ಲಾಕ್‌ಡೌನ್‌ 14 ದಿನ ವಿಸ್ತರಣೆ, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ, ಜನ ಸಂಚಾರಕ್ಕಿಲ್ಲ ನಿರ್ಬಂಧ

ಹೈಲೈಟ್ಸ್‌:

  • ಕೊರೊನಾ ಲಾಕ್‌ಡೌನ್‌ನ್ನು ಜೂನ್‌ 7ರವರೆಗೆ ವಿಸ್ತರಿಸಿದ ರಾಜ್ಯ ಸರಕಾರ
  • ಈಗಿರುವ ಕಠಿಣ ನಿಯಮಗಳೇ ಜೂನ್‌ 7ರವರೆಗೆ ಮುಂದುವರಿಕೆ
  • ಆದರೆ ಅಂತಾರಾಜ್ಯ ಮತ್ತು ರಾಜ್ಯದ ಒಳಗೆ, ಜಿಲ್ಲೆಯ ಒಳಗೆ ಜನ ಸಂಚಾರಕ್ಕೆ ಅವಕಾಶ ನೀಡಲಾಗಿದೆ
  • ಲಾಕ್‌ಡೌನ್‌ ವೇಳೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕಗಳಿಗೆ ಅವಕಾಶ ನೀಡಿಲ್ಲ

ಬೆಂಗಳೂರು: ರಾಜ್ಯ ಸರಕಾರ ನಿರೀಕ್ಷೆಯಂತೆ ಕೊರೊನಾ ಲಾಕ್‌ಡೌನ್‌ ನಿರ್ಬಂಧಗಳನ್ನು ಮೇ 24 ರಿಂದ ಜೂನ್‌ 7ರವರೆಗೆ ವಿಸ್ತರಿಸಿದೆ. ಜೂನ್‌ 7ರ ಬೆಳಿಗ್ಗೆ 6 ಗಂಟೆವರೆಗೆ ಕಠಿಣ ನಿರ್ಬಂಧಗಳು ಕರ್ನಾಟಕದಲ್ಲಿ ಜಾರಿಯಲ್ಲಿ ಇರಲಿವೆ.

ಈ ಅವಧಿಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕಗಳಿಗೆ ಅವಕಾಶ ಇಲ್ಲ. ಸದ್ಯ ಜಾರಿಯಲ್ಲಿರುವ ಕಠಿಣ ನಿರ್ಬಂಧಗಳೇ ಈ ಅವಧಿಯಲ್ಲೂ ಮುಂದುವರಿಯಲಿವೆ.

ಜನಸಾಮಾನ್ಯರಿಗೆ ಅನ್ವಯವಾಗುವ ನಿಯಮಗಳನ್ನು ನೋಡುವುದಾದರೆ,

ಯಾವುದಕ್ಕೆ ಅವಕಾಶವಿಲ್ಲ?

  • ಮೆಟ್ರೋ, ಆಟೋ ರಿಕ್ಷಾ, ಕ್ಯಾಬ್‌ ಇರುವುದಿಲ್ಲ. ತುರ್ತು ಬಳಕೆಗೆ ಮಾತ್ರ ಕ್ಯಾಬ್‌ಗಳನ್ನು ಬಳಸಬಹುದು.
  • ಖಾಸಗಿ, ಸರಕಾರಿ ಬಸ್‌ಗಳು ರಸ್ತೆಗಿಳಿಯುವುದಿಲ್ಲ.
  • ಶಾಲೆ, ಕಾಲೇಜು ಯಾವುದೂ ಇಲ್ಲ. ಆನ್‌ಲೈನ್‌ ಶಿಕ್ಷಣ ಮಾತ್ರ ಮುಂದುವರಿಯಲಿದೆ.
  • ಹೋಟೆಲ್‌, ರೆಸ್ಟೋರೆಂಟ್‌, ಅತಿಥಿ ಗೃಹಗಳು ಇರುವುದಿಲ್ಲ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಸೇವೆಗೆ ಅಡುಗೆ ಕೋಣೆ ತೆರೆದಿರಬಹುದು. ಪಾರ್ಸೆಲ್‌ ತೆಗೆದುಕೊಳ್ಳಲು ವಾಹನದಲ್ಲಿ ಹೋಗುವಂತಿಲ್ಲ, ನಡೆದುಕೊಂಡು ಬೇಕಿದ್ದರೆ ಹೋಗಬಹುದು. ಹೋಂ ಡೆಲಿವರಿಗೆ ಅವಕಾಶವಿದೆ.
  • ಸಿನಿಮಾ ಮಂದಿರ, ಜಿಮ್‌, ಸ್ಪಾ, ಶಾಪಿಂಗ್‌ ಮಾಲ್‌, ಯೋಗ ಕೇಂದ್ರ, ಕ್ರೀಡಾ ಚಟುವಟಿಕೆಗಳು, ಮನರಂಜನಾ ತಾಣಗಳು, ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳು, ಕ್ಲಬ್‌ಗಳು, ಬಾರ್, ಅಡಿಟೋರಿಯಂಗಳನ್ನು ತೆರೆಯುವಂತಿಲ್ಲ.
  • ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲವೇ ಇಲ್ಲ.
  • ಎಲ್ಲಾ ಧಾರ್ಮಿಕ ಕ್ಷೇತ್ರಗಳು ಮುಚ್ಚರಲಿವೆ. ಪೂಜೆ ಸಲ್ಲಿಸಲು ಮಾತ್ರ ಅರ್ಚಕರಿಗೆ ಅವಕಾಶವಿದೆ.

 

 

 

  • ಯಾವುದಕ್ಕೆ ನಿರ್ಬಂಧವಿಲ್ಲ?
    • ಅಂತಾರಾಜ್ಯ ಮತ್ತು ರಾಜ್ಯದ ಒಳಗೆ, ಜಿಲ್ಲೆಯ ಒಳಗೆ ಜನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಹಿಂದೆ ತುರ್ತು ಸಂದರ್ಭದಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು.
    • ವಿಮಾನ, ರೈಲುಗಳ ಮಾತ್ರ ಓಡಾಡಲಿವೆ. ಇದಕ್ಕೆ ಟಿಕೆಟ್‌ನ್ನೇ ಪಾಸ್‌ ರೀತಿಯಲ್ಲಿ ಬಳಸಲು ಸೂಚಿಸಲಾಗಿದೆ.
    • ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಹಾಗೂ ಪಿಎನ್‌ಜಿ ಗ್ಯಾಸ್‌ ಕೇಂದ್ರಗಳು, ಅಂಚೆ ಕಚೇರಿ ತೆರೆದಿರಲಿವೆ.
    • ಬ್ಯಾಂಕ್‌, ಆರ್‌ಬಿಐ, ಆರ್‌ಬಿಐ ನಿಯಂತ್ರಿತ ಹಣಕಾಸು ಮಾರುಕಟ್ಟೆಗಳು, ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಇರಲಿವೆ.
    • ಆಯುಷ್‌, ಪಶು ಆರೋಗ್ಯ ಕೇಂದ್ರಗಳು, ಲ್ಯಾಬ್‌ಗಳು, ಕ್ಲಿನಿಕ್‌ಗಳು ಬ್ಲಡ್‌ ಬ್ಯಾಂಕ್‌ಗಳು, ಮೆಡಿಕಲ್‌ಗಳು ಸೇರಿದಂತೆ ಆರೋಗ್ಯ ಸೇವೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೂ ಮುಕ್ತ ಅವಕಾಶ ನೀಡಲಾಗಿದೆ.
    • ಎಲ್ಲಾ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಅನುಮತಿ ನೀಡಲಾಗಿದೆ.
    • ಕೃಷಿಗೆ ಸಂಬಂಧಿಸಿದ ಅಂಗಡಿ, ಗೋದಾಮು, ಯಂತ್ರೋಪಕರಣಗಳಿಗೆ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರವರೆಗೆ ಅನುಮತಿ ಇದೆ. ಸಂಬಂಧಿತ ಚಟುವಟಿಕೆಗಳಲ್ಲಿ ಮೀನುಗಾರಿಕೆ, ಕೋಳಿ, ಮಾಂಸ, ಡೈರಿ ಇತ್ಯಾದಿ. ಸೇರಿವೆ.
    • ಕಂಟೈನ್‌ಮೆಂಟ್‌ ಝೋನ್‌ ಹೊರಗಡೆ ಎಲ್ಲಾ ರೀತಿಯ ಸರಕು ಸಾಗಣೆಗೆ ಅನುಮತಿ ಇದೆ. ಖಾಲಿ ವಾಹನ ಓಡಾಟಕ್ಕೂ ಅವಕಾಶವಿದೆ. ಇದಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ.
    • ನ್ಯಾಯಬೆಲೆ ಅಂಗಡಿಗಳು, ದಿನಸಿ, ತರಕಾರಿ ಮತ್ತು ಹಣ್ಣು, ಹಾಲು ಮತ್ತು ಬೇಕರಿ ಉತ್ಪನ್ನಗಳು, ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವಿನ ಅಂಗಡಿಗಳು, ಮದ್ಯದ ಅಂಗಡಿಗಳು ಬೆಳಿಗ್ಗೆ 6 ರಿಂದ 10ಗಂಟೆವರೆಗೆ ಮಾತ್ರ ತೆರೆದಿರಲಿವೆ. ಹೋಮ್‌ ಡೆಲಿವರಿಗೆ ಅವಕಾಶವಿದೆ.
    • ತಳ್ಳುಗಾಡಿಗಳು, ಹಾಲಿನ ಬೂತ್‌ಗಳು, ಹಾಪ್‌ಕಾಮ್ಸ್‌ಗಳು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ತೆರೆದಿರಲಿವೆ.
    • ಬ್ಯಾಂಕ್‌, ಇನ್ಶೂರೆನ್ಸ್‌ ಕಂಪನಿ, ಎಟಿಎಂ ತೆರೆದಿರಲಿವೆ.
    • ಇ-ಕಾಮರ್ಸ್‌ ಮೂಲಕ ಎಲ್ಲಾ ರೀತಿಯ ಡೆಲಿವರಿಗೂ ಮುಕ್ತ ಅವಕಾಶವಿದೆ.

    ಮದುವೆಗೆ 50 ಜನ, ಅಂತ್ಯಸಂಸ್ಕಾರಕ್ಕೆ 5 ಜನ!

    • ಈಗಾಗಲೇ ನಿಗದಿಯಾಗಿರುವ ಮದುವೆಯಲ್ಲಿ 50 ಜನ ಮಾತ್ರ ಭಾಗವಹಿಸಬಹುದು. ಅಂತ್ಯಸಂಸ್ಕಾರದಲ್ಲಿ ಕೇವಲ 5 ಜನ ಭಾಗವಹಿಸಲು ಅವಕಾಶವಿದೆ. ಅಲ್ಲೂ ಕೊರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲೇಬೇಕು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *