೆ, ಈ ವೇಳೆ ಸದನದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗೈರಾಗಿದ್ದರು. ಎಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಎಂದು ಪ್ರಶ್ನಿಸಿದ ಸ್ಪೀಕರ್ ಇಲ್ಲೇ ಎಲ್ಲೋ ಓಡಾಡುತ್ತಿದ್ದರಲ್ಲ ಎಲ್ಲೋದರು ಎಂದು ಪ್ರಶ್ನಿಸಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಸದಸ್ಯರು, ಅವರು ಮೀಟಿಂಗ್‌ಗೆ ಹೋಗಿದ್ದಾರೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಯಾವ ಮೀಟಿಂಗ್? ಪ್ರಶ್ನೋತ್ತರ ಅವಧಿಯಲ್ಲಿ ಅವರು ಇಲ್ಲಿ ಇರಬೇಕಲ್ವಾ ಎಂದು ಗರಂ ಆಗಿಯೇ ಹೇಳಿದರು.

ನಿಲುವಳಿ ಸೂಚನೆ ಮಂಡನೆಗೆ ಮುಂದಾದ ಸಿದ್ದರಾಮಯ್ಯ
ತೈಲ ಬೆಲೆ ಏರಿಕೆ ಕುರಿತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡನೆ ಮಾಡಲು ಮುಂದಾದರು. ನಿಯಮ 60 ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೊಡಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಳಿ ಮನವಿ ಮಾಡಿದರು. ಆದರೆ, ಪ್ರಶ್ನೋತ್ತರ ಮುಗಿದ ನಂತರ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಈ ವೇಳೆ ತಿಳಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *