ಪೋಷಕರೇ, ವಿದ್ಯಾರ್ಥಿಗಳೇ ಡೋಂಟ್​ವರಿ..! ಸದ್ಯಕ್ಕೆ ಓಪನ್ ಆಗಲ್ಲ…ಸ್ಕೂಲ್​-ಕಾಲೇಜ್​ಗಳು​ ​..!

ಕೊರೋನಾ ಮಧ್ಯೆ ಶಾಲೆ ಆರಂಭ ಆಗುತ್ತೆ ಅನ್ನೋ ಟೆನ್ಷನ್​ನಲ್ಲಿರುವ ಪೋಷಕರೇ, ವಿದ್ಯಾರ್ಥಿಗಳೇ ಡೋಂಟ್​ವರಿ. ಯಾಕಂದ್ರೆ ಇನ್ನೂ ಒಂದು ತಿಂಗಳು ಸ್ಕೂಲ್​​​ ಓಪನ್​ ಆಗಲ್ಲ

ಅಕ್ಟೋಬರ್​ ಅಂತ್ಯದವರೆಗೂ ಸ್ಕೂಲ್​​ ಓಪನ್​​ ಮಾಡುವುದಿಲ್ಲವೆಂದು ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಹೇಳಿದ್ದಾರೆ.ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ ಶಾಲೆ ಆರಂಭ ಮಾಡದಿರಲು ನಿರ್ಧರಿಸಲಾಗಿದೆ ಎಂದು ಬಿಟಿವಿಗೆ ಆರೋಗ್ಯ ಇಲಾಖೆ ಡೈರೆಕ್ಟರ್​​​ ಡಾ.ಪಾಟೀಲ್ ಓಂ ಪ್ರಕಾಶ್​ ಹೇಳಿದ್ದಾರೆ.

ಸದ್ಯ ಸ್ಕೂಲ್​-ಕಾಲೇಜ್​ ಓಪನ್​ ಮಾಡೋ ಸ್ಥಿತಿ ರಾಜ್ಯದಲ್ಲಿ ಇಲ್ಲ. ಕೇಂದ್ರ ಸರ್ಕಾರ ಗ್ರೀನ್​​ ಸಿಗ್ನಲ್​​ ಕೊಟ್ರೂ ರಾಜ್ಯಗಳ ವಿವೇಚನೆಗೆ ಬಿಟ್ಟಿದೆ. ಪರಿಸ್ಥಿತಿ ಅವಲೋಕನ ಮಾಡಿ ಮುಂದಿನ‌ ನಿರ್ಧಾರ ಮಾಡ್ತೇವೆ ಅಂತ ಪಾಟೀಲ್​​ ಓಂ ಪ್ರಕಾಶ್ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *