ತಪ್ಪಿದ ಭಾರೀ ಅನಾಹುತ, 2 ಸೆಕೆಂಡ್‌ ತಡವಾಗುತ್ತಿದ್ದರೂ ಸುಟ್ಟು ಕರಕಲಾಗುತ್ತಿದ್ದ ವರ, ಬೆಚ್ಚಿ ಬೀಳಿಸುವ ವಿಡಿಯೋ

ನವದೆಹಲಿ : ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮದುವೆಯ ಸೀಸನ್ (Wedding Season) ನಡೆಯುತ್ತಿದೆ. ಪ್ರತಿ ಮದುವೆಯಲ್ಲಿಯೂ ಅದ್ದೂರಿ ಏರ್ಪಾಡುಗಳನ್ನು ಮಾಡಲಾಗಿರುತ್ತದೆ. ಗುಜರಾತ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭೀಕರ ಬೆಂಕಿ ಅನಾಹುತ (Fire broke out in Wedding) ಸಂಭವಿಸಿದೆ. ಈ ಅನಾಹುತದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social media video) ಕಾಣಿಸಿಕೊಂಡಿದೆ. ಗುಜರಾತ್‌ನಲ್ಲಿ ವಿಜೃಂಭಣೆಯಿಂದ ಸಾಗುತ್ತಿದ್ದ ಮದುವೆ ದಿಬ್ಬಣದಲ್ಲಿ ವರ ಏರಿದ್ದ ಕುದುರೆ ಗಾಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಅದೃಷ್ಟವಷಾತ್ ವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೈರಲ್ ಆಗುತ್ತಿರುವ ಭಯಾನಕ ವಿಡಿಯೋ :
ಗುಜರಾತ್‌ನ ಪಂಚಮಹಲ್ ನಗರದ ಜೋಗೇಶ್ವರಿ ಮಹಾದೇವ ದೇವಸ್ಥಾನದ ನಿವಾಸಿ ಶೈಲೇಶ್ ಭಾಯಿ ಶಾ ಅವರ ಪುತ್ರ ತೇಜಸ್ ಅವರ ವಿವಾಹದ (wedding video) ವೇಳೆ ಘಟನೆ ನಡೆದಿದೆ.  ಮದುವೆಯ ದಿಬ್ಬಣ ಸಂಭ್ರಮದಿಂದಲೇ ಸಾಗಿತ್ತು. ಆದರೆ, ವರ ತೇಜಸ್ ಇದ್ದ ಕುದುರೆ ಗಾಡಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ (fire accident) ಸ್ಥಳದಲ್ಲಿ ಅರಚಾಟ ಕಿರುಚಾಟ ಕೇಳಿ ಬಂದಿತ್ತು.  ಸಕಾಲದಲ್ಲಿ ವರನನ್ನು ಕುದುರೆ ಗಾಡಿಯಿಂದ ಇಳಿಸಿರುವ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

 

 

ಇಡೀ ಗಾಡಿ ಸುಟ್ಟು ಕರಕಲಾಗಿರುವುದನ್ನು ವಿಡಿಯೋದಲ್ಲಿ (Video) ಕಾಣಬಹುದು. ಗಾಡಿಗೆ ಬೆಂಕಿ ಹೊತ್ತಿಕೊಂಡ ನಂತರ ಅದನ್ನು ನಿಯಂತ್ರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ.

 

ಅವಘಡದ ಸಮಯದಲ್ಲಿ ಗಾಡಿಯಲ್ಲೇ ಇದ್ದ ವರ : 
ಈ ಅವಘಡದ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ಅಲ್ಲದೆ ಕುದುರೆಗಾಡಿಯಲ್ಲಿ ಬಳಸಲಾಗಿದ್ದ ಕುದುರೆಗಳ ಪ್ರಾಣವನ್ನು ಕೂಡಾ ಉಳಿಸಲಾಗಿದೆ. ವರದಿಗಳ ಪ್ರಕಾರ, ಕುದುರೆ ಗಾಡಿಯಲ್ಲಿಯೇ ಪಟಾಕಿಗಳನ್ನು ಇರಿಸಲಾಗಿತ್ತು. ದಿಬ್ಬಣ ಬರುತ್ತಿದ್ದಾಗ ಹಚ್ಚಿದ ಪಟಾಕಿಯ ಕಿಡಿ, ಕುದುರೆ ಗಾಡಿಯಲ್ಲಿರುವ ಪಟಾಕಿಗೆ ತಗುಲಿ ಈ ಅನಾಹುತ ಸಂಭವಿಸಿದೆ.  ಈ ಘಟನೆ ನಡೆದಾಗ ಕುದುರೆ ಗಾಡಿಯಲ್ಲಿ ವರ ಮತ್ತು ಸಣ್ಣ ಮಕ್ಕಳು ಕೂಡಾ ಗಾಡಿಯಲ್ಲಿದ್ದರು. ಆದರೆ ತಕ್ಷಣ ಕಾರ್ಯಪ್ರವೃತರಾದ ಕಾರಣ ಯಾರಿಗೂ ಪ್ರಾಣಾಪಾಯವಾಗಿಲ್ಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *