ಬೆಂಗಳೂರಿನಲ್ಲಿ ಮುಂಜಾನೆಯೇ ಪೊಲೀಸ್ ಗುಂಡಿನ ಸದ್ದು..! ಕೊಲೆ ಆರೋಪಿ ಮೇಲೆ ಫೈರ್ ಮಾಡಿ ಬಂಧಿಸಿದ ಪೊಲೀಸರು..!
ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗ್ತಿದ್ದ ಪ್ರವೀಣ್ ಎಂಬಾತನನ್ನು ಬೆಂಗಳೂರಿನಲ್ಲಿ ಇಂದು ಮುಂಜಾನೆ ಪೊಲೀಸರು ಕೊಲೆ ಆರೋಪಿ ಮೇಲೆ ಫೈರ್ ಮಾಡಿ ಬಂಧಿಸಿದ್ದಾರೆ. ಎಲ್ಲಾ ಖಚಿತ ಮಾಹಿತಿಯ ಮೇಲೆ ಪೊಲೀಸ್ ಕಾರ್ಯಾಚರಣೆ ನಡೆಸಿದ್ದಾರೆ.
ತಿಪ್ಪೇನಹಳ್ಳಿ ಬಳಿ ಅಡಗಿದ್ದ ಕೊಲೆ ಆರೋಪಿ ಪೀಣ್ಯಾ ಪೊಲೀಸರನ್ನು ಕಂಡ ಕೂಡಲೇ ಎಸ್ಕೇಪ್ಗೆ ಯತ್ನ ನಡೆಸಿದ್ದಾನೆ. ಕಾನ್ಸ್ಟೇಬಲ್ ರಂಗಸ್ವಾಮಿ ಮೇಲೆ ಡ್ರ್ಯಾಗರ್ನಿಂದ ಪ್ರವೀಣ್ ಹಲ್ಲೆ ನಡೆಸಲು ಯತ್ನಿಸಿದ್ದ ಸಮಯದಲ್ಲಿ PSI ಮಾಯಪ್ಪ ಬಿರಾಣಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗತಿಗೆ ಸೂಚಿಸಿದ್ದಾರೆ.
ಎಚ್ಚರಿಕೆ ನಡುವೆಯೂ ಎಸ್ಕೇಪ್ಗೆ ಯತ್ನಿಸಿದ್ದ ಆರೋಪಿ ಪ್ರವೀಣ್ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಹಾಗೂ ನಿನ್ನೆ ರಾತ್ರಿ ಇದೆ ರೀತಿ ಇಬ್ಬರು ರೌಡಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಪುಟ್ಟೇನಹಳ್ಳಿ, ಗಿರಿನಗರ ವ್ಯಾಪ್ತಿಯಲ್ಲಿ ರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.