ಬಂಡೀಪುರ ಶಿಬಿರದಲ್ಲಿ ಮಾವುತರಿಗೆ ಕೊರೊನಾ: ಆನೆಗಳಿಗೂ ಕೋವಿಡ್ ಪರೀಕ್ಷೆ

ಹೈಲೈಟ್ಸ್‌:

  • ಬಂಡೀಪುರದಲ್ಲಿ ಇಬ್ಬರು ಮಾವುತರಿಗೆ ಕೋವಿಡ್ ಸೋಂಕು
  • ಆನೆ ಹಾಗೂ ಮರಿಗಳ ಜೊತೆ ಒಡನಾಟ ಹೊಂದಿರುವ ಮಾವುತರು
  • 28 ಸಾಕಾನೆಗಳ ಗಂಟಲು ದ್ರವ ಮಾದರಿ ಸಂಗ್ರಹ

ಗುಂಡ್ಲುಪೇಟೆ (ಚಾಮರಾಜ ನಗರ): ಇಬ್ಬರು ಮಾವುತರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದೊಂದಿಗೆ ಅರಣ್ಯದ ಗಡಿ ಹಂಚಿಕೊಂಡಿರುವ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ಆನೆ ಶಿಬಿರದ ಎಲ್ಲಾ ಆನೆಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಶಿಬಿರದ ಇಬ್ಬರು ಮಾವುತರಿಗೆ ಕೋವಿಡ್‌ ಪಾಸಿಟಿವ್‌ ಆಗಿತ್ತು. ಇವರು ಸಾಕಾನೆಗಳು ಮತ್ತು ಮರಿಯಾನೆಗಳ ಸಂಪರ್ಕದಲ್ಲಿದ್ದ ಕಾರಣ, ಸೋಂಕು ತಗುಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ರೀತಿ ಪರೀಕ್ಷೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಮಧುಮಲೈ ಉದ್ಯಾನದ ವೈದ್ಯಾಧಿಕಾರಿ ಡಾ.ರಾಜೇಶ್‌ ನೀಡಿರುವ ಮಾಹಿತಿ ಪ್ರಕಾರ, ಎರಡು ಮರಿಯಾನೆಗಳೂ ಸೇರಿದಂತೆ 28 ಸಾಕಾನೆಗಳ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಉತ್ತರ ಪ್ರದೇಶದ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಸಲುವಾಗಿ ಕಳುಹಿಸಿಕೊಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಚೆನ್ನೈನ ಜೈವಿಕ ಉದ್ಯಾನದ ಎರಡು ಸಿಂಹಗಳಿಗೆ ಕೋವಿಡ್‌ ಪಾಸಿಟಿವ್‌ ಆಗಿದ್ದ ಹಿನ್ನೆಲೆಯಲ್ಲಿ ಮಧುಮಲೈ ಸಾಕಾನೆಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿರುವುದು ಮಹತ್ವ ಪಡೆದುಕೊಂಡಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *