ಬೆಂಗಳೂರಿನಲ್ಲಿ 1520 ಬೀದಿಬದಿ ವ್ಯಾಪಾರಿಗಳಿಗೆ ‘ಪಿಎಂ ಸ್ವ-ನಿಧಿ’ ಸಾಲ ಮಂಜೂರು

ಹೈಲೈಟ್ಸ್‌:

  • ‘ಪಿಎಂ ಸ್ವ-ನಿಧಿ’ ಯೋಜನೆಯ ಕಿರು ಸಾಲ ವಿತರಣಾ ಶಿಬಿರ ಆಯೋಜನೆ
  • ಬೆಂಗಳೂರಿನಲ್ಲಿ ಸುಮಾರು 1520 ಮಂದಿಗೆ ‘ಪಿಎಂ ಸ್ವ-ನಿಧಿ’ ಸಾಲ ಮಂಜೂರು
  • ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗುವ 10 ಸಾವಿರ ರೂ. ಕಿರು ಸಾಲ

ಬೆಂಗಳೂರು: ಬಿಬಿಎಂಪಿಯ ಕೇಂದ್ರ ಕಚೇರಿ ಮತ್ತು ಎಲ್ಲಾ ವಲಯಗಳ ಜಂಟಿ ಆಯುಕ್ತರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಪಿಎಂ ಸ್ವ-ನಿಧಿ’ ಯೋಜನೆಯ ಕಿರು ಸಾಲ ವಿತರಣಾ ಶಿಬಿರದಲ್ಲಿ4049 ಮಂದಿ ಬೀದಿಬದಿ ವ್ಯಾಪಾರಿಗಳು ಭಾಗವಹಿಸಿದ್ದರು.

ಈ ಪೈಕಿ 1520 ಮಂದಿಗೆ ಸಾಲ ಮಂಜೂರು ಮಾಡಲಾಯಿತು. ಬೀದಿಬದಿ ವ್ಯಾಪಾರಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ 10 ಸಾವಿರ ರೂ. ಕಿರು ಸಾಲ ನೀಡಲಾಗುತ್ತಿದೆ. ಈ ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವವರಿಗೆ ತ್ವರಿತವಾಗಿ ಸಾಲ ಸೌಲಭ್ಯ ಒದಗಿಸಲು ಪಾಲಿಕೆಯು ಶಿಬಿರಗಳನ್ನು ಏರ್ಪಡಿಸಿದೆ. ಶಿಬಿರದಲ್ಲಿನಾನಾ ಬ್ಯಾಂಕ್‌ಗಳ ಸಿಬ್ಬಂದಿ ಹಾಜರಿದ್ದರು. ಬೀದಿಬದಿ ವ್ಯಾಪಾರಿಗಳು ಕಿರು ಸಾಲಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ, ಮಂಜೂರಾತಿ ದೃಢೀಕರಣ ಪತ್ರವನ್ನು ನೀಡಿದರು.

ಪಿಎಂ ಸ್ವ ನಿಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಾ. 6 ಮತ್ತು ಮಾ. 13ರಂದು ಕೂಡ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ ನೀಡುತ್ತಿರುವ 10 ಸಾವಿರ ರೂ. ಕಿರು ಸಾಲದ ಮರುಪಾವತಿ ಅವಧಿಯು ಒಂದು ವರ್ಷದ್ದಾಗಿದೆ. ಸಾಲ ಪಡೆದ ವ್ಯಾಪಾರಿಗಳು ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಿದರೆ, ಬಡ್ಡಿಯಲ್ಲಿ ಶೇ 7ರಷ್ಟು ಸಬ್ಸಿಡಿ ನೀಡಲಾಗುತ್ತದೆ. ನಿಗದಿತ ಅವಧಿಯೊಳಗೆ ಮರುಪಾವತಿ ಮಾಡಿದವರ ಸಾಲದ ಅರ್ಹತೆಯನ್ನು ಹೆಚ್ಚಿಸಿ, ಬಳಿಕ 20 ಸಾವಿರ ರೂ.ಗಳವರೆಗೆ ಸಾಲ ಕೊಡಲಾಗುತ್ತದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *