ರಾಜ್ಯದಲ್ಲಿ ಸೋಂಕು ಇಳಿಕೆ: ಸಾವು ತುಸು ಏರಿಕೆ ಬಾಗಲಕೋಟೆಯಲ್ಲಿ ಶೂನ್ಯ
ಬೆಂಗಳೂರು:- ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ.ಆದರೆ ಸಾವಿನ ಸಂಖ್ಯೆಯಲ್ಲಿ ನಿನ್ನೆಗಿಂತ ತುಸು ಹೆಚ್ಚಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ಪ್ರಕರಣ ದೃಢಪಟ್ಟಿಲ್ಲ. ಬೀದರ್ ನಲ್ಲಿ 1, ವಿಜಯಪುರ, ರಾಯಚೂರಿನಲ್ಲಿ 2, ಯಾದಗಿರಿ, ಗದಗ ಜಿಲ್ಲೆಯಲ್ಲಿ ಕನಿಷ್ಠ 5 ಪ್ರಕರಣಗಳು ದಾಖಲಾಗಿವೆ ಉಳಿದಂತೆ ರಾಜ್ಯದ 21 ಜಿಲ್ಲೆಯಲ್ಲಿ 100 ಕ್ಕಿಂತ ಕಡಿಮೆ ಸೋಂಕು ದೃಢಪಟ್ಟಿದೆ
ಕೊರೊನಾ ಸೋಂಕಿನ ಪಾಸಿಟಿವಿ ಪ್ರಮಾಣ ಶೇ.1.48 ಕ್ಕೆ ಕುಸಿದಿದ್ದು ರಾಜ್ಯದಲ್ಲಿ ಸೋಂಕಿನ ಮರಣ ಪ್ರಮಾಣ ಶೇ.2.96 ಕ್ಕೆ ಏರಿಕೆಯಾಗಿದೆ.ಸದ್ಯ ರಾಜ್ಯದಲ್ಲಿ 37,906ಕ್ಕೆ ಸಕ್ರಿಯ ಪ್ರಕರಣಗಳು ಕುಸಿದಿವೆ.
ರಾಜ್ಯದಲ್ಲಿ ಇಂದು ಹೊಸದಾಗಿ 2,290 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 68 ಮಂದಿ ಸಾವನ್ನಪ್ಪಿದ್ದಾರೆ ಜೊತೆಗೆ 3,045 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ನಿನ್ನೆಗಿಂತ ಚೇತರಿಕೆ ಇಂದು ಕಡಿಮೆಯಾಗಿದೆ.
ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 28,67,158 ಮಂದಿಗೆ ಏರಿಕೆಯಾಗಿದೆ.ಇಲ್ಲಿಯ ತನಕ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 27,93,498 ಕ್ಕೆ ಹೆಚ್ಚಳವಾಗಿದೆ .ಜೊತೆಗೆ 35,731 ಮಂದಿ ಒಟ್ಟಾರೆಯಾಗಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ
ಬೆಂಗಳೂರಿನಲ್ಲಿ ಇಳಿಕೆ
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಗಿಂತ ಸೋಂಕು ಮತ್ತು ಸಾವಿನ ಸಂಖ್ಯೆ ಇಳಿಕೆಯಾಗಿದೆ. ಇಂದು 472 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 12 ಮಂದಿ ಸಾವನ್ನಪ್ಪಿದ್ದಾರೆ.ಜೊತೆಗೆ 814 ಮಂದಿ ಚೇತರಿಸಿಕೊಂಡಿದ್ದಾರೆ.
1.53 ಲಕ್ಷ ಪರೀಕ್ಷೆ:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,53,740 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯ ತನಕ 3,56,30,054ಕ್ಕೆ ಏರಿಕೆಯಾಗಿದೆ ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದ 21 ಜಿಲ್ಲೆಯಲ್ಲಿ 100 ಕ್ಕಿಂತ ಕಡಿಮೆ ಸೋಂಕು ದೃಢಪಟ್ಟಿದೆ.
ಇಂದಿನ ಸೋಂಕು ಸಂಖ್ಯೆ
ಜಿಲ್ಲೆ ಎಷ್ಟು
- ಬಾಗಲಕೋಟೆ – 0
- ಬಳ್ಳಾರಿ – 13
- ಬೆಳಗಾವಿ – 87
- ಬೆಂಗಳೂರು ಗ್ರಾಮಾಂತರ- 13
- ಬೆಂಗಳೂರು ನಗರ. – 472
- ಬೀದರ್ – 1
- ಚಾಮರಾಜನಗರ – 43
- ಚಿಕ್ಕಬಳ್ಳಾಪುರ – 17
- ಚಿಕ್ಕಮಗಳೂರು -69
- ಚಿತ್ರದುರ್ಗ – 30
- ದಕ್ಷಿಣ ಕನ್ನಡ – 209
- ದಾವಣಗೆರೆ -32
- ಧಾರವಾಡ -27
- ಗದಗ – 5
- ಹಾಸನ – 228
- ಹಾವೇರಿ – 11
- ಕಲಬುರಗಿ- 6
- ಕೊಡಗು – 113
- ಕೋಲಾರ -67
- ಕೊಪ್ಪಳ -10
- ಮಂಡ್ಯ – 95
- ಮೈಸೂರು – 216
- ರಾಯಚೂರು -2
- ರಾಮನಗರ – 14
- ಶಿವಮೊಗ್ಗ – 152
- ತುಮಕೂರು – 115
- ಉಡುಪಿ – 131
- ಉತ್ತರ ಕನ್ನಡ – 55
- ವಿಜಯಪುರ – 2
- ಯಾದಗಿರಿ- 5