ಮೂರನೇ ಬಾರಿ ಒಂದಾಗುತ್ತಿರುವ ‘ರಾಜಕುಮಾರ’ ಜೋಡಿ..! ಅಪ್ಪು-ಸಂತೋಷ್​​​-ವಿಜಯ್​​ ಕಾಂಬೋದಲ್ಲಿ ಹೊಸ ಸಿನಿಮಾ..!

‘ರಾಜಕುಮಾರ’ ಸ್ಯಾಂಡಲ್​​ವುಡ್​ನಲ್ಲಿ ಹೊಸ ಇತಿಹಾಸ ಬರೆದ ಸಿನಿಮಾ. ಈ ಚಿತ್ರ ಬಿಗ್​​ ಹಿಟ್​ ಆಗ್ತಿದ್ದಂತೆ ‘ಯುವರತ್ನ’ ಸಿನಿಮಾ ಮೂಲಕ ಮತ್ತೆ ಈ ಜೋಡಿ ಒಂದಾದ್ರು. ಈ ಸಿನಿಮಾ ರಿಲೀಸ್​​ಗೂ ಮೊದಲೇ ಗಾಂಧಿನಗರದಿಂದ ಹಿಡಿದು ಟಾಲಿವುಡ್​​ ಅಂಗಳದಲ್ಲಿಯೂ ಟಾಕ್​ ಕ್ರಿಯೇಟ್​​ ಮಾಡ್ತಿದೆ. ಹೀಗಿರುವಾಗಲೇ ಮತ್ತೊಮ್ಮೆ ಅಂದ್ರೆ ಮೂರನೇ ಬಾರಿ ಪವರ್​​ ಸ್ಟಾರ್​​ ಹಾಗೂ ಸ್ಟೈಲಿಶ್​​ ಸ್ಟಾರ್​ ಒಂದಾಗುತ್ತಿರುವ ವಿಷಯವನ್ನ ರಿವೀಲ್​ ಮಾಡಿದೆ.

ಇಡೀ ಕನ್ನಡ ಚಿತ್ರರಂಗಕ್ಕೆ ಹೊಸ ಎನರ್ಜಿ ತಂದು ಕೊಟ್ಟ ಸಿನಿಮಾ ರಾಜಕುಮಾರ. ಸ್ಯಾಂಡಲ್​ವುಡ್​​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸಿನಿಮಾವಿದು. ಸ್ಯಾಂಡಲ್​ವುಡ್​​​ನಲ್ಲಿ ‘ರಾಜಕುಮಾರ’ ಸೂಪರ್​ ಹಿಟ್​ ಆದ ನಂತ್ರ ಮತ್ತೆ ಈ ಜೋಡಿಗಳು ಅಂದ್ರೆ ನಿರ್ದೇಶಕ ಸಂತೋಷ್ ಆನಂದ್ ರಾಮ್, ಪುನೀತ್ ರಾಜ್ ಕುಮಾರ್ ಮತ್ತು ನಿರ್ಮಾಪಕ ವಿಜಯ್​ ಕಿರಂಗದೂರು ‘ಯುವರತ್ನ’ ಸಿನಿಮಾ ಮೂಲಕ ಮತ್ತೊಮ್ಮೆ ಜೊತೆಯಾಗಿರೋದು ನಿಮ್ಗೂ ಗೊತ್ತಿದೆ.

ಈ ‘ರಾಜಕುಮಾರ’ ಜೋಡಿಗಳ ‘ಯುವರತ್ನ’ ಸಿನಿಮಾ ರಿಲೀಸ್​​​ಗೂ ಮುಂಚೆನೇ ಗಾಂಧಿನಗರ ಮಾತ್ರವಲ್ಲದೇ ಟಾಲಿವುಡ್​​ನಲ್ಲಿಯೂ ಸಿಕ್ಕಾಪಟ್ಟೆ ಹಲ್​ಚಲ್​ ಎಬ್ಬಿಸುತ್ತುದೆ. ಹೌದು ಯುವರತ್ನ ಸಿನಿಮಾದ ಪೋಸ್ಟರ್​​ನಿಂದ ಹಿಡಿದು ಟೀಸರ್​​, ಸಾಂಗ್​ಗಳು ಸಿನಿಪ್ರೇಕ್ಷಕರನ್ನ ಹುಚ್ಚೇದು ಕುಣಿಸುತ್ತಿದೆ. ಇನ್ನೇನ್ನು ಏಪ್ರಿಲ್​ 1ಕ್ಕೆ ‘ಯುವರತ್ನ’ ಸಿನಿಮಾ ರಿಲೀಸ್​ ಆಗುತ್ತೆ ಅಂತ ಚಿತ್ರತಂಡ ಅನೌನ್ಸ್​ ಮಾಡಿದ ಬೆನ್ನಲೇ, ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಸರ್​ಪ್ರೈಸ್​​ ನ್ಯೂಸ್​​ ಕೊಟ್ಟಿದೆ.

ಸ್ಯಾಂಡಲ್​ವುಡ್​ನಲ್ಲಿ ಇನ್ನೊಮ್ಮೆ ಹೊಸ ಮೈಲಿಗಲ್ಲು ಸೃಷ್ಟಿಸಲು, ಈ ತ್ರಿವಳಿ ಜೋಡಿಗಳು ರೆಡಿಯಾಗಿದ್ದಾರೆ. ಯೆಸ್​​ ಪವರ್​ ಸ್ಟಾರ್​​ ಪುನೀತ್​​ ರಾಜ್​ಕುಮಾರ್​​​, ಸ್ಟಾರ್​​ ಡೈರೆಕ್ಟರ್​ ಸಂತೋಷ್​ ಆನಂದ್​ ರಾಮ್​ ಹಾಗೂ ಖ್ಯಾತ ನಿರ್ಮಾಪಕ ವಿಜಯ್​ ಕಿರಗಂದೂರ್​​​ ಮೂರನೇ ಬಾರಿ ಒಂದಾಗುತ್ತಿದ್ದಾರೆ. ಈಗಾಗಲೇ ಹೊಂಬಾಳೆ ಫಿಲ್ಮ್ಸ್​​​ ಪುನೀತ್​ ರಾಜ್​ಕುಮಾರ್​​ಗೆ ಹೊಸ ಸಿನಿಮಾ ಘೋಷಿಸಿತ್ತು. ಆದ್ರೆ ನಿರ್ದೇಶಕ,ನಿರ್ಮಾಪಕ, ಕಥೆಯ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಈಗ ಸ್ಟಾರ್​​ ನಿರ್ದೇಶಕ ಸಂತೋಷ್​ ಆನಂದ್​ ರಾಮ್​, ನನ್ನ ಮುಂದಿನ ಸಿನಿಮಾ,ನನ್ನ ಐಕಾನ್​​ ಪವರ್​​ ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಜೊತೆಗೆ ಅಂತ ಟ್ವಿಟ್​​ ಮಾಡಿದ್ದಾರೆ.

ಸಂತೋಷ್​​ ಆನಂದ್​ ರಾಮ್​ ಟ್ವೀಟ್​​ ನೋಡಿದ ಅಪ್ಪು ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ರಾಜಕುಮಾರ ಬಿಗ್​​ ಹಿಟ್​ ಆಗಿದ್ದು,‘ಯುವರತ್ನ’ ರಿಲೀಸ್​​ಗೂ ಮೊದಲೇ ಹಿಟ್​ ಆಗುವ ಸೂಚನೆ ಸಿಕ್ಕಿದೆ. ಇನ್ನು ಈ ಹೊಸ ಸಿನಿಮಾದ ಬಗ್ಗೆ ಇನ್ನಿಲ್ಲದ ಕುತೂಹಲ ಇದೆ. ಆದ್ರೆ ಸಂತೋಷ್​ ಆನಂದ್​ ರಾಮ್​​ ಕೊಟ್ಟ ಮಾಹಿತಿ ಬಿಟ್ರೆ ಬೇಱವ ಮಾಹಿತಿ ಕೊಡ ಸಿಕ್ಕಲ್ಲ, ಇದರ ಕಂಪ್ಲೀಟ್​​ ಡೀಟೈಲ್ಸ್​ ರಿವೀಲ್​ ಆಗಬೇಕಾದ್ರೆ ಸ್ವಲ್ಪ ದಿನ ವೈಟ್​ ಮಾಡಲೇ ಬೇಕು..

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *