ಯತ್ನಾಳ್ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಲ್ಲ – ಎಂ.ಪಿ ರೇಣುಕಾಚಾರ್ಯ

ಬೆಂಗಳೂರು: ನಾನು ಕಾಂಗ್ರೆಸ್​ನ ಮುಖಂಡರಿಗೆ ಮಾಧ್ಯಮದ ಮೂಲಕ ಬಹಿರಂಗ ಸವಾಲು ಹಾಕುತ್ತೇನೆ. ನೈತಿಕತೆ ಬಗ್ಗೆ ಮಾತನಾಡಲು ನಿಮಗೆ ಹಕ್ಕಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರು ಕಾಂಗ್ರೆಸ್​ ವಿರುದ್ಧ ಗುಡುಗಿದ್ದಾರೆ. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಂತ್ರಸ್ತೆಯೇ ದೂರು ನೀಡಿದರು. ನೀವು ಮೇಟಿಗೆ ಕ್ಲೀನ್​ಚಿಟ್ ನೀಡಿದರು. ಆ ಯುವತಿ ದೂರು ಕೊಟ್ಟಿಲ್ಲ, ಅಧಿವೇಶನದಲ್ಲಿ ಬಜೆಟ್, ಕೋವಿಡ್, ನೀರಿನ ಬಗ್ಗೆ ಚರ್ಚೆ ಮಾಡಬಹುದು ಆದರೆ ಕಲಾಪವನ್ನ ಬಲಿ ತೆಗೆದುಕೊಂಡರು ಎಂದು ಹೇಳಿದರು.

ವೇಣುಗೋಪಾಲ್ ನಿಮ್ಮ ಪಕ್ಷ ಉಸ್ತುವಾರಿ ಆಗಿದರು. ಸರಿತಾ ನಾಯರ್ ಪ್ರಕರಣ ಏನಾಯ್ತು ನಿಮಗೆ ಗೊತ್ತಿದೆಯಾ(?) ನಾವು ಮಹಿಳೆಯನ್ನ ಗೌರವಿಸುತ್ತೇವೆ. ಇವತ್ತಿಗೂ ಬಿಜೆಪಿ ಪಕ್ಷ ಭಾರತ ಮಾತೆಗೆ ಜೈಕಾರ ಹಾಕುತ್ತೇವೆ. 130 ಕೋಟಿ ಜನರನ್ನ ಹೊತ್ತಿರೋ ಭೂ ತಾಯಿ. ಇವತ್ತು ಕಣ್ಣು ತಪ್ಪಿಸಿ ಅವರೆಲ್ಲಾ ಓಡಾಡುತ್ತಿದ್ದಾರೆ. ಮುಂದೆ ಬಂದು ಯುವತಿ ದೂರು ಕೊಡಲಿ. ಕಾಂಗ್ರೆಸ್​ನವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯತ್ನಾಳ್ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಲ್ಲ, ಅವರು ಬಿಜೆಪಿ ಶಾಸಕರಾಗಿ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ, ಅವರ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಮಾತನಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *