ಪ್ರಯಾಣಿಕರಿಗೆ ಉಚಿತ ಆಹಾರ ವಿತರಿಸಿದ ರೈಲ್ವೆ ಪೋಲಿಸರು
ಕಲಬುರಗಿ : ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಊಟೋಪಹಾರ ಸಿಗದೇ ಕಂಗಾಲಾದ ಬಡ ರೈಲ್ವೆ ಪ್ರಯಾಣಿಕರಿಗೆ ಸ್ಥಳೀಯ ರೈಲ್ವೆ ಪೋಲಿಸರು ಉಚಿತ ಆಹಾರದ ಪೊಟ್ಟಣಗಳನ್ನು ವಿತರಿಸಿದರು.
ರೈಲ್ವೆ ಡಿವೈಎಸ್ಪಿಗಳಾದ ವೆಂಕಣಗೌಡ ಪಾಟೀಲ್ ಮತ್ತು ವಿ.ಎನ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಬಡ ಪ್ರಯಾಣಿಕರಿಗೆ ಆಹಾರದ ಪೊಟ್ಟಣಗಳನ್ನು ನೀಡಿದರು. ರೈಲ್ವೆ ಇಲಾಖೆಯ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು.