ಖ್ಯಾತ ಜ್ಯೋತಿಷಿ ಪಂಡಿತ್ ದಾಮೋದರ್ ಭಟ್ ಅವರಿಂದ ದೈನಂದಿನ ರಾಶಿ ಭವಿಷ್ಯ…! 29/09/21

ಮೇಷರಾಶಿ
ಇಂದು ನೀವು ಭಾವನಾತ್ಮಕ ಮತ್ತು ಹತಾಶೆಯನ್ನು ಹೊಂದುತ್ತೀರಿ. ನಿಮ್ಮ ಬಾಂಧವ್ಯಗಳನ್ನು ಸದೃಢಗೊಳಿಸಲು ನೀವು ವಿಶೇಷ ಪ್ರಯತ್ನಗಳನ್ನು ಮಾಡುತ್ತೀರಿ. ಬದ್ಧತೆಗಳನ್ನು ಭವಿಷ್ಯಕ್ಕೆ ಭದ್ರತೆಯಾಗಿ ಕಾಣುತ್ತೀರಿ. ಇದರ ಫಲಿತಾಂಶದಿಂದ ನೀವು ಸದೃಢ, ದೀರ್ಘಾವಧಿ ಬಂಧಗಳನ್ನು ಬೆಳೆಸಿಕೊಳ್ಳುತ್ತೀರಿ.

ವೃಷಭ ರಾಶಿ
ವಿಷಯಗಳು ಅತ್ಯಂತ ಕಠಿಣ ಹಾಗೂ ಸಂಕೀರ್ಣವಾಗುತ್ತವೆ. ಇಂದು ಹಿನ್ನಡೆ ಮತ್ತು ಸವಾಲುಗಳಿಗೆ ಸಜ್ಜಾಗಿರಿ. ವಿಷಯ ಎಷ್ಟೇ ದೊಡ್ಡದಾಗಿದ್ದರೂ, ನಿಮ್ಮ ಸಾಮರ್ಥ್ಯ, ನಿಮ್ಮ ವ್ಯವಹಾರ ಕುಶಲತೆ ನಿಮ್ಮನ್ನು ಮುನ್ನಡೆಸುತ್ತದೆ. ಗಮನ ಕೇಂದ್ರೀಕರಿಸಿ ಹಾಗೂ ಎಚ್ಚರದಿಂದಿರಿ. ಶಾಂತವಾಗಿ ಹಾಗೂ ಸೂಕ್ಷ್ಮವಾಗಿ ವ್ಯವಹರಿಸಿ. ನಿಮಗೆ ಬೇಕಾದುದು ಅಷ್ಟೇ. ಯಾವುದೇ ಸಂಕಟ ಅಥವಾ ದ್ವಂಧ್ವ ನಿಮ್ಮನ್ನು ತಡೆಯಲಾರದು. ನೀವು ಹಾರಾಡುವ ಬಣ್ಣಗಳೊಂದಿಗೆ ಹೊರಬರುತ್ತೀರಿ.

ಮಿಥುನ ರಾಶಿ
ಇಂದು ನೀವು ಸ್ಮರಣೆಗಳಲ್ಲಿ ಮುಳುಗಿ ಹೋಗುತ್ತೀರಿ. ನೀವು ಹಳೆಯ ನೆನಪುಗಳ ಮನಸ್ಥಿತಿಯಲ್ಲಿರುತ್ತೀರಿ. ಬೌದ್ಧಿಕ ಅನ್ವೇಷಣೆಗಳು ನಿಮ್ಮನ್ನು ಆಕರ್ಷಿಸುತ್ತವೆ. ನಿಮ್ಮ ಭೂತವು ಪ್ರಸ್ತುತ ಹಾಗೂ ಭವಿಷ್ಯಕ್ಕೆ ನೆರಳು ಬೀಳುವಂತೆ ಮಾಡಬೇಡಿ.

ಕಟಕ ರಾಶಿ
ನಿಮ್ಮ ದಿನವು ಉಲ್ಲಾಸದ ಸ್ಫೂರ್ತಿಗಳಿಂದ ಕೂಡಿರುತ್ತದೆ. ನೀವು ಸಂಪೂರ್ಣ ಜೀವಂತಿಕೆಯ ಭಾವನೆ ಹೊಂದಿದ್ದು, ಅತ್ಯಂತ ಉತ್ಸಾಹದಲ್ಲಿರುವುದರಿಂದ ಅದು ಅರ್ಥವಿಲ್ಲದ ಚಟುವಟಿಕೆಗಳು ಅಥವಾ ಕೆಲಸಗಳಾದರೂ ನೀವು ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ಗಾರ್ಡನಿಂಗ್, ಬೇಕಿಂಗ್ ಮತ್ತು ಸಿಹಿಯಾದ ಸಂತೋಷಕೂಟವನ್ನೂ ಆಯೋಜಿಸಲು ಪರಿಪೂರ್ಣ ದಿನ. ತಾರೆಗಳು ಕೂಡಾ ನಿಮ್ಮನ್ನು ಹೊರಗಡೆ ನಿಮ್ಮ ಪ್ರಿಯತಮೆಯೊಂದಿಗೆ ಭಾವನಾತ್ಮಕವಾಗಿ, ಆರ್ಥಿಕವಾಗಿ ಅಥವಾ ಸಮಯವನ್ನು ಕಳೆಯುವ ಕಾಲ ಎಂದು ಉತ್ತೇಜಿಸುತ್ತಿವೆ.

ಸಿಂಹ ರಾಶಿ
ಮಾರಾಟ ಮತ್ತು ಮಾರ್ಕೆಟಿಂಗ್ ವಿಭಾಗಗಳಲ್ಲಿ ವ್ಯವಹರಿಸುವವರು ಯಶಸ್ವಿ ಪ್ರಸ್ತುತಪಡಿಸುವಿಕೆ ಮತ್ತು ಪ್ರಗತಿಶೀಲ ಸಭೆಗಳನ್ನು ಕಾಣುತ್ತೀರಿ. ಒಂದು ಅಥವಾ ಎರಡು ಸಭೆಗೆ ತಡವಾಗಬಹುದು. ನಿಮ್ಮ ಆಂತರಿಕ ಸಾಮರ್ಥ್ಯಗಳನ್ನು ಗುರುತಿಸಿ ಮತ್ತು ಮುಂದಿನ ವಾರ ನಿಮ್ಮ ಮೌಲ್ಯವನ್ನು ಸಾಬೀತುಪಡಿಸಿ.

ಕನ್ಯಾ ರಾಶಿ
ನಿಮ್ಮ ಒತ್ತಡದ ವೇಳಾಪಟ್ಟಿಯ ನಡುವೆ ನವೋತ್ಸಾಹ ಮತ್ತು ವಿಶ್ರಾಂತಿ ನೀಡುವ ರಜೆಯನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದು ಮುಂದೆ ಬರಲಿರುವ ಯುದ್ಧಗಳಿಗೆ ಸಿದ್ಧವಾಗಲು ಅತ್ಯಂತ ಅಗತ್ಯವಾದ ಬಿಡುವಾಗಿದೆ. ಸಾಮಾಜಿಕ ಸಂತೋಷಕೂಟಗಳು ನಿಮಗಾಗಿ ಕಾದಿವೆ. ಸಿದ್ಧರಾಗಿರಿ. ಜನರೊಂದಿಗೆ ಸಂವಹನ ನಡೆಸುವುದು ಅನುಕೂಲಕರವಾಗಲಿದೆ.

ತುಲಾ ರಾಶಿ
ನಿಮ್ಮ ಖಾಸಗಿ ಜೀವನಕ್ಕೆ ಹೆಚ್ಚು ಗಮನ ನೀಡುವ ಸಾಧ್ಯತೆ ಇದೆ. ನಿಮ್ಮ ಮನೆಯ ಒಳಾಂಗಣ ಬದಲಾಯಿಸಬಹುದು ಮತ್ತು ಮನೆಯನ್ನು ಅಲಂಕರಿಸಲು ಹೊಸ ಗ್ಯಾಡ್ಜೆಟ್ ಗಳನ್ನು ಕೊಳ್ಳಬಹುದು. ಇಂದು ನಿಮ್ಮ ಕುಟುಂಬದೊಂದಿಗೆ ಕೊಂಚ ಸಮಯ ಕಳೆಯುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ
ಆರೋಗ್ಯವೇ ಭಾಗ್ಯ, ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದು ನಿಮ್ಮ ದಿನಚರಿಯ ಮೇಲೆ ಖಂಡಿತ ಪರಿಣಾಮ ಬೀರುತ್ತದೆ. ನೀವು ಎಚ್ಚರಿಕೆಯಿಂದ ಇರದಿದ್ದರೆ ಅಥವಾ ವಿಶ್ರಾಂತಿ ತಪ್ಪಿಸಿದರೆ ನಿಮ್ಮ ಆರೋಗ್ಯ ಏರುಪೇರಾಗುವ ಸಾಧ್ಯತೆ ಇದೆ. ನಿಮ್ಮ ವೇಳಾಪಟ್ಟಿಗೆ ವ್ಯಾಯಾಮ ಮತ್ತು ಪೌಷ್ಠಿಕತೆಯ ಸೇರ್ಪಡೆಯಿಂದ ಖಂಡಿತವಾಗಿಯೂ ಆರೋಗ್ಯಕರ ಜೀವನ ಮುಂದಿದೆ.

ದನುಷ್ಯ ರಾಶಿ
ಇಂದು ನಿಮಗೆ ಗೆಲುವು ದೊರೆಯುವ ದಿನವಾಗಿದೆ. ಯಾವುದೇ ಸವಾಲನ್ನು ತೆಗೆದುಕೊಳ್ಳಿ, ಯಶಸ್ಸಿನ ಚೆಂಡು ನಿಮ್ಮ ಅಂಗಳದಲ್ಲಿರುತ್ತದೆ. ನೀವು ಇಂದು ನಿಮ್ಮ ಅಧೀನದ ಉದ್ಯೋಗಿಗಳನ್ನು ಮುನ್ನಡೆಸುವ ಕಿಂದರಿ ಜೋಗಿಯಾಗುತ್ತೀರಿ, ಅವರು ನಿಮ್ಮ ಮಾರ್ಗದರ್ಶನ ಕೇಳುತ್ತಾರೆ. ನಿಮ್ಮ ನಾಯಕತ್ವ ಅವರನ್ನು ಪ್ರೇರೇಪಿಸುತ್ತದೆ ಮತ್ತು ಇದು ದಿನದ ಅಂತ್ಯಕ್ಕೆ ನಿಮ್ಮನ್ನು ಸಂತೋಷದ ಜೀವವಾಗಿಸುತ್ತದೆ.

ಮಕರ ರಾಶಿ
ಭಾವುಕರಾಗುವುದು ಅನುಕೂಲಕರವಲ್ಲ. ಇದು ನಿಮ್ಮ ವೃತ್ತಿ ಅಥವಾ ವೈಯಕ್ತಿಕ ಜೀವನದ ದಾರಿಯಲ್ಲಿ ಬರುತ್ತದೆ. ನಿಮ್ಮ ಸುತ್ತಲೂ ಇರುವವರು ಇದನ್ನು ಅವರ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ ಮತ್ತು ನಿಮ್ಮ ಕಾಲೆಳೆಯಲು ಪ್ರಯತ್ನಿಸುತ್ತಾರೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಯಶಸ್ಸಿನಲ್ಲಿರುವ ಅಡೆತಡೆಗಳನ್ನು ನಿವಾರಿಸುತ್ತದೆ.

ಕುಂಭ ರಾಶಿ
ನೀವು ಇಂದು ಅತ್ಯಂತ ಹುರುಪು ಮತ್ತು ಅತ್ಯಂತ ಉತ್ಸಾಹದಲ್ಲಿರುವುದರಿಂದ ನಿಮ್ಮ ಪ್ರತಿಸ್ಪರ್ಧಿಗಳು ಆಶ್ಚರ್ಯಪಡುತ್ತಾರೆ. ನೀವು ಇಂದು ಕಾಣುವುದೆಲ್ಲಾ ಮಾನದಂಡ ರೂಪಿಸುವುದು ಮತ್ತು ಅದಕ್ಕಾಗಿ ಎಲ್ಲ ಅಡೆತಡೆಗಳೂ ಕಣ್ಮರೆಯಾಗುವಂತೆ ಕಾಣುತ್ತವೆ. ನಿಮ್ಮ ಸುತ್ತಲಿರುವ ಎಲ್ಲರ ಹೃದಯಗಳನ್ನು ಯಶಸ್ಸು, ಸಹಾನುಭೂತಿ ಮತ್ತು ಕಠಿಣ ಪರಿಶ್ರಮದಿಂದ ಆಳುತ್ತೀರಿ.

ಮೀನರಾಶಿ
ನಿಮ್ಮ ಮನಸ್ಸು ಇಂದು ಅತ್ಯಂತ ಜಾಣ್ಮೆಯಿಂದಿರುತ್ತದೆ. ನೀವು ನಿಸರ್ಗದಲ್ಲಿ ತೊಡಗಿಕೊಳ್ಳುತ್ತೀರಿ ಮತ್ತು ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ವಿಧಿ ನಿಮ್ಮನ್ನು ಯಶಸ್ಸಿನತ್ತ ಮಾರ್ಗದರ್ಶನ ಮಾಡುತ್ತದೆ. ನೀವು ವೃತ್ತಿಪರವಾಗುವುದಕ್ಕಿಂತ ಬೌದ್ಧಿಕ ಅನ್ವೇಷಣೆಗಳತ್ತ ವಾಲುವ ಸಾಧ್ಯತೆ ಇದೆ. ನೀವು ಯಾವುದೇ ಜವಾಬ್ದಾರಿಗಳನ್ನು ತಪ್ಪಿಸಿಕೊಳ್ಳುವುದಿಲ್ಲ ಎಂಬುದನ್ನು ಗಮನದಲ್ಲಿಡಿ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *