ಕೊನೆಯುಸಿರೆಳೆದ ಆದರ್ಶ: ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಇನ್ನಿಲ್ಲ

ಹೈಲೈಟ್ಸ್‌:

  • ಪುನೀತ್ ರಾಜ್‌ಕುಮಾರ್ ಅಪ್ಪಟ ಅಭಿಮಾನಿ ಆದರ್ಶ ಇನ್ನಿಲ್ಲ
  • ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಆದರ್ಶ
  • ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ ಆದರ್ಶ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ವಿಶೇಷ ಚೇತನ ಬಾಲಕ ಆದರ್ಶ (17) ಕೊನೆಯುಸಿರೆಳೆದಿದ್ದಾನೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಆದರ್ಶ ಬುಧವಾರ ನಿಧನ ಹೊಂದಿದ್ದಾನೆ. ಹೊಸಪೇಟೆಯ ತಳವಾರಕೇರಿಯ ನಿವಾಸಿ ಆದರ್ಶ. ಹುಟ್ಟಿನಿಂದಲೇ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಆದರ್ಶನಿಗೆ ಪುನೀತ್ ರಾಜ್‌ಕುಮಾರ್ ಅಂದ್ರೆ ಪಂಚಪ್ರಾಣ. ಅಪ್ಪು ಆಕ್ಟಿಂಗ್ ಮತ್ತು ಡ್ಯಾನ್ಸ್‌ ಅಂದ್ರೆ ಆದರ್ಶನಿಗೆ ತುಂಬಾ ಇಷ್ಟ.

ಪುನೀತ್ ರಾಜ್‌ಕುಮಾರ್ ಅವರನ್ನು ನೋಡಬೇಕು, ಒಮ್ಮೆಯಾದರೂ ಭೇಟಿಯಾಗಬೇಕು ಎಂಬ ಆಸೆ ಆದರ್ಶನಿಗೆ ಇತ್ತು. ವಿಶೇಷ ಅಭಿಮಾನಿಯ ಕೋರಿಕೆಯನ್ನು ಪುನೀತ್ ರಾಜ್‌ಕುಮಾರ್ ಈಡೇರಿಸಿದ್ದರು. ವಾಹನದ ವ್ಯವಸ್ಥೆ ಮಾಡಿ ಹೊಸಪೇಟೆಯಿಂದ ಬೆಂಗಳೂರಿನ ತಮ್ಮ ನಿವಾಸಕ್ಕೆ ಆದರ್ಶನನ್ನು ಪುನೀತ್ ರಾಜ್‌ಕುಮಾರ್ ಕರೆಯಿಸಿಕೊಂಡಿದ್ದರು. ಆದರ್ಶನ ಜೊತೆಗೆ ಕೆಲ ಹೊತ್ತು ಪುನೀತ್ ರಾಜ್‌ಕುಮಾರ್ ಹರಟಿದ್ದರು.

ಆದರ್ಶನ ಕಾಯಿಲೆಯ ಬಗ್ಗೆ ತಿಳಿದುಕೊಂಡ ಪುನೀತ್ ರಾಜ್‌ಕುಮಾರ್, ಚಿಕಿತ್ಸೆಗೆ ನೆರವು ನೀಡುವುದಾಗಿಯೂ ತಿಳಿಸಿದ್ದರು. ಈ ಬಗ್ಗೆ ವೈದ್ಯರ ಜೊತೆಗೂ ಪುನೀತ್ ರಾಜ್‌ಕುಮಾರ್ ಮಾತುಕತೆ ನಡೆಸಿದ್ದರು. ಆದರೆ ಅಷ್ಟರಲ್ಲಿ ದುರಾದೃಷ್ಟವಶಾತ್ ಆದರ್ಶ ಬಾರದ ಲೋಕಕ್ಕೆ ತೆರಳಿದ್ದಾನೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆದರ್ಶ ಇಹಲೋಕ ತ್ಯಜಿಸಿದ್ದಾನೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *