Darshan-Vijayalakshmi: ದರ್ಶನ್​​ಗೆ ಬೇಲ್​ ಸಿಗ್ತಿದ್ದಂತೆ ಬಳ್ಳಾರಿಗೆ ಓಡೋಡಿ ಬಂದ ವಿಜಯಲಕ್ಷ್ಮಿ! ದಾಸನ ಪತ್ನಿ ಫುಲ್ ಖುಷ್​!

ರೇಣುಕಾಸ್ವಾಮಿ ಕೇಸ್​ನಲ್ಲಿ (Renukaswamy Case) ಜೈಲು ಸೇರಿದ್ದ ನಟ ದರ್ಶನ್​ಗೆ (Actor Darshan) ದೀಪಾವಳಿ ಗಿಫ್ಟ್ ಸಿಕ್ಕಿದೆ. ದರ್ಶನ್​ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು (Interim Bail) ನೀಡಿ ಆದೇಶ ಹೊರಡಿಸಿದೆ. ದರ್ಶನ್​ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಚಿಕಿತ್ಸೆಗಾಗಿ 6 ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಲಾಗಿದೆ. ದರ್ಶನ್​ ಜಾಮೀನಿಗಾಗಿ ಕಾನೂನು ಹೋರಾಟ ಮಾಡ್ತಿದ್ದ ವಿಜಯಲಕ್ಷ್ಮಿಗೆ (Vijayalakshmi) ಕೊನೆಗೂ ಗೆಲುವು ಸಿಕ್ಕಿದೆ. ದರ್ಶನ್​ಗೆ ಬೇಲ್ ಮಂಜೂರು ಆಗ್ತಿದ್ದಂತೆ ಬಳ್ಳಾರಿ ಜೈಲಿಗೆ ವಿಜಯಲಕ್ಷ್ಮಿ ಓಡೋಡಿ ಬಂದಿದ್ದಾರೆ.

News18

ನಗು ಮುಖದಲ್ಲಿ ವಿಜಯಲಕ್ಷ್ಮಿ

ಜೈಲಿನಲ್ಲಿದ್ದ ಪತಿ ದರ್ಶನ್ ನೋಡಲು ಪ್ರತಿ ವಾರ ಜೈಲಿಗೆ ಬರ್ತಿದ್ದ ವಿಜಯಲಕ್ಷ್ಮಿ ಮುಖದಲ್ಲಿ ಬೇಸರ, ದುಃಖ ಕಾಣ್ತಿತ್ತು. ಇದೀಗ ದರ್ಶನ್​​ಗೆ ಬೇಲ್ ಸಿಕ್ಕ ಖುಷಿಯಲ್ಲಿ ವಿಜಯಲಕ್ಷ್ಮಿ ಬಳ್ಳಾರಿ  ಜೈಲಿಗೆ ಭೇಟಿ ನೀಡಿದ್ರು. ಈ ಬಾರಿ ದರ್ಶನ್ ಪತ್ನಿ ಮುಖದಲ್ಲಿ ಅಭಿಮಾನಿಗಳು ನಗು ಕಂಡಿದ್ದಾರೆ. ಜೈಲಿಗೆ ಆಗಮಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಖುಷಿಯಿಂದಲೇ ಜೈಲಿನ ಸಂದರ್ಶಕರ ಕೊಠಡಿಗೆ ತೆರಳಿದ್ರು.

ಕಾನೂನು ಹೋರಾಟದ ಜೊತೆ ವಿಜಯಲಕ್ಷ್ಮಿ ಗುಡಿ-ಗೋಪುರಗಳನ್ನು ಸಹ ಸುತ್ತಿದ್ರು. ಕೊಲ್ಲೂರು ಮುಕಾಂಬಿಕೆ, ಬೆಂಗಳೂರಿನ ಬನಶಂಕರಿ, ಮೈಸೂರು ಚಾಮುಂಡೇಶ್ವರಿ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಭೇಟಿ ನೀಡಿದ ಪತಿಗಾಗಿ ಹರಕೆ ಹೊತ್ತಿದ್ರು. ಇದೀಗ ವಿಜಯಲಕ್ಷ್ಮಿ ಪೂಜೆ ಫಲಿಸಿದ್ದು, ದಾಸನಿಗೆ ಮಧ್ಯಂತರ ಜಾಮೀನು ಸಿಕ್ಕಿದೆ.

 

ವಿಜಯಲಕ್ಷ್ಮಿ ಮೊದಲ ಪೋಸ್ಟ್

ಪತಿ ದರ್ಶನ್​ ಅವರಿಗೆ ಬೇಲ್​ ಸಿಗ್ತಿದ್ದಂತೆ ವಿಜಯಲಕ್ಷ್ಮಿ ಮೊದಲ ಪೋಸ್ಟ್ ಶೇರ್​ ಮಾಡಿದ್ದಾರೆ. ಈ ಹಿಂದೆ ವಿಜಯಲಕ್ಷ್ಮಿ, ಅಸ್ಸಾಂನ ಗುವಾಹಟಿಯಲ್ಲಿರುವ ಶಕ್ತಿಪೀಠ ಕಾಮಾಕ್ಯ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ರು. ಈ ದೇವಿಯ ಮಹಿಮೆಯಿಂದಲೇ ದರ್ಶನ್​ಗೆ ಬೇಲ್ ಸಿಕ್ಕಿದೆ ಎನ್ನುವ ನಂಬಿಕೆಯಲ್ಲಿ ವಿಜಯಲಕ್ಷ್ಮಿ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ.

ಇನ್ಸ್ಟಾಗ್ರಾಮ್​ನ ಸ್ಟೋರಿಸ್​​ನಲ್ಲಿ ವಿಜಯಲಕ್ಷ್ಮಿ ಗುವಾಹಟಿಯಲ್ಲಿರುವ ಶಕ್ತಿಪೀಠ ಕಾಮಾಕ್ಯ ದೇವಿ ದೇವಸ್ಥಾನದ ಫೋಟೋವನ್ನು ಶೇರ್ ಮಾಡಿದ್ದಾರೆ. ದೇವಿಗೆ ಧನ್ಯವಾದ ತಿಳಿಸಿದ್ದಾರೆ. ಥ್ಯಾಂಕ್​ಫುಲ್, ಗ್ರೇಟ್​ಫುಲ್​, ನಿಮ್ಮ ಆಶೀರ್ವಾದ ಎಂದು ವಿಜಯಲಕ್ಷ್ಮಿ ಬರೆದಿದ್ದಾರೆ.

ಇಂದೇ ದರ್ಶನ್ ರಿಲೀಸ್ ಆಗುವ ಸಾಧ್ಯತೆ!

ಬೆಳಗ್ಗೆಯೇ ದರ್ಶನ್​ಗೆ ಜಾಮೀನು ಮಂಜೂರಾಗಿರುವ ಹಿನ್ನೆಲೆ ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ನಟ ದರ್ಶನ್ ಬಳ್ಳಾರಿ​ ಜೈಲಿನಿಂದ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ದರ್ಶನ್​ಗೆ ಬೇಲ್ ಸಿಕ್ಕ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಖುಷ್ ಆಗಿದ್ದಾರೆ.

6 ವಾರಗಳ ಕಾಲ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ, ಮಧ್ಯಂತರ ಜಾಮೀನಿಗೆ ಸಾಕಷ್ಟು ಷರತ್ತುಗಳನ್ನು ವಿಧಿಸಿದೆ. 131 ದಿನಗಳ ಬಳಿಕ ದರ್ಶನ್​ ಜೈಲಿನಿಂದ ಹೊರಗೆ ಬರ್ತಿದ್ದಾರೆ. ಬಳ್ಳಾರಿ ಜೈಲು ಸೇರಿ ದರ್ಶನ್ 65 ದಿನಗಳು ಕಳೆದಿತ್ತು. ಇದೀಗ ದಾಸನಿಗೆ ಬಿಡುಗಡೆ ಭಾಗ್ಯ ಲಭಿಸಿದೆ. ಜಾಮೀನು ಅದೇಶ ಜೈಲಾಧಿಕಾರಿಗಳ ಕೈ ಸೇರುತ್ತಿದ್ದಂತೆ ದರ್ಶನ್​ ರಿಲೀಸ್ ಆಗಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *