‘ನಾನು ಸಿಎಂ ಆಗಿದ್ದಿದ್ರೆ ಕಥೆನೇ ಬೇರೆ ಇರುತ್ತಿತ್ತು..’; ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ?

ಹೈಲೈಟ್ಸ್‌:

  • ನಾನು ಮತ್ತೆ ಮುಖ್ಯಮಂತ್ರಿಆಗಿದ್ದಿದ್ದರೆ ಕಥೆನೇ ಬೇರೆ ಇರ್ತಿತ್ತು.
  • ನಿಮ್ಮ ತಾಲೂಕು ಇಡೀ ರಾಜ್ಯಕ್ಕೆ ನಂಬರ್ ವನ್ ಆಗಿರ್ತಿತ್ತು.
  • ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಬೇಡಿಕೆ ಹೌದ್ದೋ ಹುಲಿಯಾ ಹೇಳಿಕೆ ಮೂಲಕ ಜಿಲ್ಲೆಯ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಜನರಿಂದ ಕೇಳಿಬಂತು.

ಗೋವನಕೊಪ್ಪ ಗ್ರಾಮದಲ್ಲಿ ನಾನಾ ಕಾಮಗಾರಿ ಉದ್ಘಾಟನೆ ಸಮಾರಂಭದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ, ನಾನೇನಾದ್ರೂ ಮತ್ತೆ ಸಿಎಂ ಆಗಿದ್ದಿದ್ದರೆ ನಿಮ್ಮ ತಾಲೂಕು ಇಡೀ ರಾಜ್ಯಕ್ಕೆ ನಂಬರ್‌ ಒನ್‌ ಆಗಿರುತ್ತಿತ್ತು. ಅಷ್ಟೊಂದು ದುಡ್ಡು ಕೊಡುತ್ತಿದ್ದೆ ಎಂದರು. ಆಗ ಸೇರಿದ್ದ ಜನರು ನೀವೇ ಮುಂದಿನ ಸಿಎಂ ಆಗಬೇಕು ಎಂದರು. ಅದಕ್ಕುತ್ತರಿಸಿದ ಸಿದ್ದರಾಮಯ್ಯ,‘ನೋಡೋಣ ಮುಂದೇನು ಆಗುತ್ತದೋ ಗೊತ್ತಿಲ್ಲ, ನಾನು ಸಿಎಂ ಆಗಿದ್ದರೆ ಅದರ ಕಥೆನೇ ಬೇರೆ ಆಗಿರ್ತಿತ್ತು. ನಾವು ಮತ್ತೆ ಅಧಿಕಾರಕ್ಕೆ ಬರಲೇಬೇಕು. ನಾನು ಅಧಿಕಾರ ಸಿಕ್ಕಾಗ ಜನರ ಸೇವೆ ಮಾಡಿದ್ದೇನೆ ಎಂದರು.

 

ಇನ್ನು ‘ಇಲ್ಲಿ ಬಿಜೆಪಿಯವರೂ ಇದ್ದೀರಿ, ಸರಕಾರದ ಬಗ್ಗೆ ಹೇಳಿದರೆ ನಿಮಗೆ, ಚಡ್ಡಿಗಳಿಗೆ ಕೋಪ ಬರುತ್ತದೆ. ನಾನು ಸಿಎಂ ಇದ್ದಾಗ ದುಡ್ಡಿನ ಕೊರತೆಯಿರಲಿಲ್ಲ. ಈಗ ದುಡ್ಡೇ ಇಲ್ಲ ಎನ್ನುತ್ತಾರೆ. ಕೆರೂರುನಲ್ಲಿ ಕಾಲೇಜ್‌ ಆರಂಭಕ್ಕೆ ಭೂಮಿ ಪೂಜೆ ಮಾಡಿದ್ದೆ. ಆದರೆ ಮಿನಿಸ್ಟರ್‌ ಕಾಮಗಾರಿಗೆ ದುಡ್ಡಿಲ್ಲ ಎನ್ನುತ್ತಾರೆ. ದುಡ್ಡಿಲ್ಲ ಎಂದರೆ ನೀವ್ಯಾಕೆ ಮಿನಿಸ್ಟರ್‌ ಎಂದು ಪ್ರಶ್ನಿಸಿದೆ ಎಂದರು. ಈ ಮಧ್ಯೆ ಅಭಿಮಾನಿಯೊಬ್ಬ ಹೌದ್ದೋ ಹುಲಿಯಾ ಎಂದಾಗ ಸಿದ್ದರಾಮಯ್ಯ ಕೂಡ ನಕ್ಕರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *