ಡಿಸಿಯಾಗಿ ಮೈಸೂರಿಗೆ ಬಂದ ದಿನದಿಂದಲೂ ನಾನು ಟಾರ್ಗೆಟ್, ನನ್ನ ಮೇಲೆ ವೈಯಕ್ತಿಕ ದಾಳಿ: ರೋಹಿಣಿ ಸಿಂಧೂರಿ ಬೇಸರ
ಹೈಲೈಟ್ಸ್:
- ರಾಜಕೀಯ ನಾಯಕರ ವಾಗ್ಧಾಳಿ ಸಂಬಂಧ ರೋಹಿಣಿ ಸಿಂಧೂರಿ ಬೇಸರ
- ಮೈಸೂರಿಗೆ ಬಂದ ದಿನದಿಂದಲೂ ನಾನು ಟಾರ್ಗೆಟ್ ಎಂದ ಡಿಸಿ
- ನನ್ನ ಮೇಲೆ ವೈಯಕ್ತಿಕ ದಾಳಿನನ್ನ ಮೇಲೆ ವೈಯಕ್ತಿಕ ದಾಳಿ ನಡೆಯುತ್ತಿದೆ
ಮೈಸೂರು: ಜಿಲ್ಲಾಧಿಕಾರಿಯಾಗಿ ಮೈಸೂರಿಗೆ ಬಂದ ದಿನದಿಂದಲೂ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲಾಗುತ್ತಿದೆ. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದೆ ಕೊರೊನಾ ನಿಯಂತ್ರಣಕ್ಕೆ ಸಂಪೂರ್ಣ ಶಕ್ತಿಯನ್ನು ವ್ಯಯಿಸುತ್ತೇನೆ ಎಂದು ಡಿಸಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
”ಕೊರೊನಾದಂತಹ ಪಿಡುಗು ನಮ್ಮನ್ನು ಬಾಧಿಸುತ್ತಿದೆ. ಇಂತಹ ಸಂದರ್ಭದಲ್ಲೂ ನನ್ನ ಮೇಲೆ ಸುಳ್ಳುಗಳನ್ನು ಹೊರಿಸಿ ಬೇಜವಾಬ್ದಾರಿ ಹೇಳಿಕೆಗಳನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ನೀಡುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿ, ಆತ್ಮವಿಶ್ವಾಸ ಕುಂದುವಂತೆ ಮಾಡಬಹುದು. ಜನರಿಗೆ ಜಿಲ್ಲಾಡಳಿತ ಭರವಸೆ ನೀಡುವ ಕೆಲಸ ಮಾಡಲಿದೆ. ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿ ತದ ಪ್ರತಿಯೊಬ್ಬರೂ 24 ಗಂಟೆ ಅವಿರತ ಶ್ರಮ ವಹಿಸುತ್ತಿದ್ದಾರೆ,” ಎಂದು ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.
”ರಾಜ್ಯದಲ್ಲಿ ಅತಿಹೆಚ್ಚು ಜನರಿಗೆ ಲಸಿಕೆ ಹಾಕಿದ ಜಿಲ್ಲೆ ಮೈಸೂರು. ಇತರ ಜಿಲ್ಲೆಗೆ ಹೋಲಿಸಿದರೆ ಮರಣ ಪ್ರಮಾಣ ಮೈಸೂರಿನಲ್ಲಿ ಕಡಿಮೆ ಇದೆ. ಟೆಸ್ಟಿಂಗ್ನಲ್ಲಿ ರಾಜ್ಯ ನೀಡಿದ ಗುರಿಯಲ್ಲಿ ಶೇ. 150ರಷ್ಟು ಪೂರೈಸಲಾಗಿದೆ. 2020ರಲ್ಲೇ ಗಣಕೀಕೃತ ಬೆಡ್ ವ್ಯವಸ್ಥೆಯನ್ನು ಮೈಸೂರು ಜಿಲ್ಲೆ ಪ್ರಾರಂಭಿಸಿದ್ದರಿಂದ ಎರಡನೇ ಅಲೆ ಬಂದಾಗ ಸಾಕಷ್ಟು ನೆರವಾಯಿತು. ರಾಜ್ಯಕ್ಕೆ ಮಾದರಿಯಾಗುವಂತೆ ‘ಕೋವಿಡ್ ಮಿತ್ರ’ ತೆರೆಯಲಾಗಿದೆ. ಇದರಿಂದ 30 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಮೆಡಿಕಲ್ ಕನ್ಸಲ್ಟೆನ್ಸಿ ದೊರೆತಿದೆ” ಎಂದು ಹೇಳಿದ್ದಾರೆ.
ಮಹಿಳೆಯರ ವಿಶೇಷ ಗಮನ!
ಸದ್ಯ ಎಲ್ಲರಿಗೂ ವ್ಯಾಕ್ಸಿನೇಷನ್, ಮಧುಮೇಹ ಮತ್ತು ಕೊಮಾರ್ಬಿಡಿಟೀಸ್ ಪ್ರಕರಣಗಳನ್ನು ಸ್ಕ್ರೀನಿಂಗ್ ಮತ್ತು ಟ್ರ್ಯಾಕಿಂಗ್ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಮನೆಮನೆ ಸಮೀಕ್ಷೆಯಲ್ಲಿ ನಾವು ಕಂಡುಕೊಂಡ ಸಂಗತಿಯೆಂದರೆ, ರೋಗ ಲಕ್ಷಣಗಳನ್ನು ಬಹಿರಂಗಪಡಿಸಲು ಮತ್ತು ಚಿಕಿತ್ಸೆ ಪಡೆಯಲು ಮಹಿಳೆಯರಲ್ಲಿ ಹಿಂಜರಿಕೆ ಇದೆ. ಮನೆಯ ಕೆಲಸಗಳನ್ನು ಎದುರಿಸಲು ಯಾರೂ ಇಲ್ಲದಿರುವುದರಿಂದ ಅನೇಕ ಬಾರಿ ಅವರು ಆಸ್ಪತ್ರೆಗೆ ಹೋಗುವುದಿಲ್ಲ. ಹಾಗಾಗಿ ಮಹಿಳೆಯರ ಮೇಲೆ ವಿಶೇಷ ಗಮನ ಹರಿಸಲಾಗುತ್ತದೆ ಎಂದರು.
ನಗರ ಪಾಲಿಕೆ ಈಗಾಗಲೇ ಕೋವಿಡ್ ಕೇರ್ ಸೆಂಟರ್ ತೆರೆದಿದೆ. ತಾಲೂಕಿನಲ್ಲಿ ಸರಕಾರಿ ಹಾಸ್ಟೆಲ್ಗಳು, ಸರಕಾರಿ ಕಟ್ಟಡಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ನಿರ್ದೇಶಿಸ ಲಾಗಿದೆ. ಅಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಸದ್ಯ ಮೈಸೂರಲ್ಲಿ8865, ತಾಲೂಕುಗಳಲ್ಲಿ 6855 ಸಕ್ರಿಯ ಪ್ರಕರಣಗಳಿವೆ. ವಾರ್ಡ್ವಾರು, ಪಂಚಾಯಿತಿ ವಾರು ಎಲ್ಲರೂ ಪ್ರತಿದಿನ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಂಸದರಿಗೆ ‘ಲೆಕ್ಕ’ ಒಪ್ಪಿಸಿದ ಡಿಸಿ!
ಸಸದ ಪ್ರತಾಪಸಿಂಹ ಅವರು ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಲೆಕ್ಕಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಪ್ರಕಟಣೆ ಹೊರಡಿಸಿರುವ ಡಿಸಿ, ರಾಜ್ಯ ಸರಕಾರದಿಂದ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಬಂದಿರುವ 41 ಕೋಟಿ ರೂ. ಅನುದಾನದಲ್ಲಿ ಏನೆಲ್ಲಾ ಖರ್ಚು ವೆಚ್ಚವಾಗಿದೆ ಎಂಬುದನ್ನು ವಿವರಿಸಿದ್ದಾರೆ. ಈ ಎಲ್ಲಾ ಖರ್ಚುಗಳನ್ನು ಸಿಎಜಿ ಸರಿಯಾದ ಸಮಯದಲ್ಲಿ ಲೆಕ್ಕ ಪರಿಶೋಧನೆಗೆ ಒಳಪಡಿಸುತ್ತದೆ. ಎಲ್ಲವೂ ಸರಕಾರದ ಮಾರ್ಗಸೂಚಿಯಂತೆ ನಡೆದಿದೆ ಎಂದು ತಿಳಿಸಿದ್ದಾರೆ.