‘ಟಿಪ್ಪು ಸುಲ್ತಾನ್‌ ಈ ನೆಲದ ಮಗ ಎಂಬ ಎಚ್​​​. ವಿಶ್ವನಾಥ್​​ ಹೇಳಿಕೆ ಸತ್ಯ‘ – ಸಂಸದ ಡಿ.ಕೆ ಸುರೇಶ್​

ಇನ್ನು, ಎಚ್​​. ವಿಶ್ವನಾಥ್​​ ಹೇಳಿಕೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಹಿಂದೆ ಯಡಿಯೂರಪ್ಪ ಟಿಪ್ಪು ಜಯಂತಿ ಮಾಡಿದ್ದನ್ನೂ ಅಲ್ಲಗಳೆಯಲು ಆಗಲ್ಲ. ರಾಷ್ಟ್ರಪತಿ ರಾಮ​ನಾಥ್​​ ಕೋವಿಂದ್​​ ಟಿಪ್ಪು ಹೊಗಳಿದ್ದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ – ಡಿ.ಕೆ ಸುರೇಶ್​

ಬೆಂಗಳೂರು(ಆ.27): ಟಿಪ್ಪು ಸುಲ್ತಾನ್‌ ಈ ನೆಲದ ಮಗ ಮತ್ತು ವೀರ ಹೋರಾಟಗಾರ ಎಂಬ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿಕೆಗೆ ಸಂಸದ ಡಿ.ಕೆ ಸುರೇಶ್​​ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಡಿ.ಕೆ ಸುರೇಶ್​​​, ಎಚ್​​. ವಿಶ್ವನಾಥ್​​ ಹೇಳಿರುವುದು. ಟಿಪ್ಪು ಈ ನೆಲಸ ಮಗನೇ ಎಂದರು. 

ಬಿಜೆಪಿ ಎಂಎಲ್​​ಸಿ ಎಚ್​. ವಿಶ್ವನಾಥ್​​ ನೀಡಿದ ಹೇಳಿಕೆಯನ್ನೇ ಈ ಹಿಂದೆ ಕೆಜೆಪಿ ಶುರು ಮಾಡಿದ್ದಾಗ ಸಿಎಂ ಬಿ.ಎಸ್​ ಯಡಿಯೂರಪ್ಪನವರು ಹೇಳಿದ್ದರು. ಈಗ ವಿಶ್ವನಾಥ್​​ ಹೇಳಿದ್ದು ಸತ್ಯವೇ, ಆಗ ಯಡಿಯೂರಪ್ಪ ಹೇಳಿದ್ದು ಸತ್ಯವೇ. ಚುನಾವಣೆ ದೃಷ್ಟಿ ಇಟ್ಟುಕೊಂಡು ಇತಿಹಾಸ ಬದಲಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.

ಇನ್ನು, ಎಚ್​​. ವಿಶ್ವನಾಥ್​​ ಹೇಳಿಕೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಹಿಂದೆ ಯಡಿಯೂರಪ್ಪ ಟಿಪ್ಪು ಜಯಂತಿ ಮಾಡಿದ್ದನ್ನೂ ಅಲ್ಲಗಳೆಯಲು ಆಗಲ್ಲ. ರಾಷ್ಟ್ರಪತಿ ರಾಮ​ನಾಥ್​​ ಕೋವಿಂದ್​​ ಟಿಪ್ಪು ಹೊಗಳಿದ್ದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಇತಿಹಾಸ ತಿರುಚುವುದು ಕುಮ್ಮಕ್ಕು ಕೊಡುವುದು, ಜನರ ಭಾವನೆ ಬೇರೆಡೆ ತೆಗೆದುಕೊಂಡು ಹೋಗುವ ಕೆಲಸ ನಡೀತಿದೆ. ಟಿಪ್ಪು ಕೂಡ ಈ ದೇಶಕ್ಕೆ ರಾಜ್ಯಕ್ಕೆ ಸಾಕಷ್ಡು ಕೊಡುಗೆ ಕೊಟ್ಟಿದ್ದಾರೆ ಎಂದು ಸಂಸದ ಸುರೇಶ್​.

ನಿನ್ನೆ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದಾಗ ಎಚ್. ವಿಶ್ವನಾಥ್​​, ಟಿಪ್ಪು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿದ ವ್ಯಕ್ತಿಯಲ್ಲ. ಆತನ ಕುರಿತು ವಿದ್ಯಾರ್ಥಿಗಳು ಓದಿ ತಿಳಿದುಕೊಳ್ಳಬೇಕು. ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕಮಾಂಡರ್‌. ಅದೇ ಸಾಲಿಗೆ ಟಿಪ್ಪು ಕೂಡ ಸೇರುತ್ತಾನೆ ಎಂದು ಅವರು ಹೇಳಿದ್ದರು.

ಗಾಂಧೀಜಿಯಿಂದ ಟಿಪ್ಪು ಸುಲ್ತಾನ್​​ವರೆಗೆ ನಮ್ಮ ವಿದ್ಯಾರ್ಥಿಗಳು ಓದಬೇಕು. ಸರ್ಕಾರ ಟಿಪ್ಪು ಪಠ್ಯವನ್ನು ಕೈಬಿಟ್ಟಿಲ್ಲ. 5ನೇ ತರಗತಿ ಬದಲಿಗೆ 7ನೇ ತರಗತಿಯಲ್ಲಿ ಸೇರಿಸಿದೆ ಎಂದಿದ್ದರು. ಈ ಹೇಳಿಕೆಯೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *