ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಯುವತಿ ಅರೆಸ್ಟ್ ..!
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧಿಸಿದಂತೆ ಎಸ್ಐಟಿ ತಂಡ ತನಿಖೆ ನಡೆಸಿದ್ದು, ಈ ಕುರಿತು ಓರ್ವ ಯುವತಿಯನ್ನ ವಶಕ್ಕೆ ಪಡೆದಿದ್ದಾರೆ.ಯುವತಿ ಜೊತೆ ಇಬ್ಬರು ವ್ಯಕ್ತಿಗಳನ್ನು ಸಹ ಎಸ್ಐಟಿ ತಂಡ ವಶಕ್ಕ ಪಡೆದಿದ್ದಾರೆ. ಸಿಡಿ ವಿಚಾರವಾಗಿ ವ್ಯಕ್ತಿ ಹಾಗೂ ಯುವತಿಯನ್ನ ಎಸ್ಐಟಿ ತಂಡ ವಿಚಾರಣೆ ನಡೆಸಿದ್ದಾರೆ.
ಈ ವರೆಗೆ ಸಿಡಿ ಕೇಸ್ ಬಗ್ಗೆ ಎಫ್ಐಆರ್ ದಾಖಲಾಗಿಲ್ಲ ಹೀಗಾಗಿ, ಫೀಲ್ಡ್ಗೆ ಇಳಿಯೋ ಎಸ್ಐಟಿ, ಸಿಡಿಯ ಅಸಲಿಯತ್ತಿನ ಬಗ್ಗೆ ಎಸ್ಐಟಿ ತನಿಖೆ ನೆಡಿಸಿ , ಈ ಪ್ರಾಥಮಿಕ ತನಿಖೆಯನ್ನ ಸರ್ಕಾರಕ್ಕೆ ಸಲ್ಲಿಸಬೇಕು. ನಂತರ ತನಿಖೆಗೆ ಭಾಗವಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಿ, ನಂತರ ನಾಪತ್ತೆಯಾದ ಯುವತಿಯನ್ನ ಪತ್ತೆ ಮಾಡಿ , ಯುವತಿ ಹಿಂದೆ ಯಾರಿದ್ದಾರೆ ಎಂಬುದನ್ನ ಪತ್ತೆ ಮಾಡಿಲಿದೆ. ಅವರ ಹೇಳಿಕೆ ನಂತ್ರ , ಎಫ್ಎಸ್ಎಲ್ನಿಂದ ಸಿಡಿ ಬಗ್ಗೆ ವರದಿ ಪಡೆಯಲಿರೋ ಎಸ್ಐಟಿ, ಸಿಡಿ ವೀಕ್ಷಿಸಿ , ನೈಜತೆ , ಸತ್ಯಾಸತ್ಯತೆಯ ಶೋಧನೆ ನಡೆಸಿ. ಸಿಡಿ ವೀಕ್ಷಣೆ ಬಳಿಕ ಸಿಕ್ಕ ಮಾಹಿತಿ ಆಧರಿಸಿ ಮುಂದಿನ ತಿರುವು ಪಡೆದುಕೊಳ್ಳುವುದಾಗಿ ಈ ಹಿಂದೆ ತಿಳಿದುಬಂದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಬೆಳೆವಣಿಗೆ ನಡೆದಿದ್ದು, ಈ ವರೆಗೆ ಮೂವರನ್ನ ಎಸ್ಐಟಿ ವಿಶೇಷ ತಂಡ ವಶಕ್ಕೆ ಪಡೆದಿದೆ. ಇಬ್ಬರು ಯುವಕರು ಹಾಗೂ ಯುವತಿಯನ್ನ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.ಚಿಕ್ಕಮಗಳೂರಿನಲ್ಲಿ ಒಬ್ಬ ವ್ಯಕ್ತಿಯನ್ನ ಹಾಗೂ ಬೆಂಗಳೂರಿನಲ್ಲಿ ಒಬ್ಬ ವ್ಯಕ್ತಿ ಹಾಗೂ ಯುವತಿಯನ್ನ ಎಸ್ಐಟಿ ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಆಡುಗೋಡಿಯಲ್ಲಿ ವಿಚಾರಣೆ ನಡೆಸಿದ್ದಾರೆ. ದಿನೇಶ್ ಕಲ್ಲಹಳ್ಳಿಗೆ ಸಿಡಿ ತಲುಪಿಸಿದ ವ್ಯಕ್ತಿ ಹಾಗೂ ಮತ್ತೊಬ್ಬ ಆ ವಿಡಿಯೋದಲ್ಲಿದ್ದ ಯುವತಿಯ ಜೊತೆ ಸಂಪರ್ಕದಲ್ಲಿ ಇದ್ದ ವ್ಯಕ್ತಿ ಅಂತ ತಿಳಿದುಬಂದಿದೆ.