Diabetes Diet: ಶುಗರ್ ಇರುವವರು ತಣ್ಣನೆಯ ಆಹಾರ ತಿನ್ನಬಾರದಾ? ಅಪ್ಪಿತಪ್ಪಿ ತಿಂದ್ರೆ ಏನಾಗುತ್ತೆ ಗೊತ್ತಾ?
ಕೆಲವರಿಗೆ ಚಳಿಗಾಲ ಅಂದರೆ ಇಷ್ಟ. ಮತ್ತೆ ಕೆಲವರಿಗೆ ಚಳಿಗಾಲ ಅಂದರೆ ಕಷ್ಟ. ಆದರೆ ಬೇರೆ ದಾರಿ ಯಾವುದೇ ಇಲ್ಲ, ಇದು ಪ್ರಕೃತಿಯ ನಿಯಮ. ಕಾಲಕ್ಕೆ ತಕ್ಕಂತೆ ಹವಾಮಾನ ಬದಲಾಗುತ್ತದೆ. ಈ ಹವಾಮಾನಕ್ಕೆ ತಕ್ಕಂತೆ ನಾವೂ ಕೂಡ ಬದಲಾಗಬೇಕು.
ಬದಲಾಗುವುದೆಂದರೆ ಆರೋಗ್ಯ ದೃಷ್ಟಿಯತ್ತ ತಿನ್ನುವ ಆಹಾರ, ತೊಡುವ ಬಟ್ಟೆ, ಚರ್ಮದ ರಕ್ಷಣೆ, ಆಂತರಿಕ ಆರೋಗ್ಯ ಇವುಗಳೆಲ್ಲದರ ಕಡೆ ಗಮನ ಹರಿಸಬೇಕು. ಹಾಗೆಯೇ ಬಿಪಿ, ಶುಗರ್ ಇರುವ ಜನ ಕೂಡ ಕಾಲಕ್ಕೆ ತಕ್ಕಂತೆ ನಮ್ಮ ಆಹಾರದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಅದರಲ್ಲೂ ಆರೋಗ್ಯವಾಗಿರಲು ವಿಶೇಷವಾಗಿ ಮಧುಮೇಹ ಇರುವವರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಬಹಳ ಅತ್ಯಗತ್ಯ. ಸದ್ಯ ಚಳಿಗಾಲವಾಗಿರುವುದರಿಂದ ಈ ಸಮಯದಲ್ಲಿ ಬಾಯಿ ಚಪಲಕ್ಕೆ ನಾವು ತಿನ್ನುವ ಕೆಲವು ಆಹಾರಗಳು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಹಾಗಾಗಿ ಮಧುಮೇಹಿಗಳು ಆಹಾರ ಪದ್ಧತಿ ಅನುಸರಿಸುವುದು ಬಹಳ ಮುಖ್ಯ. ಅವರ ಆರೋಗ್ಯವನ್ನು ನಿಯಂತ್ರಿಸಲು, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿರಿಸಿಕೊಳ್ಳಲು ಸರಿಯಾದ ಆಹಾರ ಸೇವಿಸುವುದು ಅತ್ಯಗತ್ಯ. ಈ ನಡುವೆ ಮಧುಮೇಹಿಗಳನ್ನು ಕಾಡುತ್ತಿರುವ ಮತ್ತೊಂದು ಪ್ರಶ್ನೆ ಎಂದರೆ “ಬಿಸಿ” ಅಥವಾ “ತಂಪಾದ” ಆಹಾರಗಳಲ್ಲಿ ಯಾವುದನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ? ನಿಮಗೂ ಇದೇ ಪ್ರಶ್ನೆ ಕಾಡುತ್ತಿದ್ದರೆ ಇದಕ್ಕೆ ಉತ್ತರ ಈ ಕೆಳಗಿನಂತಿದೆ.
ಸಾಮಾನ್ಯವಾಗಿ ಅತಿಯಾದ ತಂಪಾದ ಆಹಾರಗಳು ಅಥವಾ ಪಾನೀಯಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಮಧುಮೇಹಿಗಳಲ್ಲಿ ಇದು ಗ್ಯಾಸ್ಟ್ರಿಕ್ ಅಥವಾ ಅತಿಯಾದ ಆಮ್ಲೀಯತೆಯನ್ನು ಉಂಟು ಮಾಡಬಹುದು.