ಕಲಬುರಗಿ : ನಾಯಿ ಕಡಿತ: ಚಿತ್ತಾಪುರದಲ್ಲಿ 30 ಕುರಿಗಳ ಸಾವು
ಕಲಬುರಗಿ : ನಾಯಿ ಕಡಿತದಿಂದ ಸ್ಥಳದಲ್ಲೇ 30 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ನಡೆದಿದೆ.
ರಾವೂರ ನಿವಾಸಿ ಮಲ್ಲಿಕಾರ್ಜುನ ಭೀಮರಾಯ ಪೂಜಾರಿ ಎನ್ನುವವರಿಗೆ ಸೇರಿದ ಕುರಿಗಳು ಬಲಿಯಾಗಿವೆ. ರವಿವಾರ ಮಧ್ಯಾಹ್ನ 3 ಗಂಟೆಗೆ ಈ ಅನಾಹುತ ಜರುಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾಯಿಗಳು ದಾಳಿ ನಡೆಸಿದ ಪರಿಣಾಮ 9 ದೊಡ್ಡ ಕುರಿಗಳು, 21 ಚಿಕ್ಕ ಕುರಿಗಳು ಬಲಿಯಾಗಿವೆ.
ಅಂದಾಜು 2 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ವಾಡಿ ಪಿಎಸ್ಐ ವಿಜಯಕುಮಾರ ಭಾವಗಿ, ಪ್ರಭಾರಿ ಪಿಎಸ್ಐ ದೇವಿಂದ್ರ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.