ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ ಬಾಯ್ಕಾಟ್​ ಜಾಹ್ನವಿ ಕಪೂರ್ ಅಭಿಯಾನ

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ ನೆಪೋಟಿಸಂ (ಸ್ವಜನಪಕ್ಷಪಾತ) ಪೋಷಿಸುತ್ತಿರುವ ಬಾಲಿವುಡ್​ನ ಹಲವು ಬಲಾಢ್ಯರ ಚಿತ್ರಗಳನ್ನು ನೋಡಬಾರದು ಎಂಭ ಅಭಿಯಾನವೊಂದು ಸೋಷಿಯಲ್​ ಮೀಡಿಯಾದಲ್ಲಿ ಕೆಲವು ತಿಂಗಳಿನಿಂದ ನಡೆಯುತ್ತಿದೆ.

ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತವನ್ನು ಪೋಷಿಸುತ್ತಾರೆ ಎನ್ನಲಾದ ಕರಣ್​ ಜೋಹರ್​, ಸಲ್ಮಾನ್​ ಖಾನ್​ ಮುಂತಾದವರ ಚಿತ್ರಗಳನ್ನು ನೋಡಬಾರದು ಎಂಬ ತೀರ್ಮಾನಕ್ಕೆ ಹಲವರು ಬಂದಂತಿದೆ. ಈ ಸಾಲಿಗೆ ಈಗ ಬೋನಿ ಕಪೂರ್​ ಮತ್ತು ಶ್ರೀದೇವಿ ಅವರ ಮಗಳು ಜಾಹ್ನವಿ ಕೂಡಾ ಸೇರಿಕೊಂಡಿದ್ದಾರೆ.

ಜಾಹ್ನವಿಯನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ್ದು ಕರಣ್​ ಕಪೂರ್​. ಜಾಹ್ನವಿ ಸಹ ನೆಪೋಟಿಸಂನಿಂದಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಸಿಟ್ಟಾಗಿರುವ ಕೆಲವರು, ಆಕೆಯ ಚಿತ್ರಗಳನ್ನು ಬಾಯ್ಕಾಟ್​ ಮಾಡುವ ಬಗ್ಗೆ ತೀರ್ಮಾನಿಸಿದ್ದಾರೆ. ಅದಕ್ಕೆ ಸರಿಯಾಗಿ ಜಾಹ್ನವಿ ಅಭಿನಯದ ಎರಡನೆಯ ಚಿತ್ರವಾದ ‘ಗುಂಜನ್​ ಶರ್ಮಾ: ದಿ ಕಾರ್ಗಿಲ್​ ಗರ್ಲ್​’ ಚಿತ್ರವು ಇದೇ ತಿಂಗಳ 12ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಹೀಗಿರುವಾಗಲೇ, ಸೋಷಿಯಲ್​ ಮೀಡಿಯಾದಲ್ಲಿ ಬಾಯ್ಕಾಟ್​ಜಾಹ್ನವಿಕಪೂತ್​ ಎಂಬ ಹ್ಯಾಶ್​ಟ್ಯಾಗ್​ ಅಭಿಯಾನ ಸಹ ಶುರುವಾಗಿದೆ. ಸುಶಾಂತ್​ ಸಿಂಗ್​ ಸಾವಿನಿಂದ ಮತ್ತು ನೆಪೋಟಿಸಂನಿಂದ ಬೇಸರಗೊಂಡಿರುವವರೆಲ್ಲರೂ ಜಾಹ್ನವಿ ಅಭಿನಯದ ಹೊಸ ಚಿತ್ರವನ್ನು ನೋಡಬೇಡಿ ಎಂದು ಕರೆ ನೀಡುತ್ತಿದ್ದಾರೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ, ಜಾಹ್ನವಿ ಮಾತ್ರ ತನಗೆ ಯಾವುದೂ ಸಂಬಂಧವಿಲ್ಲ ಎನ್ನುವಂತೆ ಇನ್​ಸ್ಟಾಗ್ರಾಂನಲ್ಲಿ ಚಿತ್ರದ ಬಿಹೈಂಡ್​ ದಿ ಸೀನ್ಸ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ಅಭಿಮಾನಿಗಳಿಗೆ ಹೇಳುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *