OxyBus service : ಕೊರೋನಾ ತುರ್ತು ಚಿಕಿತ್ಸೆಗಾಗಿ ‘ಆಕ್ಸಿಬಸ್’ಗೆ ಚಾಲನೆ ನೀಡಿದ ಸಿಎಂ ಬಿಎಸ್ವೈ!
ಬೆಂಗಳೂರು : ತುರ್ತು ಸಂದರ್ಭಗಳಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ‘ಆಕ್ಸಿಬಸ್’ ಸೇವೆಗೆ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಚಾಲನೆ ನೀಡಿದ್ದಾರೆ.
‘ಆಕ್ಸಿಬಸ್’ (OxyBus service)ಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿಎಂ ಯಡಿಯೂರಪ್ಪ, ತಾತ್ಕಾಲಿಕವಾಗಿ ಆಕ್ಸಿಬಸ್ ಗಳು 8 ರೋಗಿಗಳಿಗೆ ನೆರವಾಗಲಿದೆ. ಅಂತಹ 20 ಬಸ್ ಗಳನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಚಿಕಿತ್ಸಾ ಕೇಂದ್ರಗಳ ಬಳಿ ಇರಿಸಲಾಗುವುದು ಅಲ್ಲದೆ ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯ ಬಸ್ ಗಳನ್ನು ಇರಿಸಲಾಗುವುದು ಎಂದು ಹೇಳಿದ್ದಾರೆ.
ಗಂಭೀರ ರೋಗಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ಪಡೆಯಲು ದಾರಿ ಮಾಡಿಕೊಡಿ ಅನಗತ್ಯವಾಗಿ ಆಸ್ಪತ್ರೆಗಳಲ್ಲಿ ಉಳಿದುಕೊಳ್ಳಬೇಡಿ ಕೋವಿಡ್ ರೋಗಿಗಳು ಮನೆಗೆ ಹೋಗಿ ಎಂದು ಸಿಎಂ(BS Yediyurappa) ಮನವಿ ಮಾಡಿದ್ದಾರೆ.
Launched the innovative OxyBus service to aid Covid-19 patients during emergencies. Each makeshift OxyBus supports upto 8 patients. 20 such units will be set up near Govt Hospitals and Triage Centers in Bengaluru, and more units will be set up across the state. pic.twitter.com/KWQdCMCFUU
— B.S. Yediyurappa (@BSYBJP) May 11, 2021
332 ರೋಗಿಗಳು(Covid-19 Patients) 30 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾದ ಅವಶ್ಯಕತೆ ಏನು? ಆಸ್ಪತ್ರೆಯಲ್ಲಿ 503 ರೋಗಿಗಳು 20 ದಿನಗಳಿಂದ ಇದ್ದಾರೆ. ಈ ರೀತಿ ಅನಗತ್ಯವಾಗಿ ಆಸ್ಪತ್ರೆಯಲ್ಲಿ ಉಳಿದುಕೊಂಡಿರುವ ಜನರು ಮನೆಗೆ ಮರಳಬೇಕು” ಎಂದು ಅವರು ಹೇಳಿದರು.