ಆಡಿಕೊಳ್ಳೋರು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ ರಿಚ್ಚಿ ..! ‘ಸಮುದ್ರ ರಾಜ’ನಾಗಿ ಕಡಲ ತಡಿಯ ಕಥೆ ಹೇಳ್ತಾನೆ ರಿಚರ್ಡ್ ಆಂಟನಿ !

ಅವನೇ ಶ್ರೀಮನ್ನಾರಾಯಣ ಸಿನಿಮಾ ವಿಚಾರದಲ್ಲಿ ತಮ್ಮ ಮೇಲಿನ ಆರೋಪಗಳಿಗೆಲ್ಲಾ ಜುಲೈ 11ಕ್ಕೆ ಉತ್ತರ ಕೊಡ್ತೀನಿ ಅಂತ ರಿಷಬ್​ ಶೆಟ್ಟಿ 10 ದಿನಗಳ ಹಿಂದೆ ಹೇಳಿದ್ರು.. 3 ದಿನಗಳ ಹಿಂದೆ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ತಮ್ಮ ಬ್ಯಾನರ್​​ನ 10ನೇ ಚಿತ್ರವನ್ನು ಅದೇ ದಿನ ಅನೌನ್ಸ್​ ಮಾಡೋದಾಗಿ ಹೇಳಿದ್ರು.. ಅಲ್ಲಿಗೆ ಅಭಿಮಾನಿಗಳು ಜುಲೈ 11ಕ್ಕೆ ರಕ್ಷಿತ್​ ಶೆಟ್ಟಿ ಕೊಡುವ ಬ್ರೇಕಿಂಗ್​ ನ್ಯೂಸ್​ ಏನು ಅನ್ನೋದನ್ನ ಗೆಸ್​ ಮಾಡಿಬಿಟ್ಟಿದ್ರು.. ಕೊನೆಗೂ ಅಭಿಮಾನಿಗಳ ಲೆಕ್ಕಚಾರ ಪಕ್ಕಾ ಆಗಿದೆ.. ಹೊಂಬಾಳೆ ​​ ಮತ್ತು ರಕ್ಷಿತ್​ ಶೆಟ್ಟಿ ಕಾಂಬಿನೇಷನ್​ ಪ್ರಾಜೆಕ್ಟ್​ ಫಿಕ್ಸ್​ ಆಗಿದೆ..

ಕೊನೆಗೂ ರಕ್ಷಿತ್​ ಶೆಟ್ಟಿ ಕೊಟ್ಟೇಬಿಟ್ರು ಬ್ರೇಕಿಂಗ್​ ನ್ಯೂಸ್ ! ಹೊಂಬಾಳೆ ಫಿಲ್ಮ್ಸ್​​​​ ಜೊತೆ ಡ್ರೀಮ್​ ಪ್ರಾಜೆಕ್ಟ್​ ಅನೌನ್ಸ್​ !
ರಿಚರ್ಡ್ ಆಂಟನಿ ಈಸ್​ ಬ್ಯಾಕ್​.. ಅಷ್ಟೇ ಅಲ್ಲ ಡೈರೆಕ್ಟರ್​ ರಕ್ಷಿತ್​ ಶೆಟ್ಟಿ ಈಸ್​ ಬ್ಯಾಕ್ ಅಂತ ಕೂಡ ಹೇಳ್ಬೋದು.. ಸಿಂಪಲ್​ ಸ್ಟಾರ್​ ಡ್ರೀಮ್​ ಪ್ರಾಜೆಕ್ಟ್​ ಅಷ್ಟೇ ಅಲ್ಲ, ಅವರ ಅಭಿಮಾನಿಗಳ ಬಹುನಿರೀಕ್ಷಿತ ಸಿನಿಮಾ ಕೊನೆಗೂ ಘೋಷಣೆಯಾಗಿದೆ.. 2014ರಲ್ಲಿ ಬಂದಿದ್ದ ಕಲ್ಟ್​​ ಕ್ಲಾಸಿಕ್​ ಸಿನಿಮಾ ಉಳಿದವರು ಕಂಡಂತೆ.. ಆ ಚಿತ್ರ ಬಾಕ್ಸಾಫೀಸ್​ನಲ್ಲಿ ಸೌಂಡ್​ ಮಾಡ್ದೇ ಇದ್ರು, ಒಂದು ವರ್ಗದ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು.. ಆ ಚಿತ್ರದ ಪ್ರೀಕ್ವೆಲ್​ ಬಗ್ಗೆ ರಕ್ಷಿತ್​ ಶೆಟ್ಟಿ ಸಾಕಷ್ಟು ಸಲ ಮಾತನಾಡಿದ್ರು.. ಇದೀಗ ಆ ಚಿತ್ರವನ್ನ ಕೈಗೆತ್ತಿಕೊಂಡಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ..

‘When the tide brings back the DEAD, the shores bleed RED ಅಂತ ಬರೆದು ಗುರುವಾರ ಹೊಂಬಾಳೆ ಫಿಲ್ಮ್ಸ್​​​ ತಮ್ಮ ಬ್ಯಾನರ್​​ನ ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಟ್ಟಿದ್ರು.. ಆ ಪೋಸ್ಟರ್​ ನೋಡಿ ಇದು ಉಳಿದವರು ಕಂಡಂತೆ ಪ್ರೀಕ್ವೆಲ್​ ಅಂತ ಅಭಿಮಾನಿಗಳು ಗೆಸ್​ ಮಾಡಿದ್ರು.. ಅಭಿಮಾನಿಗಳ ಲೆಕ್ಕಾಚಾರ ಪಕ್ಕಾ ಆಯ್ತು.. ಹೊಂಬಾಳೆ ಫಿಲ್ಮ್ಸ್​​ ಬ್ಯಾನರ್​​​ ಜೊತೆ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಕೈ ಜೋಡಿಸಿದ್ದಾಯ್ತು.. ರಿಚರ್ಡ್ ಆಂಟನಿ ಅಲಿಯಾಸ್​ ರಿಚ್ಚಿ ಮತ್ತೆ ಅಖಾಡಕ್ಕೆ ಇಳಿಯೋಕೆ ಮುಹೂರ್ತ ಫಿಕ್ಸ್​ ಆಗಿದೆ..

ಮೊದಲು ನಮ್ಮ ಕೆಲಸ ಮಾತನಾಡಲಿ ಉಳಿದವೆಲ್ಲ ತದ ನಂತರ ! 
ಅವನೇ ಶ್ರೀಮನ್ನಾರಾಯಣ ಚಿತ್ರದ ಲಾಭ ನಷ್ಟದ ವಿಚಾರದಲ್ಲಿ ರಕ್ಷಿತ್​ ಶೆಟ್ಟಿ ಮೇಲೆ ಒಂದಷ್ಟು ಆರೋಪಗಳು ಕೇಳಿ ಬಂದಿತ್ತು.. ಅದಕ್ಕೆಲ್ಲಾ ಜುಲೈ 11ಕ್ಕೆ ಉತ್ತರ ಕೊಡ್ತೀನಿ ಅಂತ ಹೇಳಿದ್ರು.. ರಿಚರ್ಡ್​​​ ಆಂಟನಿ ಸಿನಿಮಾ ಅನೌನ್ಸ್​ ಮಾಡಿ ಟ್ವೀಟ್​ ಮಾಡಿರೋ ರಕ್ಷಿತ್​ ಶೆಟ್ಟಿ, ‘ಮೊದಲು ನಮ್ಮ ಕೆಲಸ ಮಾತನಾಡಲಿ ಉಳಿದವೆಲ್ಲ ತದ ನಂತರ’ ಅಂತ ಬರೆದುಕೊಂಡಿದ್ದಾರೆ.. ರಿಚರ್ಡ್​ ಆಂಟನಿ ಸಿನಿಮಾ ಮೂಲಕ ತಮ್ಮ ಬಗ್ಗೆ ಮಾತನಾಡಿದವರಿಗೆಲ್ಲಾ ಉತ್ತರ ಕೊಡುವ ಸಂಕಲ್ಪ ಮಾಡಿದ್ದಾರೆ..

ಮತ್ತೆ ಶೂಟ್​ ಮಾಡೋಕೆ ಬರ್ತಿದ್ದಾನೆ ರಿಚರ್ಡ್​​ ಆಂಟನಿ ! !
7 ವರ್ಷಗಳ ಹಿಂದೆ ಬಂದಿದ್ದ ಉಳಿದವರು ಕಂಡಂತೆ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.. ಆದ್ರೆ, ರಕ್ಷಿತ್​ ಶೆಟ್ಟಿ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.. ಆದ್ರು ಉಡುಪಿ, ಮಲ್ಪೆ ಭಾಗದ ಚಿತ್ರಣ, ಸಮುದ್ರ ತೀರ, ಹುಲಿವೇಷ ಅಲ್ಲಿನ ಜನರ ಮ್ಯಾನರಿಸಂ ಕೆಲವರಿಗೆ ಬಹಳ ಇಷ್ಟವಾಗಿತ್ತು.. ಒಂದು ಅಪರಾಧವನ್ನು ವಿವಿಧ ಕೋನಗಳಲ್ಲಿ ಕಟ್ಟಿಕೊಟ್ಟಿದ್ದ ಬಗೆ ಮೆಚ್ಚುಗೆ ಪಡೆದುಕೊಂಡಿತ್ತು.. ಅದ್ರಲ್ಲಿ ರಿಚರ್ಡ್​ ಆಂಟನಿ ಅಲಿಯಾಸ್ ರಿಚ್ಚಿ ಮ್ಯಾನರಿಸಂ ಬೇರೆಯದ್ದೇ ಫೀಲ್​ ಕೊಟ್ಟಿತ್ತು..

ಇದೀಗ ರಿಚರ್ಡ್​ ಆಂಟನಿ ಚಿತ್ರದಲ್ಲಿ ಉಳಿದವರು ಕಂಡಂತೆ ಚಿತ್ರದ ಹಿಂದಿನ ಮತ್ತು ಮುಂದಿನ ಕಥೆ ಹೇಳೊಕೆ ರೆಡಿಯಾಗಿದ್ದಾರೆ ರಕ್ಷಿತ್​ ಶೆಟ್ಟಿ.. ವಿಶೇಷ ಅಂದ್ರೆ, ರಕ್ಷಿತ್​ ಶೆಟ್ಟಿ ಸ್ವತಃ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ.. ಸಿನಿಕರಿಯರ್​ನಲ್ಲಿ ರಕ್ಷಿತ್​ ಶೆಟ್ಟಿ ನಿರ್ದೇಶನ ಮಾಡಿದ್ದು ಒಂದೇ ಸಿನಿಮಾ ಅದು ಉಳಿದವರು ಕಂಡಂತೆ.. ಇದೀಗ ಅದೇ ಕಥೆಯ ಹಿಂದು ಮುಂದಿನ ಕಥೆಯನ್ನ ಹೇಳೋಕೆ ಮತ್ತೊಮ್ಮೆ ಡೈರೆಕ್ಟರ್​ ಸೀಟ್​ನಲ್ಲಿ ಕೂರ್ತಿದ್ದಾರೆ..

‘ಲಾರ್ಡ್ ಆಫ್ ದಿ ಸೀ’ ಅನ್ನೋ ಟ್ಯಾಗ್​ಲೈನ್​ ಜೊತೆಗೆ ರಿಚರ್ಡ್​ ಆಂಟನಿ ಸಿನಿಮಾ ಟೀಸರ್​ ರಿಲೀಸ್​ ಆಗಿದೆ.. ಸಮುದ್ರ ರಾಜ ಅಂದ್ರೆ ರಿಚ್ಚಿ ಪಾತ್ರವನ್ನು ಬಹಳ ದೊಡ್ಡ ಮಟ್ಟದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ.. ಉಳಿದವರು ಕಂಡಂತೆ ಚಿತ್ರದಲ್ಲಿ ಐದು ಪ್ರಧಾನ ಪಾತ್ರಗಳನ್ನು ಪಂಚ ಭೂತಗಳಿಗೆ ಹೋಲಿಸಿ, ರಕ್ಷಿತ್​ ಶೆಟ್ಟಿ ಸಿನಿಮಾ ಮಾಡಿದ್ದರು.. ಅದ್ರಲ್ಲೂ ರಿಚ್ಚಿ ಅಂದ್ರೆ, ಬೆಂಕಿ.. ಈ ಬಾರಿ ಬೆಂಕಿಉಂಡೆಯಂತೆ ರಚ್ಚಿ ಧಗಧಗಿಸೋದು ಕನ್ಫರ್ಮ್​ ಆಗೋಗಿದೆ..

ಪ್ಯಾನ್​ ಇಂಡಿಯಾ ಸಿನಿಮಾ ಆಗುತ್ತಾ ರಿಚರ್ಡ್​​ ಆಂಟನಿ ? ನವರಿಯಲ್ಲಿ ಸೆಟ್ಟೇರಲಿದೆ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್​​ ಸಿನಿಮಾ !
ಇನ್ನು ರಿಚರ್ಡ್​ ಆಂಟನಿ ಗ್ಲಿಂಪ್ಸ್​ ನೋಡಿ, ರಕ್ಷಿತ್​ ಶೆಟ್ಟಿ ಅಭಿಮಾನಿಗಳು ಫಿದಾ ಆಗಿದ್ದಾರೆ.. ತಮ್ಮದೇ ರೀತಿಯಲ್ಲಿ ಕಥೆಯನ್ನು ಊಹಿಸಿಕೊಂಡು ಥ್ರಿಲ್ಲಾಗಿದ್ದಾರೆ.. ಬಾಲು ಪಾತ್ರಧಾರಿ ಅಚ್ಯುತ್​ ಕುಮಾರ್​​​ ವಾಯ್ಸ್​ನಲ್ಲಿ ಟೀಸರ್​ ಮೂಡಿ ಬಂದಿದೆ.. 3 ಜನ ಸತೋಗಿದ್ದಾರೆ.. ಆದ್ರೆ, ಇವನು ಮಾತ್ರ ಬರೋದು ಬೇಡ ಅಂತ ಹೇಳ್ತಿರೋದು ನೋಡಿದ್ರೆ, ಸತ್ತಿರೋ ರಿಚ್ಚಿ ವಾಪಸ್​ ಬಂದ್ರೆ ಏನೆಲ್ಲಾ ಆಗುತ್ತೆ ಅನ್ನೋ ಅರ್ಥದಲ್ಲಿ ರಿಚರ್ಡ್​ ಆಂಟನಿ ಕಥೆ ಸುತ್ತುತ್ತೆ ಅನ್ನೋದು ಕೆಲವರ ವಾದ.. ಒಟ್ನಲ್ಲಿ ಸಿಂಗಲ್​​ ಗ್ಲಿಂಪ್ಸ್​​ ಟೀಸರ್​ನಿಂದ್ಲೇ ಸಿನಿಮಾ ಸಿಕ್ಕಾಪಟ್ಟೆ ಹೈಪ್​ ಕ್ರಿಯೇಟ್​ ಮಾಡಿದೆ..

ಹೊಂಬಾಳೆ ಫಿಲ್ಮ್ಸ್​​ ಮತ್ತು ರಕ್ಷಿತ್​ ಶೆಟ್ಟಿ ಕಾಂಬಿನೇಷನ್​ನಲ್ಲಿ ರಿಚರ್ಡ್​ ಆಂಟನಿ ಸಿನಿಮಾ ಬರ್ತಿರೋದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.. ಹೊಂಬಾಳೆ ಸಂಸ್ಥೆ ಬರೀ ಪ್ಯಾನ್​ ಇಂಡಿಯಾ ಚಿತ್ರಗಳನ್ನೇ ಮಾಡ್ತಾ ಬರ್ತಿದೆ.. ರಿಚರ್ಡ್​ ಆಂಟನಿ ಕೂಡ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಬರುತ್ತಾ ಅನ್ನೋದ್ರ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ.. ಬೇರೆ ಭಾಷಿಕರು ಉಳಿದವರು ಕಂಡಂತೆ ಸಿನಿಮಾ ನೋಡಿಲ್ಲ.. ಹಂಗಾಗಿ ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಸಿನಿಮಾ ಬರುತ್ತಾ ಇಲ್ವಾ ಅನ್ನೋದು ಗೊಂದಲ ಮೂಡಿದೆ.. ಆ ಸಿನಿಮಾ ನೋಡ್ದೆ ಇದ್ರು, ಈ ಸಿನಿಮಾ ನೋಡ್ಬೋದು ಅನ್ನೋದೇ ಆದ್ರೆ, ರಿಚರ್ಡ್​ ಆಂಟನಿ ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಗನ್ ಹಿಡ್ದು ಶೂಟ್​ ಮಾಡೋದು ಪಕ್ಕಾ..

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *