ರೈಲು ಪ್ರಯಾಣದ ಪ್ಲಾನ್ ಮಾಡಿದ್ದೀರಾ..? ಹಾಗಾದ್ರೆ ಸರ್ಯಾಗಿ ಚೆಕ್ ಮಾಡ್ಕೊಳ್ಳಿ..! ರದ್ದಾಗಿದೆ 25 ಟ್ರೈನ್ಗಳು..!
ಕೇವಲ ಎರಡು ವಾರದ ಅವಧಿಯಲ್ಲಿ ದೇಶ ಎರಡು ಚಂಡಮಾರುತದ ಪರಿಣಾಮ ಎದುರಿಸಬೇಕಾಗಿದೆ. ಕಳೆದವಾರ ತೌಕ್ತೆ ಚಂಡಮಾರುತ ಸೃಷ್ಟಿ ಮಾಡಿದ ಅನಾಹುತ ಹಾನಿ, ಜನರ ಮನಸ್ಸಿನಿಂದ ದೂರವಾಗುವ ಮುನ್ನವೇ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ.

ಯಾಸ್ ಚಂಡಮಾರುತದಿಂದಾಗಿ ಇಂದಿನಿಂದ ಬರುವ 29ರ ವರೆಗೆ 25 ರೈಲು ಪ್ರಯಾಣ ರದ್ದು ಗೊಳಿಸಲಾಗಿದೆ ಎಂದು ಪೂರ್ವ ರೈಲ್ವೆ ಹೇಳಿದೆ. ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಕ್ಕೆ ನಂತರ ತೀವ್ರ ಚಂಡಮಾರುತವಾಗಿದೆ.ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹವಾಮಾನ ಇಲಾಖೆಯ ಹೇಳಿದೆ.

