ಹಾಡಹಗಲೇ ಆರ್‌ಟಿಐ ಕಾರ್ಯಕರ್ತನ ಕೈ-ಕಾಲು ಕತ್ತರಿಸಿ ಪರಾರಿಯಾದ ಕಿಡಿಗೇಡಿಗಳು!

ಹೈಲೈಟ್ಸ್‌:

  • ಆರ್‌ಟಿಐ ಕಾರ್ಯಕರ್ತನ ಕೈ-ಕಾಲು ಕತ್ತರಿಸಿ ಪರಾರಿಯಾದ ಕಿಡಿಗೇಡಿಗಳು
  • ತಾವರೆಕೆರೆ ಮೂಲದ ವೆಂಕಟೇಶ್‌ ಮಾಮಯ್ಯ ಹಲ್ಲೆಗೊಳಗಾದವರು
  • ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಂದ ಕಿಡಿಗೇಡಿಗಳಿಂದ ದುಷ್ಕೃತ್ಯ

ರಾಮನಗರ: ಆರ್‌ಟಿಐ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾವರೆಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಹೊರವಲಯದ ಮಾಗಡಿ ರಸ್ತೆ ತಾವರೆಕೆರೆ ಮೂಲದ ವೆಂಕಟೇಶ್‌ ಮಾಮಯ್ಯ (45) ಹಲ್ಲೆಗೊಳಗಾದವರು. ಅವರ ಸ್ಥಿತಿ ಚಿಂತಾಜನಕವಾಗಿದೆ. ಮಾಗಡಿ ರಸ್ತೆಯ ತಾವರೆಕೆರೆ ಪೊಲೀಸ್‌ ಠಾಣೆಯ ಕೂಗಳತೆ ದೂರದಲ್ಲೇ ಈ ಹಲ್ಲೆ ನಡೆದಿದ್ದು, ವೆಂಕಟೇಶ್‌ ಅವರು ತಮ್ಮ ತೋಟದಲ್ಲಿರುವಾಗ ಮುಖ ಮುಚ್ಚಿಕೊಂಡು ದಾಳಿ ಇಟ್ಟ ನಾಲ್ವರು ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳು ನಡೆಸಿದ ಮಾರಣಾಂತಿಕ ಹಲ್ಲೆಯ ತೀವ್ರತೆಗೆ ವೆಂಕಟೇಶ್‌ ಅವರ ಕೈ-ಕಾಲು ತುಂಡಾಗಿ ಪ್ರತ್ಯೇಕಗೊಂಡಿವೆ. ಸದ್ಯ ಅವರನ್ನು ಸುಂಕದಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ವೆಂಕಟೇಶ್‌ ಅನೇಕ ವರ್ಷಗಳಿಂದಲೂ ಆರ್‌ಟಿಐ ಕಾರ‍್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಸ್ಥಳೀಯರಿಂದಲೂ ಸಾಕಷ್ಟು ವಿರೋಧ ಬೆಳೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆದಿರಬಹುದು ಎಂದು ಪೊಲೀ ಸರು ಶಂಕಿಸಿದ್ದಾರೆ. ಈ ಸಂಬಂಧ ರಾಮನಗರ ಎಸ್‌ಪಿ ಮೂರು ತಂಡ ರಚಿಸಿದ್ದು, ಹಲ್ಲೆಗೆ ನಿಖರ ಕಾರಣ ಏನು ಎಂಬವುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *