Mission 2024| ಮೋದಿ ವಿರುದ್ಧ ತೃತೀಯ ರಂಗದೊಂದಿಗೆ ಅಖಾಡಕ್ಕಿಳಿದ ಶರದ್ ಪವಾರ್; ಇಲ್ಲಿದೆ ತೃತೀಯ ರಂಗದ ಕಂಪ್ಲೀಟ್ ಚಿತ್ರಣ!

ಭಾರತೀಯ ರಾಜಕಾರಣ ಮಟ್ಟಿಗೆ ಎರಡು ದಶಕಕ್ಕೆ ಒಂದು ಮುಖ ಅಥವಾ ನಾಯಕತ್ವ ಯಶಸ್ಸಿನ ಉತ್ತುಂಗಕ್ಕೆ ಏರಿ ನಂತರ ಎಡವಿರುವುದು, ರಾಜಕೀಯ ಪ್ರಪಾತಕ್ಕೆ ಕುಸಿದಿರುವುದು ಹೊಸತೇನಲ್ಲ. ಸ್ವಾತಂತ್ರ್ಯ ನಂತರದ ಚುನಾವಣೆ ವ್ಯವಸ್ಥೆಯಲ್ಲಿ ಜವಹರ್​ ಲಾಲ್​ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಹೀಗೆ ಉತ್ತುಂಗಕ್ಕೆ ಏರಿ ಕುಸಿದದ್ದರು. ಒಂದು ಕಾಲದಲ್ಲಿ ಕಾಂಗ್ರೆಸ್​ ಹೆಸರಿನಲ್ಲಿ ಚುನಾವಣೆಗೆ ಕತ್ತೆ ನಿಂತರೂ ಗೆಲ್ಲುತ್ತದೆ ಎಂದ ನಾಡ್ನುಡಿ ಬದಲಾಗಿತ್ತು. ಮತದಾರರು ಈ ಮೂವರ ನಾಯಕತ್ವವನ್ನೂ ಮತ ಚಲಾವಣೆ ಮೂಲಕ ಸೋಲಿಸಿದ್ದ. ತುರ್ತು ಪರಿಸ್ಥಿತಿಯ ನಂತರ ತೃತೀಯ ರಂಗ ಮುನ್ನೆಲೆಗೆ ಬಂದದ್ದು ಇತಿಹಾಸ. ರಾಜೀವ್ ಗಾಂಧಿ-ಅಟಲ್ ಬಿಹಾರಿ ವಾಜಪೇಯಿ ಅವಧಿಯಿಂದ ಸರಿಯಾಗಿ ಮೂರು ದಶಕಗಳ ನಂತರ ಇಂದು ಸಹ ಭಾರತದ ರಾಷ್ಟ್ರ ರಾಜಕಾರಣದಲ್ಲಿ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದ್ದ ಪ್ರಧಾನಿ ನರೇಮದ್ರ ಮೋದಿ ಹವಾ ದಿನಿದಿಂದ ದಿನಕ್ಕೆ ಇಳಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ದಕ್ಷಿಣ ಭಾರದಲ್ಲಿ ಕರ್ನಾಟಕದ ಹೊರತು ಬಿಜೆಪಿ ಪಕ್ಷಕ್ಕೆ ಬೇರೆ ಎಲ್ಲೂ ಗಟ್ಟಿ ನೆಲೆ ಯಾವ ಕಾಲದಲ್ಲೂ ಇರಲಿಲ್ಲ. ಉತ್ತರ ಭಾರತದ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ ಉತ್ತರದಲ್ಲೂ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ. ಸಾಲು ಸಾಲು ರಾಜ್ಯಗಳ ಚುನಾವಣಾ ಫಲಿತಾಂಶ ಇದಕ್ಕೆ ಸಾಕ್ಷಿಯಾಗಿದೆ. ಇದಲ್ಲದೆ, ಭ್ರಷ್ಟಾಚಾರ, ಪೆಟ್ರೋಲ್-ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಮೋದಿ ನಾಯಕತ್ವವನ್ನು ಪ್ರಶ್ನೆ ಮಾಡುತ್ತಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *