ಕಾಂಗ್ರೆಸ್ ನವರಿಗೆ ಸಿಡಿ ಮಾಡುವುದು ಬಿಟ್ರೆ ಬೇರೆ ಕೆಲಸ ಇಲ್ವಾ? – ಸಿದ್ದರಾಮಯ್ಯ

ಸಿ.ಡಿ ವಿಚಾರವಾಗಿ ಎಸ್​.ಟಿ ಸೋಮಶೇಖರ್​ ಹೇಳಿಕೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸಿ.ಡಿ ವಿಚಾರದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಕೆಲವೊಂದು ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ. ಹಾಗಾದ್ರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಏನಂದ್ರು..? ಈ ಸ್ಟೋರಿ ನೋಡಿ..!

ಇಂದು ಮಾದ್ಯಮದ ಜೊತೆ ಮಾತನಾಡಿದ ಸಚಿವ ಎಸ್​.ಟಿ ಸೋಮಶೇಖರ್​, ಸಿ.ಡಿ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಇಂತಹಾ ಮನೆಹಾಳು ಕೆಲ್ಸ್ ಮಾಡೋದು ಕಾಂಗ್ರೆಸ್​ ಪಕ್ಷದ ಕೆಲಸ ಎಂದು ಹೇಳಿದ್ದರು. ಇನ್ನು ಬಿಟಿವಿ ಜೊತೆ ಮಾತನಾಡಿರುವ ಸಿದ್ದರಾಮಯ್ಯ ಸಚಿವ ಎಸ್​.ಟಿ ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲ 20 ಎಸ್​.ಟಿ ಸೋಮಶೇಖರ್​ ಕಾಂಗ್ರೆಸ್​ನಲ್ಲಿದ್ದವರು ಹಾಗಾದ್ರೆ 20 ವರ್ಷದಿಂದ ಅವನೂ ಮನೆಹಾಳು ಕೆಲ್ಸ ಮಾಡ್ತಿದ್ನಾ ಎಂದು ಪ್ರಶ್ನಿಸಿದ್ದಾರೆ.

ಈ ಸಿ.ಡಿ ಕಾಂಗ್ರೆಸ್​ನವರೇ ಮಾಡಿದ್ದಾರೆ ಎಂದು ಎಸ್​.ಟಿ.ಎಸ್​ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಈ ವಿಚಾರ ನಂಗೊತ್ತಿಲ್ಲ, ಕಾಂಗ್ರೆಸ್​ನವರಿಗೆ ಬೇರೆ ಏನೂ ಕೆಲ್ಸ ಇಲ್ವಾ..? ಈ ಸಿ.ಡಿ ಕಾಂಗ್ರೆಸ್​ ಮಾಡಿಸಿದೆ ಎಂದಿಟ್ಟುಕೊಳ್ಳಿ, ಆ ವಿಡಿಯೋದಲ್ಲಿರುವ ಕೆಲ್ಸ ಮಾಡಿದವರು ಯಾರು..? ತಪ್ಪು ಮಾಡಿಲ್ಲ ಎಂದಾದರೆ ಕೋರ್ಟಿಗೆ ಹೋಗಿ ಸ್ಟೇ ತಂದವರು ಯಾರು..? ಭಯ ಬರಲು ಕಾರಣವೇನು..? ಇವರ ಬಗ್ಗೆಯೂ ಸಿ.ಡಿ ಇದ್ಯೋ ಏನೋ ಎಂದಿದ್ದಾರೆ. ಬಾಂಬೆ ಟೀಂ ಅನ್ನು ಕಾಂಗ್ರೆಸ್ ಟಾರ್ಗೆಟ್​ ಮಾಡ್ತಿದ್ಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಕಾಂಗ್ರೆಸ್​ನವರಿಗೆ ಬೇರೆ ಏನು ಕೆಲ್ಸ ಇಲ್ವಾ..? ನಾವು ಯಾರನ್ನೂ ಟಾರ್ಗೆಟ್​ ಮಾಡುತ್ತಿಲ್ಲ ಎಂದು ಖಡಕ್ಕಾಗಿಯೇ ಉತ್ತರ ನೀಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *