ಡಿಕೆ ರವಿ ಬಯೋಪಿಕ್ ಮಾಡಲು ಆ 37 ಮೆಸೇಜ್ ತೋರಿಸ್ತೀರಾ ಎಂದು ಕಂಡೀಶನ್ ಇಟ್ಟ ಚಕ್ರವರ್ತಿ ಚಂದ್ರಚೂಡ್

ಹೈಲೈಟ್ಸ್‌:

  • ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಯೋಪಿಕ್‌ನಲ್ಲಿ ಅಕ್ಷತಾ ಪಾಂಡವಪುರ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ
  • ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಬಯೋಪಿಕ್ ಮಾಡುವ ಇಂಗಿತ ಹೊರಹಾಕಿದ ಸಾರಾ ಮಹೇಶ್
  • ಡಿಕೆ ರವಿ ಬಯೋಪಿಕ್ ಮಾಡಲು ಎರಡು ಕಂಡೀಶನ್ ಹಾಕಿದ ಬಿಗ್ ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್

ಪ್ರಸ್ತುತ ಕರ್ನಾಟಕದಲ್ಲಿ ಬಯೋಪಿಕ್‌ಗಳೇ ಸುದ್ದಿ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಯೋಪಿಕ್ ಮಾಡುವ ಕುರಿತು ಒಂದು ಕಡೆ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ಈ ಬಯೋಪಿಕ್ ಸುದ್ದಿ ಕೇಳಿ ಡಿಕೆ ರವಿ ಬಯೋಪಿಕ್ ಮಾಡುವುದಾಗಿ ಸಾರಾ ಮಹೇಶ್ ಹೇಳಿದ್ದಾರೆ. ಡಿಕೆ ರವಿ ಪಾತ್ರ ಮಾಡುವವರು ಯಾರು?

ಸಾರಾ ಮಹೇಶ್ ಹೇಳಿಕೆ ಹೀಗಿದೆ

“ಐಎಎಸ್ ಅಧಿಕಾರಿಯ ಮಗನ ಚರಿತ್ರೆ ಇಲ್ಲಿದೆ. ಬಡ ರೈತನ ಮಗ ಐಎಎಸ್ ಆದ ಚರಿತ್ರೆ ಇದೆ, ಸಿಂಗಂ ಚಿತ್ರ ಇಲ್ಲಿ ಬಂದರೆ 2015ರ ಸಿಬಿಐ ವರದಿ ಇಲ್ಲಿದೆ. ನಾನು ಯಾವ ಕಾರಣವನ್ನೂ ಹೇಳಲ್ಲ, ಸಿನಿಮಾ ತೆಗೆಯುತ್ತೇನೆ. ಆ ಜೀವನ ಏನಾಯ್ತು? ಆ ರಾಜ್ಯ ಹೇಗೆ ಹೊತ್ತು ಉರಿತು? ನಾವು ಸ್ವಾಭಿಮಾನಿಗಳು ನಾವು ಕೂಡ ಸಿನಿಮಾ ತೆಗೆಯಬೇಕು, ಈ ಚರಿತ್ರೆ ಸಿನಿಮಾ ಮಾಡುವವರಿಗೆ ಬೇಕಾಗತ್ತೆ. ಮೈಸೂರು ಜಿಲ್ಲೆಯ ಜನತೆ ಅರ್ಥ ಮಾಡಿಕೊಳ್ಳಬೇಕು. ಕರ್ತವ್ಯ ಲೋಪದಿಂದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲಾಗಿದೆ, ಆದರೆ ವರ್ಗಾವಣೆ ಮಾಡಿರೋದು ತಪ್ಪು, ಅಮಾನತು ಮಾಡಬೇಕಾಗಿತ್ತು” ಎಂದು ಸಾರಾ ಮಹೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.

ಚಕ್ರವರ್ತಿ ಚಂದ್ರಚೂಡ್ ಹೇಳಿದ್ದೇನು?

“ಸಾ ರಾ ಮಹೇಶೂ ಡಿಕೆರವಿ ಪಿಕ್ಚರ್ ತೆಗೀತಾರಂತೆ -ಇತ್ತ ರೋಹಿಣಿ ಸಿಂಧೂರಿ ಸಿನಿಮಾ ಘೋಷಣೆಯಾಗಿದೆ. ನಿನ್ನೆ ಹೊಸ ಡೈರೆಕ್ಟರೊಬ್ಬರು ಡಿ ಕೆ ರವಿ ಪಾತ್ರ ಮಾಡ್ತೀರಾ ಅಂತ ಕೇಳಿದ್ರು . ಎರಡು ಕಂಡಿಷನ್ ಹಾಕಿದೀನಿ. ಆ 37 ಮೆಸೇಜ್ ತೋರಿಸ್ತೀರಾ ಸಿನಿಮಾದಲ್ಲಿ ?” ಎಂದು ಬಿಗ್ ಬಾಸ್ ಕನ್ನಡ ಸೀಸನ್ 8 ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ಸಿನಿಮಾ ರಿಲೀಸ್ ಆಗತ್ತಾ?
ರೋಹಿಣಿ ಸಿಂಧೂರಿ ಬಯೋಪಿಕ್‌ನಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ಅಕ್ಷತಾ ಪಾಂಡವಪುರ ಹೆಸರು ಕೇಳಿ ಬರುತ್ತಿದೆ. ಆದರೆ ರೋಹಿಣಿ ಸಿಂಧೂರಿ ಬಯೋಪಿಕ್ ಆಗಲೀ, ಡಿಕೆ ರವಿ ಬಯೋಪಿಕ್ ಬಗ್ಗೆ ಆಗಲೀ ಅಧಿಕೃತ ಮಾಹಿತಿ ಹೊರಬಂದಿಲ್ಲ. ಇಲ್ಲಿಯವರೆಗೆ ಆಗಿರೋದು ಕೇವಲ ಚರ್ಚೆಯಷ್ಟೇ. ಮುಂದಿನ ದಿನಗಳಲ್ಲಿ ಈ ಬಯೋಪಿಕ್‌ಗಳು ಕಾರ್ಯರೂಪಕ್ಕೆ ಬಂದು ಸಿನಿಮಾ ರಿಲೀಸ್ ಆಗುತ್ತದೆಯೇ ಇಲ್ಲವೇ ಎಂದು ಕಾದು ನೋಡಬೇಕು.

 

Dk Ravi

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *