ಕೊರೊನಾ ಸೋಂಕಿನ ಪ್ರಮಾಣ ಶೇ.1.42 ಕ್ಕೆ ಕುಸಿತ
ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ತುಸು ಇಳಿಕೆಯಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಹೆಚ್ಚಾಗಿದೆ.
ರಾಜ್ಯದಲ್ಲಿ ಸೋಂಕಿನ ಶೇಕಡಾವಾರು ಪ್ರಮಾಣ ಶೇ. 1.42ಕ್ಕೆ ಇಳಿದಿದ್ದು, ಸಾವಿನ ಪ್ರತಿಶತ ಶೇ.2.42ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 32,383 ಕ್ಕೆ ಕುಸಿದಿದೆ.
ಬೀದರ್, ಗದಗ, ಹಾವೇರಿ,ಯಾದಗಿರಿ ಜಿಲ್ಲೆಯಲ್ಲಿ ತಲಾ 2 ಸೋಂಕು , ಕೊಪ್ಪಳ 3, ಬಾಗಲಕೋಟೆ, ರಾಯಚೂರು ತಲಾ 4, ಬಳ್ಳಾರಿ 5, ಕಲಬುರಗಿ ಜಿಲ್ಲೆಯಲ್ಲಿ 8 ಸೋಂಕು ಪ್ರಕರಣಗಳು ಧೃಢಪಟ್ಟಿವೆ.
ರಾಜ್ಯದಲ್ಲಿ ಇಂದು ಹೊಸದಾಗಿ 1977ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 48 ಮಂದಿ ಸಾವನ್ನಪ್ಪಿದ್ದಾರೆ.ಜೊತೆಗೆ 3,188 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ
ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 28,78,564 ಮಂದಿಗೆ ಏರಿಕೆಯಾಗಿದೆ.ಇಲ್ಲಿಯ ತನಕ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,10,121ಕ್ಕೆ ಹೆಚ್ಚಳವಾಗಿದೆ .
ಜೊತೆಗೆ ಒಟ್ಟಾರೆಯಾಗಿ 36,037 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ
ಹಲವು ಜಿಲ್ಲೆಗಳಲ್ಲಿ ಸೋಂಕು ತುಸು ಏರಿಕೆಯಾಗಿದ್ದು ಇನ್ನೂ ಕೆಲವು ಜಿಲ್ಲೆಗಳಲ್ಲಿ ನಿನ್ನೆಗಿಂತ ಕಡಿಮೆ ಸೋಂಕಿನ ಸಂಖ್ಯೆ ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಹೆಚ್ಚಳ
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಗಿಂತ ಸೋಂಕು ಏರಿಕೆಯಾಗಿದ್ದು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಇಂದು 462 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 10 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ 501 ಮಂದಿ ಚೇತರಿಸಿಕೊಂಡಿದ್ದಾರೆ.
1.38ಲಕ್ಷ ಪರೀಕ್ಷೆ:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 138,274 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯ ತನಕ 3,64,31,379ಕ್ಕೆ ಏರಿಕೆಯಾಗಿದೆ ಆರೋಗ್ಯ ಇಲಾಖೆ ತಿಳಿಸಿದೆ.
ಇಂದಿನ ಸೋಂಕು ಸಂಖ್ಯೆ
ಜಿಲ್ಲೆ ಎಷ್ಟು
- ಬಾಗಲಕೋಟೆ – 4
- ಬಳ್ಳಾರಿ – 5
- ಬೆಳಗಾವಿ – 94
- ಬೆಂಗಳೂರು ಗ್ರಾಮಾಂತರ- 56
- ಬೆಂಗಳೂರು ನಗರ. – 462
- ಬೀದರ್ – 2
- ಚಾಮರಾಜನಗರ – 31
- ಚಿಕ್ಕಬಳ್ಳಾಪುರ – 22
- ಚಿಕ್ಕಮಗಳೂರು -109
- ಚಿತ್ರದುರ್ಗ – 27
- ದಕ್ಷಿಣ ಕನ್ನಡ – 224
- ದಾವಣಗೆರೆ -23
- ಧಾರವಾಡ -12
- ಗದಗ – 2
- ಹಾಸನ – 158
- ಹಾವೇರಿ – 2
- ಕಲಬುರಗಿ- 8
- ಕೊಡಗು – 73
- ಕೋಲಾರ -36
- ಕೊಪ್ಪಳ -3
- ಮಂಡ್ಯ – 51
- ಮೈಸೂರು – 197
- ರಾಯಚೂರು -4
- ರಾಮನಗರ – 16
- ಶಿವಮೊಗ್ಗ – 71
- ತುಮಕೂರು – 86
- ಉಡುಪಿ – 110
- ಉತ್ತರ ಕನ್ನಡ – 71
- ವಿಜಯಪುರ – 11
- ಯಾದಗಿರಿ- 2