ಕರ್ನಾಟಕದಲ್ಲಿ ಎಲ್ಲವೂ ಕಮಿಷನ್ ಲೆಕ್ಕಾಚಾರ, ಉನ್ನತ ಮಟ್ಟದ ತನಿಖೆಯಾಗಬೇಕು..!
ಕರ್ನಾಟಕದಲ್ಲಿ ಎಲ್ಲ ವಿಚಾರದಲ್ಲಿ ಕಮಿಷನ್ ವ್ಯವಹಾರ ಆಗುತ್ತಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಸಿಎಂ ಯಡಿಯೂರಪ್ಪನವರಿಗೆ ಒತ್ತಾಯ ಮಾಡುತ್ತೇನೆ. ಯಾರೇ ಹೊರಗಡೆಯಿಂದ ಬಂದರೂ ಟೆಂಡರ್ ಗೂ ಮೊದಲು ಕಮಿಷನ್ ಕೇಳ್ತಾರೆ. ಇದು ನನಗೆ ಇರುವ ಅಧಿಕೃತ ಮಾಹಿತಿ. ಈ ವಿಚಾರದಲ್ಲಿ ಉನ್ನತ ಮಟ್ಟದ ತನಿಖೆ ಆಗಬೇಕು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

