ಬಿಎಸ್‌ವೈ ಬಜೆಟ್‌: ಅನ್ನಭಾಗ್ಯ, ಕ್ಷೀರಭಾಗ್ಯಕ್ಕೆ ಅನುದಾನವಿಲ್ಲ; ಇಂದಿರಾ ಕ್ಯಾಂಟೀನ್‌ಗೂ ನಯಾಪೈಸೆ ಕೊಟ್ಟಿಲ್ಲ..!

ಹೈಲೈಟ್ಸ್‌:

  • 2021-22ನೇ ಸಾಲಿನ ರಾಜ್ಯ ಬಜೆಟ್‌ನ್ನು ಸಿಎಂ ಬಿಎಸ್‌ವೈ ಮಂಡಿಸಿದ್ದಾರೆ.
  • ಆದರೆ ಸಿದ್ದರಾಮಯ್ಯ ಕಾಲದ ಜನಪರ ಯೋಜನೆಗಳಿಗೆ ಅನುದಾನ ನೀಡಿಲ್ಲ.
  • ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್‌ ಮುಂತಾದ ಯೋಜನೆಗೆ ವಿಶೇಷ ಕೊಡುಗೆ ನೀಡಿಲ್ಲ.

ಬೆಂಗಳೂರು: ಸಿಎಂ ಬಿಎಸ್‌ ಯಡಿಯೂರಪ್ಪ ಸೋಮವಾರ ಮಂಡಿಸಿರುವ ಬಜೆಟ್‌ನಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗೆ ವಿಶೇಷ ಕೊಡುಗೆ ನೀಡಿಲ್ಲ. ಅಲ್ಲದೇ ಕಾಂಗ್ರೆಸ್‌ ಸರಕಾರದ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೂ ನಯಾಪೈಸೆ ಕೊಟ್ಟಿಲ್ಲ.

ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ‘ಅನ್ನಭಾಗ್ಯ’ ಯೋಜನೆಯಡಿ ಬಿಪಿಎಲ್‌ ಪಡಿತರ ಚೀಟಿದಾರರಿಗೆ ನೀಡುತ್ತಿದ್ದ ತಲಾ 7 ಕೆ.ಜಿ ಅಕ್ಕಿಯನ್ನು ಬಿಜೆಪಿ ಸರಕಾರ 5ಕ್ಕೆ ಇಳಿಸಿತ್ತು. ಬಜೆಟ್‌ನಲ್ಲಿ ಏರಿಕೆ ಪ್ರಸ್ತಾಪಿಸಿಲ್ಲ. ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸಲು ನೀಡುತ್ತಿರುವ ಕ್ಷೀರಭಾಗ್ಯದ ಬಗ್ಗೆಯೂ ಪ್ರಸ್ತಾಪಿಸಿಲ್ಲ.

ಮುಚ್ಚುವ ಭೀತಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳು ಬಡವರು, ಕೂಲಿ ಕಾರ್ಮಿಕರು, ಆಟೊ, ಟ್ಯಾಕ್ಸಿ ಚಾಲಕರು, ಬೀದಿಬದಿ ವ್ಯಾಪಾರಿಗಳ ಹಸಿವು ನೀಗಿಸಲು ಎಲ್ಲ ತಾಲೂಕು, ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಬಜೆಟ್‌ನಲ್ಲಿಅನುದಾನವನ್ನೇ ಒದಗಿಸುತ್ತಿಲ್ಲ. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರವೂ ಅನುದಾನ ನೀಡಿರಲಿಲ್ಲ.

ಹೀಗಾಗಿ, ಕ್ಯಾಂಟೀನ್‌ಗಳನ್ನು ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರ ಸಂಸ್ಥೆಗಳಿಗೆ ಕೋಟ್ಯಂತರ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳು ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಸರಕಾರದಿಂದ ಬಜೆಟ್‌ನಲ್ಲಿ ಅನುದಾನ ನಿರೀಕ್ಷಿಸಿದ್ದವು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *