ನೀನು ವಿಸ್ಕಿ ಕುಡಿದಿದ್ದೀಯಾ..? ಸಿದ್ದರಾಮಯ್ಯ ಪ್ರಶ್ನೆಗೆ ತಬ್ಬಿಬ್ಬಾದ ಲಿಂಬಾವಳಿ..!

ಹೈಲೈಟ್ಸ್‌:

  • ವಿಧಾನಸಭೆಯಲ್ಲಿ ವಿಸ್ಕಿ – ಸಿದ್ದರಾಮಯ್ಯ – ಲಿಂಬಾವಳಿ ಸ್ವಾರಸ್ಯಕರ ಪ್ರಸಂಗ
  • ನೀನು ವಿಸ್ಕಿ ಕುಡಿದಿದ್ದೀಯಾ..? ಎಂದು ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
  • ಸಿದ್ದರಾಮಯ್ಯ ಅವರ ಹಠಾತ್‌ ಪ್ರಶ್ನೆಗೆ ತಬ್ಬಿಬ್ಬಾದ ಸಚಿವ ಅರವಿಂದ್‌ ಲಿಂಬಾವಳಿ

 

ಸಿದ್ದರಾಮಯ್ಯ ಕೇಳಿದ ಪ್ರಶ್ನೆ. ಮಾಜಿ ಮುಖ್ಯಮಂತ್ರಿಗಳು ಕೇಳಿದ ಹಠಾತ್‌ ಪ್ರಶ್ನೆಗೆ ತಬ್ಬಿಬ್ಬಾದ ಲಿಂಬಾವಳಿ ನಿಮಗೆ ಗೊತ್ತಲ್ಲ ಸರ್‌ ಎಂದ ಪ್ರಸಂಗ ವಿಧಾನಸಭೆಯಲ್ಲಿ ಬುಧವಾರ ನಡೆಯಿತು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುವಾಗ ವಿಸ್ಕಿ ಕುರಿತಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು. ಬಿಎಸ್‌ವೈ ಸರಕಾರ ಇನ್ನೂ ಮಂತ್ರಿ ಮಂಡಲವೇ ಪೂರ್ಣಗೊಂಡಿಲ್ಲ. ನಾಗೇಶ್‌ನನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಬೀದಿ ಪಾಲು ಮಾಡಿದ್ದಾರೆ. ಸುಧಾಕರ್‌ಗೂ ರಕ್ಷಣೆ ನೀಡಿಲ್ಲ ಎಂದು ಕಿಡಿಕಾರಿದರು.

ಈ ವೇಳೆ ಸಚಿವ ಅರವಿಂದ್ ಲಿಂಬಾವಳಿಯನ್ನು ಸಿದ್ದರಾಮಯ್ಯ ಅವರು ನೀನು ವಿಸ್ಕಿ ಕುಡಿದಿದ್ದೀಯಾ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರ ಪ್ರಶ್ನೆಗೆ ತಬ್ಬಿಬ್ಬಾದ ಲಿಂಬಾವಳಿ ನಿಮಗೇ ಗೊತ್ತಲ್ಲ ಸರ್ ಎಂಬ ಉತ್ತರ ನೀಡಿದರು. ಆಗ ಮತ್ತೆ ಸಿದ್ದರಾಮಯ್ಯ ಅವರು, ಅದಕ್ಕೆ ಒಂದು ಬಾರಿ ಶ್ರೀನಿವಾಸ್ ಮನೆಯಲ್ಲಿ ಸೇರಿದ್ದೇವೆ ಅಲ್ವಾ ಎಂದು ಮರು ಪ್ರಶ್ನೆ ಹಾಕಿದರು.

ಕೊನೆಗೆ, ಅಲ್ಲಿ ಕುಡಿದಿದ್ದಿಯಾ ಇಲ್ವಾ ಎಂದು ಗೊತ್ತಿಲ್ಲ, ಕುಡಿದಿದ್ದೀಯಾ ಎಂದು ಲಿಂಬಾವಳಿಗೆ ಪ್ರಶ್ನೆ ಕೇಳಿ ವಿಸ್ಕಿ ಮಾತಿಗೆ ಸಿದ್ದರಾಮಯ್ಯ ವಿದಾಯ ಹೇಳಿದರು. ಬಳಿಕ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆಪರೇಷನ್‌ ಕಮಲದ ಜನಕ ಯಡಿಯೂರಪ್ಪ. ಬೇರೆ ಪಕ್ಷದ ಶಾಸಕರು, ಪಕ್ಷೇತರರನ್ನು ಸೇರಿಸಿಕೊಂಡು ಎರಡು ಬಾರಿ ಸರಕಾರ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಇದ್ದಾಗ ಟೇಕಾಫ್ ಆಗಿಲ್ಲ ಅಂತಿದ್ರು. ಬಿಜೆಪಿ ಸರ್ಕಾರ ಆಫ್ ಆಗಿ ದಾರಿಯಲ್ಲಿ ನಿಂತು ಹೋಗಿರುವ ಡಕೋಟಾ ಎಕ್ಸ್‌ಪ್ರೆಸ್‌ ಗಾಡಿ ಥರ ಆಗಿದೆ. ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್‌ ಆಗಿರುವ ಕಾರಣ ಮುಂದಕ್ಕೆ ಹೋಗುತ್ತಿಲ್ಲ. ಕೆಟ್ಟು ರಸ್ತೆಯಲ್ಲಿ ನಿಂತಿರುವ ಸರ್ಕಾರವನ್ನು ನಾಲ್ಕೈದು ಕಡೆಯಿಂದ ಎಳೆಯುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಡ್ರೈವಿಂಗ್ ಬರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *