ಸುದೀಪ್ ಸಿನಿ ಜೀವನಕ್ಕೆ 25 ವರ್ಷದ ಸಂಭ್ರಮ..! ದಚ್ಚು ‘ರಾಬರ್ಟ್’ ಸಿನಿಮಾ ಬಗ್ಗೆ ಕಿಚ್ಚನ ಮಾತು..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿ ಜೀವನಕ್ಕೆ 25 ವರ್ಷದ ಸಂಭ್ರಮ. ಇದೇ ಸಂತಸದಲ್ಲಿರೋ ಕಿಚ್ಚ ದುಬೈಗೆ ಪಯಣ ಬೆಳೆಸಿ, ಅಲ್ಲಿ ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡಿಕೊಳ್ತಿದ್ದಾರೆ. ಇದರ ಬೆನ್ನಲೇ ದುಬೈನಿಂದ ಸುದೀಪ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿ. 25 ವರ್ಷದ ಸಿನಿಜೀವನದ ಸಿಹಿ-ಕಹಿ ಘಟನೆಗಳನ್ನ ಮೆಲಕು ಹಾಕಿದ್ದಾರೆ. ಇಷ್ಟೇ ಅಲ್ಲ ರಾಬರ್ಟ್ ಸಿನಿಮಾದ ಬಗ್ಗೆಯೂ ಹೇಳಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷಗಳಾಗಿವೆ. ಇದೇ ಸಂಭ್ರಮದಲ್ಲಿರೋ ಕಿಚ್ಚ ಡೈರೆಕ್ಟ್ ಆಗಿ ದುಬೈಗೆ ಹಾರಿ, ಅಲ್ಲಿ ತಮ್ಮ ಸಿನಿಜೀವನದ ಬೆಳ್ಳಿ ಹಬ್ಬವನ್ನ ಆಚರಿಸಿಕೊಳ್ತಿದ್ದಾರೆ. ಇದೇ ಖುಷಿಯಲ್ಲಿರೋ ಕಿಚ್ಚ, ದುಬೈನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಕಲಾ ಬದುಕಿನ 25 ವರ್ಷದ ಜರ್ನಿ, ಕಷ್ಟ-ಸುಖ, ಬದುಕಿನ ಏಳು-ಬೀಳುಗಳನ್ನ ಮೆಲಕು ಹಾಕಿದ್ದಾರೆ. ಇಂತಹ ಸುಂದರವಾದ ಜರ್ನಿಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇನ್ನು ಕಿಚ್ಚನ ಸಿನಿ ಜರ್ನಿ 25 ವರ್ಷ ತುಂಬಿ 26ನೇ ವರ್ಷಕ್ಕೆ ಕಾಲಿಡುತ್ತಿದೆ.
ಸದೀಪ್ ಸಿನಿ ಜೀವನದ ಬೆಳ್ಳಿ ಹಬ್ಬವನ್ನ ದುಬೈನಲ್ಲಿ ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡ್ತಾರೆ. ಇದರ ವಿಶೇಷವಾಗಿ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ದುಬೈನ ಬುರ್ಜ್ ಖಲೀಫಾದಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಇದಲ್ಲದೇ ಜಗತ್ತಿನ ಅತಿ ಎತ್ತರದ ಕಟ್ಟಡದ ಮೇಲೆ, ಕಿಚ್ಚನ 2000 ಅಡಿ ಕಟೌಟ್ ರಾರಾಜಿಸಲಿದೆ.
ಅಂದ್ಹಾಗೆ ಸುದೀಪ್ ವಿಡಿಯೋ ಕಾನ್ಫರೆನ್ಸ್ನಲ್ಲಿ, ಸಿನಿ ಜೀವನದ ಸಿಹಿ-ಕಹಿ ಶೇರ್ ಮಾಡಿಕೊಳ್ಳುವುದರ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹೌದು ರಾಬರ್ಟ್ ಸಿನಿಮಾ ತೆಲುಗುನಲ್ಲಿ ರಿಲೀಸ್ ಮಾಡಲು ಅಲ್ಲಿನ ಮಂದಿ ತಕರಾರು ಮಾಡಿದ್ರು. ಹೀಗಾಗಿ ನಿನ್ನೆ ದಾಸ ದರ್ಶನ್ ಇದರ ವಿರುದ್ಧ ಸೆಡಿದೆದ್ದು, ಫಿಲ್ಮ್ ಚೇಂಬರ್ಗೆ ದೂರು ಸಲ್ಲಿಸಿದ್ರು. ಇದರ ವಿಚಾರವಾಗಿ ಕಿಚ್ಚ ಸುದೀಪ್ಗೆ ಕೇಳಿದ್ದಾಗ ಬೇರೆಯವರ ಸಿನಿಮಾ ಬಗ್ಗೆ ಮಾತಾಡಲ್ಲ, ಅವರಿಗೆ ಅವರ ಸಿನಿಮಾವನ್ನ ಉಳಿಸಿಕೊಳ್ಳುವ ಶಕ್ತಿ ದೇವರು ಕೊಟ್ಟಿದ್ದಾನೆ ಅಂತ ಹೇಳಿದ್ದಾರೆ.
ಇಷ್ಟೇ ಅಲ್ಲ ಕಿಚ್ಚ ಸುದೀಪ್ ಕನ್ನಡ ಪ್ರೇಮವನ್ನ ಸಹ ಮೆರೆದಿದ್ದಾರೆ. ಹೌದು ಕನ್ನಡ ಭಾಷೆ, ಭಾವನೆಯಿಂದ ನಾನು ಈ ಮಟ್ಟಕ್ಕೆ ಏರಿದ್ದೇನೆ. ಕನ್ನಡ ಬಿಟ್ಟು ಬೇರೆ ಭಾಷೆ ಯೋಚನೆ ಮಾಡೋದು ಅಸಾಧ್ಯ ಅಂತ ದುಬೈನಲ್ಲಿ ಭಾಷಾಭಿಮಾನ ಮೆರೆದಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್.
ಒಟ್ಟಾರೆಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿ ಜೀವನದ ಬೆಳ್ಳಿ ಹಬ್ಬದ ಸಂಭ್ರಮ ಸಿಕ್ಕಾಪಟ್ಟೆ ಡಿಫರೆಂಟ್ ಆಗಿರುತ್ತೆ. ಎನಿವೇ ನಮ್ ಕಡೆಯಿಂದ ಕಿಚ್ಚ ಸುದೀಪ್ ಅವ್ರಿಗೆ 25 ವರ್ಷ ತುಂಬಿ 26 ನೇ ವರ್ಷಕ್ಕೆ ಕಾಲಿಡ್ತಿರೋ ಸಿನಿಜೀವನಕ್ಕೆ ಆಲ್ ದಿ ಬೆಸ್ಟ್..